Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ನಮ್ಮನ್ನು ಬಳಸಿಕೊಂಡಿದೆ; ನಾವು ಕರೆಯಲೇ ಇಲ್ಲ: ಫಲಾನುಭವಿಗಳ ಆರೋಪ..!!

    ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ನಮ್ಮನ್ನು ಬಳಸಿಕೊಂಡಿದೆ; ನಾವು ಕರೆಯಲೇ ಇಲ್ಲ: ಫಲಾನುಭವಿಗಳ ಆರೋಪ..!!

    ಕಾಂತಾರ ʻಕನಕವತಿʼ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್..!!

    ಕಾಂತಾರ ʻಕನಕವತಿʼ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್..!!

    ಗುರುವಾಯನಕೆರೆ: ಪೆರ್ನೆ ನಿವಾಸಿ ಯತೀಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ..!!

    ಗುರುವಾಯನಕೆರೆ: ಪೆರ್ನೆ ನಿವಾಸಿ ಯತೀಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ..!!

    ಪೆರ್ನೆ ನಿವಾಸಿ ಯತೀಶ್ ಮೃತದೇಹ ಗುರುವಾಯನಕೆರೆ ಬಳಿ ಪತ್ತೆ : ಕೊಲೆ ಶಂಕೆ..!!

    ಪೆರ್ನೆ ನಿವಾಸಿ ಯತೀಶ್ ಮೃತದೇಹ ಗುರುವಾಯನಕೆರೆ ಬಳಿ ಪತ್ತೆ : ಕೊಲೆ ಶಂಕೆ..!!

    ಬಂಟ್ವಾಳ: ಬಿಯರ್ ಬಾಟಲ್ ನಿಂದ ಇರಿದು ಚಿಕ್ಕಪ್ಪನ ಕೊಲೆ: ಆರೋಪಿ ಅರೆಸ್ಟ್..!!

    ಬಂಟ್ವಾಳ: ಬಿಯರ್ ಬಾಟಲ್ ನಿಂದ ಇರಿದು ಚಿಕ್ಕಪ್ಪನ ಕೊಲೆ: ಆರೋಪಿ ಅರೆಸ್ಟ್..!!

    ಪುತ್ತೂರು: ಹೋಟೆಲ್ ನಡೆಸುತ್ತಿದ್ದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!

    ಪುತ್ತೂರು: ಹೋಟೆಲ್ ನಡೆಸುತ್ತಿದ್ದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ನಮ್ಮನ್ನು ಬಳಸಿಕೊಂಡಿದೆ; ನಾವು ಕರೆಯಲೇ ಇಲ್ಲ: ಫಲಾನುಭವಿಗಳ ಆರೋಪ..!!

    ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ನಮ್ಮನ್ನು ಬಳಸಿಕೊಂಡಿದೆ; ನಾವು ಕರೆಯಲೇ ಇಲ್ಲ: ಫಲಾನುಭವಿಗಳ ಆರೋಪ..!!

    ಕಾಂತಾರ ʻಕನಕವತಿʼ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್..!!

    ಕಾಂತಾರ ʻಕನಕವತಿʼ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್..!!

    ಗುರುವಾಯನಕೆರೆ: ಪೆರ್ನೆ ನಿವಾಸಿ ಯತೀಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ..!!

    ಗುರುವಾಯನಕೆರೆ: ಪೆರ್ನೆ ನಿವಾಸಿ ಯತೀಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ..!!

    ಪೆರ್ನೆ ನಿವಾಸಿ ಯತೀಶ್ ಮೃತದೇಹ ಗುರುವಾಯನಕೆರೆ ಬಳಿ ಪತ್ತೆ : ಕೊಲೆ ಶಂಕೆ..!!

    ಪೆರ್ನೆ ನಿವಾಸಿ ಯತೀಶ್ ಮೃತದೇಹ ಗುರುವಾಯನಕೆರೆ ಬಳಿ ಪತ್ತೆ : ಕೊಲೆ ಶಂಕೆ..!!

    ಬಂಟ್ವಾಳ: ಬಿಯರ್ ಬಾಟಲ್ ನಿಂದ ಇರಿದು ಚಿಕ್ಕಪ್ಪನ ಕೊಲೆ: ಆರೋಪಿ ಅರೆಸ್ಟ್..!!

