ಮೃತ್ಯುಂಜಯ ದೇವಸ್ಥಾನ ಮುಂಡೂರು ಜಾತ್ರೋತ್ಸವದ ಅಂಗವಾಗಿ ಊರವರಿಂದ ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮವು ನಡೆಯಿತು.ಊರ ಪರವೂರ ಭಕ್ತಾದಿಗಳು ಸೇರಿಕೊಂಡು ಅಕ್ಕಿ, ತರಕಾರಿ, ತೆಂಗಿನಕಾಯಿ, ಬಾಳೆಗೊನೆ,ಹಿಂಗಾರ,ಕಬ್ಬು ಹಾಗೂ ಇತರೆ ಅವಶ್ಯಕ ಸಾಮಗ್ರಿಗಳನ್ನು ದೇವಸ್ಥಾನಕ್ಕೆ ಒಪ್ಪಿಸಿದರು.
![](https://zoomintv.online/wp-content/uploads/2021/03/IMG-20210313-WA0011-1024x461.jpg)
ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ಪುತ್ತಿಲ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹೇಶ್ಚಂದ್ರ ಸಾಲಿಯಾನ್, ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸುಂದರಗೌಡ ನಡುಬೈಲು, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯಗುರುರಾಜ್ ಪುತ್ತೂರಾಯ, ನಾಗೇಶ್ ನಾಯ್ಕ್, ದೇರಣ್ಣ ಶೆಟ್ಟಿ ನಡುಬೈಲು, ಗಿರೀಶ ಸರ್ವೆ, ಪುರಂದರ, ಮೋನಪ್ಪ, ಮಾಧವ ಸಾಲಿಯಾನ್, ದರ್ಣಪ್ಪ, ಬಾಬು ಹಾಗೂ ಸಹಾಯಕ ಆರ್ಚಕರಾದ ಶಿವಪ್ರಸಾದ್ ಶಾಂತಿಗೋಡು , ಕೃಷ್ಣಪ್ರಸಾದ್ ಶರ್ಮ ಹಾಗೂ ಕೇಶವ ಸೇರಿದಂತೆ ಹಲವರು ಉಪಸ್ಥಿತರಿದ್ದರು.
![](https://zoomintv.online/wp-content/uploads/2021/03/IMG-20210313-WA0012-1024x462.jpg)
![](https://zoomintv.online/wp-content/uploads/2021/03/IMG-20210313-WA0014-1024x462.jpg)