ಬೆಳ್ತಂಗಡಿ : ಕೆಎಂಸಿ ಹೃದ್ರೋಗ ತಜ್ಞರಾದ ಡಾ.ಪದ್ಮನಾಭ ಕಾಮತ್ ರವರು ಸ್ಥಾಪಿಸಿದ ಕಾರ್ಡಿಯಾಲಜಿ ಅಟ್ ಡೋರ್ ಸ್ಟೆಪ್ಸ್ (CAD)ಫೌಂಡೇಶನ್ ಎಂಬ ಯೋಜನೆಯನ್ವಯ ಅರಸಿನಮಕ್ಕಿ ಗ್ರಾಮದ ಶ್ರೀದುರ್ಗಾ ಕ್ಲಿನಿಕ್ ನ ಡಾ.ಹರ್ಷಿತಾ ಸುವಿನ್ ರವರಿಗೆ ಇಸಿಜಿ ಯಂತ್ರವನ್ನು ಅ.18 ರಂದು ಹಸ್ತಾಂತರಿಸಲಾಯಿತು.
ಡಾ ಹರ್ಷಿತಾ ರವರು “ಡಾ ಪದ್ಮನಾಭ ಕಾಮತ್ ರವರ ಜನಪರ ಸೇವೆಗೆ ನಿಸ್ವಾರ್ಥ ಸೇವೆಗೆ ನಮ್ಮಂತ ವೈದ್ಯರು ಚಿರಋಣಿ,ಈ ಸೇವೆ ನಮ್ಮಂತ ಗ್ರಾಮೀಣ ಪ್ರದೇಶದ ವೈದ್ಯರಿಗೆ ಕಲ್ಪಿಸಿಕೊಟ್ಟು ಗ್ರಾಮೀಣ ಜನರಿಗೆ ಉತ್ತಮ ರೀತಿ ಸಹಕಾರಿ ಆಗಿ ಮೂಡಲಿ”ಎಂದರು
ಹಸ್ತಾಂತರ ಕಾರ್ಯಕ್ರದಲ್ಲಿ CAD ಫೌಂಡೇಶನ್ ನ PRO ಆಗಿರುವ ಪ್ರದೀಪ್ ನಾಯಕ್ ಹಾಗೂ ಊರಿನ ಗಣ್ಯರಾದ ವರದಾಶಂಕರ್ ದಾಮ್ಲೆ ,ರಾಜು ಕೆ ಸಾಲಿಯಾನ್ ,ಮುರಳೀಧರ್ ಶೆಟ್ಟಿಗಾರ್ ,ಕರುಣಾಕರ್ ಶಿಶಿಲ ,ರಾಜಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.