    ಬಂಟ್ವಾಳ: ಬಿಯರ್ ಬಾಟಲ್ ನಿಂದ ಇರಿದು ಚಿಕ್ಕಪ್ಪನ ಕೊಲೆ: ಆರೋಪಿ ಅರೆಸ್ಟ್..!!

    ಪುತ್ತೂರು: ಹೋಟೆಲ್ ನಡೆಸುತ್ತಿದ್ದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!

    ಪುತ್ತೂರು: ಹೋಟೆಲ್ ನಡೆಸುತ್ತಿದ್ದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಹಿರಿಯ ಯಕ್ಷಗಾನ ಕಲಾವಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಧರ್ ಭಂಡಾರಿ ಪುತ್ತೂರು ಇನ್ನಿಲ್ಲ

February 19, 2021
in ಪುತ್ತೂರು
0
ಹಿರಿಯ ಯಕ್ಷಗಾನ ಕಲಾವಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಧರ್ ಭಂಡಾರಿ ಪುತ್ತೂರು ಇನ್ನಿಲ್ಲ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಬಾನಂಗಳದ ಧ್ರುವತಾರೆ..ಧರ್ಮಸ್ಥಳ ಮೇಳದ ಯಕ್ಷಗಾನ ಮೇಳದ ಹಿರಿಯ ಕಲಾವಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಂಡುವೇಷದ ಗಂಡುಗಲಿ ದಿಗಿಣ ವೀರ ಡಾ.ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ.

Advertisement
Advertisement
Advertisement

ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಅನಿಲ ಹಾಗೂ ಪುತ್ರ ದೇವಿ ಪ್ರಕಾಶ್ರನ್ನು ಅಗಲಿದ್ದಾರೆ.

Advertisement

೧೯೪೫ ನೇ ಇಸವಿಯಲ್ಲಿ ಜನನ. ತಂದೆ ಶೀನಪ್ಪ ಭಂಡಾರಿ ಹಾಗೂ ತಾಯಿ ಸುಂದರಿಯವರ ಸುಪುತ್ರ. ಇವರ ತಂದೆ, ತಾತ, ಮಾವಂದಿರೆಲ್ಲರೂ ಯಕ್ಷಗಾನ ಪರಂಪರೆಗೆ ಸೇರಿದವರು. ಈ ಕಲೆ ಬಳುವಳಿಯಾಗಿ ಪಡೆದ ಡಾ. ಶ್ರೀಧರ ಭಂಡಾರಿಗಳು ತಮ್ಮ ಜೀವನವನ್ನು ಇದೇ ಕ್ಷೇತ್ರಕ್ಕೆ ಮುಡಿಪಾಗಿಟ್ಟವರು.

ಯಕ್ಷಗಾನದ ಮೂಲಪಾಠವನ್ನು ತಂದೆಯವರಿಂದ ಕಲಿತು ನಂತರ ಕುರಿಯ ವಿಠ್ಠಲ ಶಾಸ್ತ್ರಿಗಳು, ಹೊಸ ಹಿತ್ಲು ಮಾಲಿಂಗ ಭಟ್ಟರು ಮೊದಲಾದ ದಿಗ್ಗಜರಿಂದ ಯಕ್ಷಕಲೆಯ ಮತ್ತಷ್ಟುನ್ನು ಕಲಿತರು. ಗೋವಿಂಧ ಭಟ್ಟರು, ನಾರಾಯಣ ಭಟ್ಟರು ಹೀಗೆ ಹಲವು ಹಿರಿಯ ಕಲಾವಿದರ ಗರಡಿಯಲ್ಲಿ ಪಳಗಿ ಯಕ್ಷ ಕಲೆಯನ್ನು ಮೈಗೂಡಿಸಿಕೊಂಡರು ಡಾ. ಶ್ರೀಧರ ಭಂಡಾರಿಗಳು.ಯಕ್ಷಗಾನದ ಜೊತೆಗೆ ದಿ| ಕುದ್ಕಾಡಿ ವಿಶ್ವನಾಥ ರೈಗಳಿಂದ ಭರತನಾಟ್ಯವನ್ನೂ ಕಲಿತು, ಕುರಿಯ ವಿಠ್ಠಲ ಶಾಸ್ತ್ರಿಗಳಿಂದ ಯಕ್ಷಗಾನ ಅಭಿವ್ಯಕ್ತಿಯ ಆಂಗಿಕ ಅಭಿನಯದ ಪಾಠ ಹೇಳಿಸಿಕೊಂಡಿದ್ದಾರೆ.

