ಪುತ್ತೂರು: ಸಂಜೆ ವೇಳೆ ವಾಕಿಂಗ್ ಹೋಗುತ್ತಿದ್ದ ದಂಪತಿಗಳಿಗೆ ಆಟೋ ರಿಕ್ಷಾ ಗುದ್ದಿ ಗಂಭೀರ ಗಾಯಗೊಂಡ ಘಟನೆ ಮೊಡಂಕಾಪುವಿನಲ್ಲಿ ನಡೆದಿದೆ.
ಗಾಯಗೊಂಡವರರನ್ನು ಮಾಜಿ ಸೈನಿಕ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಬಾಲಕೃಷ್ಣ ವಿ.ಎಸ್. ಮತ್ತು ಅವರ ಪತ್ನಿ ಎಂದು ಗುರುತಿಸಲಾಗಿದೆ.
ನ.5 ರಂದು ಬಾಲಕೃಷ್ಣ ವಿ.ಎಸ್. ಮತ್ತು ಅವರ ಪತ್ನಿ ವಾಕಿಂಗ್ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದು ಆಟೋ ರಿಕ್ಷಾ ಡಿಕ್ಕಿ ಹೊಡೆದಿದ್ದು, ಅಪಘಾತದಿಂದಾಗಿ ಬಾಲಕೃಷ್ಣ ರವರ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು, ಹೆಂಡತಿ ಸಣ್ಣ ಪುಟ್ಟ ಗಾಯವಾಗಿದೆ. ಇಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.