ವಿಟ್ಲ: ಪೋಷಣಾ ಅಭಿಯಾನದ ಪ್ರಯುಕ್ತ ಗಿಡನೆಡುವ ಕಾರ್ಯಕ್ರಮವನ್ನು ಅ.12 ರಂದು ಪಡಿಬಾಗಿಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಸದಸ್ಯರು ಸೇರಿ ಗಿಡಗಳನ್ನು ನೆಟ್ಟರು.ಈ ಸಂದರ್ಭದಲ್ಲಿ ಪೋಷಣಾ ಅಭಿಯಾನದ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ. ಅಧ್ಯಕ್ಷ ಬಾಲಕೃಷ್ಣ ಕಾರಂತ, ಉಪಾಧ್ಯಕ್ಷೆ ಪದ್ಮಾವತಿ, ಸದಸ್ಯರಾದ ಜಿನಚಂದ್ರ ಜೈನ್, ಜಗಜ್ಜೀವನ್ ರಾಮ್, ಜನಾರ್ಧನ, ನರಸಿಂಹ ಬಲ್ಲಾಳ್, ರಾಜಗೋಪಾಲಜೋಷಿ, ಶಶಿಕಲಾ, ಜಯಶ್ರೀ, ವಿಶಾಲಾಕ್ಷಿ , ಹಾಗೂ ಶಿಕ್ಷಕರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.