ಹೀಗೇ ಯಕ್ಷಕಲಾವಿದರೊಂದಿಗೆ ತಿರುಗಾಟ ಮಾಡುತ್ತಲೇ ಯಕ್ಷಕಲೆಯನ್ನು ಅಭ್ಯಾಸ ಮಾಡಿದ ಡಾ. ಶ್ರೀಧರ ಭಂಡಾರಿಗಳು ೧೯೬೦ನೇ ಇಸವಿಯಲ್ಲಿ ಯಕ್ಷಕ್ಷೇತ್ರಕ್ಕೆ ಅಧಿಕೃತ ಪಾದಾರ್ಪಣೆ ಮಾಡಿದರು.ಸುಮಾರು ೨-೩ ವರ್ಷಗಳ ಕಾಲ ತಮ್ಮ ತಂದೆಯವರೊಡನೆ ಸುಬ್ರಮ್ಮಣ್ಯ ಮೇಳ, ಬಳ್ಳಂಬೆಟ್ಟು ಮೇಳಗಳಲ್ಲಿ ತಿರುಗಾಟ ಮಾಡಿದರು. ಅದು ಯಕ್ಷಗಾನ ಬಹಳ ಬಡವಾಗಿದ್ದ ಕಾಲ. ದೊಂದಿ ಬೆಳಕು, ಗ್ಯಾಸ್ ಲೈಟ್‌ಗಳ ಬೆಳಕಿನಲ್ಲೇ ಯಕ್ಷಗಾನ ನಡೆಯುತ್ತಿತ್ತು. ಪ್ರಯಾಣಕ್ಕೂ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ, ಯಕ್ಷಗಾನದ ವೇಷ-ಭೂಷಣ, ಮೇಳದ ಪರಿಕರಗಳೊಡನೆ ಒಂದೂರಿನಿಂದ ಮತ್ತೊಂದೂರಿಗೆ ನಡೆದೇ ಸಾಗಿ ಯಕ್ಷಗಾನ ಪ್ರದರ್ಶನ ಮಾಡುತ್ತಿದ್ದರು.ದಕ್ಷಿಣ ಕನ್ನಡದ ಹೆಗ್ಗುರುತಾಗಿರುವ ಯಕ್ಷಕಲೆಯನ್ನು ಡಾ. ಶ್ರೀಧರ ಭಂಡಾರಿಯಾದಿಯಾಗಿ ಅವರ ಒಡನಾಡಿಗಳು ಬೆಳೆಸಿಕೊಂಡು ಬಂದರು.

ಭವಿಷ್ಯದಲ್ಲಾದರೂ ಯಕ್ಷಕಲೆಯ ಶ್ರೀಮಂತಿಕೆ ನಮ್ಮನ್ನು ಕಾಪಾಡಬಹುದು ಎಂದು ನಂಬಿ ಪ್ರತಿದಿನವೂ ಸಾಧನೆ ಮಾಡಿ ಈ ಕಲೆಯನ್ನು ಉಳಿಸಿಕೊಂಡು ಬಂದ ಹಲವು ಹಿರಿಯ ತಲೆಮಾರಿನ ಕಲಾವಿದರಲ್ಲಿ ಶ್ರೀಧರ ಭಂಡಾರಿಗಳೂ ಸೇರಿದ್ದಾರೆ. ರಂಗದಲ್ಲಿ ತಮ್ಮ ಪ್ರತಿಭೆಯನ್ನು ಬಳಸಿಕೊಂಡು ಮಾಡುವ ಸಾಧನೆಗೆ ತಕ್ಕ ಪ್ರತಿಫಲ ಒಂದಲ್ಲಾ ಒಂದು ದಿನ ಸಿಕ್ಕೇ ಸಿಗುತ್ತದೆ ಎಂದು ನಂಬಿದ್ದ ಕಲಾವಿದ ವರ್ಗ ಅಂದು ಬಹಳ ದೊಡ್ಡ ಪ್ರಮಾಣದಲ್ಲಿತ್ತು.

ಯಕ್ಷಗಾನ ಕ್ಷೇತ್ರದಲ್ಲಿ ಅಭಿಮನ್ಯು, ಬಬ್ರುವಾಹನ, ಕೃಷ್ಣ, ಭಾರ್ಗವ ಹೀಗೆ ಹಲವು ಪಾತ್ರಗಳಿಗೆ ಮಾರ್ಗದರ್ಶಕ ರೂಪವಾಗಿದ್ದ ಕುರಿಯ ವಿಠ್ಠಲ ಶಾಸ್ತ್ರಿಗಳು, ಕೃಷನ್ ಬಾಬು ಹೀಗೆ ಹಲವು ಹಿರಿಯರ ಅಭಿವ್ಯಕ್ತಿಯನ್ನು ಅಳವಡಿಸಿಕೊಂಡು ಬೆಳೆಸಿದವರಲ್ಲಿ ಶ್ರೀಧರ ಭಂಡಾರಿಯವರು ಪ್ರಮುಖರು. ಮುಂದಿನ ತಲೆಮಾರಿನ ಕಲಾವಿದರಿಗೆ ಕುರಿಯ ವಿಠ್ಠಲ ಶಾಸ್ತ್ರಿಗಳಂತೆ ಆದರ್ಶ ಪ್ರಾಯರಾಗಿ ಬೆಳೆಯಬೇಕು ಎಂಬ ಹೆಬ್ಬಕೆಯಿಂದ ಯಕ್ಷಸೇವೆ ಮಾಡಿದ್ದಾರೆ ೧೯೬೭ ರಿಂದಲೇ ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ, ಜೊತೆಗೆ ದುಬೈ, ಬೆಹರೈನ್, ಲಂಡನ್, ಜಪಾನ್, ಟೊಕಿಯೋ, ಅಮೇರಿಕದಂತಹ ದೇಶಗಳಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿದ ಹೆಮ್ಮೆ ಇವರದ್ದು.

. ಯಕ್ಷಲೋಕದಲ್ಲಿ ಡಾ. ಶ್ರೀಧರ ಭಂಡಾರಿಯವರಿಗೆ ಅವರದ್ದೇ ಆದ ಹೆಸರಿದೆ. ಮುಂದೆ ತಮ್ಮದೇ ಆದ ಯಕ್ಷಗಾನ ತಂಡ ಕಟ್ಟಿಕೊಂಡು ಮೈಸೂರು, ಬೆಂಗಳೂರು, ಮುಂಬೈ ಜೊತೆಗೆ ವಿದೇಶಗಳಿಗೂ ಹೋಗಿ ಪ್ರದರ್ಶನ ಕೊಟ್ಟು ಬಂದ ಹೆಗ್ಗಳಿಕೆ ಇವರಿಗಿದೆ.ಡಾ. ಶ್ರೀಧರ ಭಂಡಾರಿಯವರು ಯಕ್ಷಗಾನಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ, ಮುಂಬೈ ಬಂಟರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿವೆ. ಶಿವರಾಮ ಕಾರಂತ ಪ್ರಶಸ್ತಿಯೂ ಬಂದಿದೆ. ಜೊತೆಗೆ ಉಡುಪಿ ಪೇಜಾವರ ಶ್ರೀ, ಎಡನೀರು ಸ್ವಾಮಿಗಳು, ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆಯವರಿಂದಲೂ ಗೌರವ-ಪ್ರಶಸ್ತಿಗಳು ಸಂದಿವೆ.

Previous Post

ಹಿಂದೂ ಜಾಗರಣಾ ವೇದಿಕೆ ವೀರಮಂಗಲ ವತಿಯಿಂದ ಮನೆ ಮನಗಳಿಗೂ ಭಗವದ್ಗೀತೆ ಅಭಿಯಾನ

Next Post

ಗೆಜ್ಜೆಗಿರಿ ಕ್ಷೇತ್ರದಲ್ಲಿ ಹಲ್ಲೆ ಬೆದರಿಕೆ ತನ್ನ ವಿರುದ್ಧ ಸುಳ್ಳು ಆರೋಪ – ಜಯಂತ ನಡುಬೈಲು ಸ್ಪಷ್ಟನೆ

OtherNews

ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ನಮ್ಮನ್ನು ಬಳಸಿಕೊಂಡಿದೆ; ನಾವು ಕರೆಯಲೇ ಇಲ್ಲ: ಫಲಾನುಭವಿಗಳ ಆರೋಪ..!!
Featured

ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ನಮ್ಮನ್ನು ಬಳಸಿಕೊಂಡಿದೆ; ನಾವು ಕರೆಯಲೇ ಇಲ್ಲ: ಫಲಾನುಭವಿಗಳ ಆರೋಪ..!!

June 2, 2026
ಪೆರ್ನೆ ನಿವಾಸಿ ಯತೀಶ್ ಮೃತದೇಹ ಗುರುವಾಯನಕೆರೆ ಬಳಿ ಪತ್ತೆ : ಕೊಲೆ ಶಂಕೆ..!!
Featured

ಪೆರ್ನೆ ನಿವಾಸಿ ಯತೀಶ್ ಮೃತದೇಹ ಗುರುವಾಯನಕೆರೆ ಬಳಿ ಪತ್ತೆ : ಕೊಲೆ ಶಂಕೆ..!!

June 1, 2026
ಪುತ್ತೂರು: ಹೋಟೆಲ್ ನಡೆಸುತ್ತಿದ್ದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!
Featured

ಪುತ್ತೂರು: ಹೋಟೆಲ್ ನಡೆಸುತ್ತಿದ್ದ ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು..!!

June 1, 2026
ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ
Featured

ವಿಟ್ಲ: ಕೋಳಿ ಅಂಕದ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ..!!

May 31, 2026
ಪುತ್ತೂರು: ಭಾಸ್ಕರ್ ಆಚಾರ್ಯ ಹೃದಯಾಘಾತದಿಂದ ನಿಧನ…!!
Featured

ಪುತ್ತೂರು: ಭಾಸ್ಕರ್ ಆಚಾರ್ಯ ಹೃದಯಾಘಾತದಿಂದ ನಿಧನ…!!

May 31, 2026
ಬೆಳ್ಳಾರೆ: ಅಕ್ರಮ ಗೋವಧೆ: ಮೂವರು ಆರೋಪಿಗಳ ಬಂಧನ..!!
Featured

ಬೆಳ್ಳಾರೆ: ಅಕ್ರಮ ಗೋವಧೆ: ಮೂವರು ಆರೋಪಿಗಳ ಬಂಧನ..!!

May 31, 2026

Leave a Reply Cancel reply

Your email address will not be published. Required fields are marked *

Recent News

ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ನಮ್ಮನ್ನು ಬಳಸಿಕೊಂಡಿದೆ; ನಾವು ಕರೆಯಲೇ ಇಲ್ಲ: ಫಲಾನುಭವಿಗಳ ಆರೋಪ..!!

ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ನಮ್ಮನ್ನು ಬಳಸಿಕೊಂಡಿದೆ; ನಾವು ಕರೆಯಲೇ ಇಲ್ಲ: ಫಲಾನುಭವಿಗಳ ಆರೋಪ..!!

June 2, 2026
ಕಾಂತಾರ ʻಕನಕವತಿʼ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್..!!

ಕಾಂತಾರ ʻಕನಕವತಿʼ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್..!!

June 2, 2026
ಗುರುವಾಯನಕೆರೆ: ಪೆರ್ನೆ ನಿವಾಸಿ ಯತೀಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ..!!

ಗುರುವಾಯನಕೆರೆ: ಪೆರ್ನೆ ನಿವಾಸಿ ಯತೀಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ..!!

June 1, 2026
ಹೊಸ ಪಕ್ಷ ಸ್ಥಾಪಿಸುತ್ತಾರಾ ಅಣ್ಣಾಮಲೈ..?

ಹೊಸ ಪಕ್ಷ ಸ್ಥಾಪಿಸುತ್ತಾರಾ ಅಣ್ಣಾಮಲೈ..?

June 1, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.