ಪುತ್ತೂರು: ಹಿಂದೂಗಳಲ್ಲಿ ದೇಶ ಭಕ್ತಿಯನ್ನು ಬಡಿದೆಬ್ಬಿಸಿ ರಾಷ್ಟ್ರಜಾಗೃತಿಯ ಕಡೆ ಮನನ ಮಾಡುವ ಗುರಿಯಿಟ್ಟುಕೊಂಡು ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಮಾ ೨೧ ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಬೃಹತ್ “ಹಿಂದು ಐಕ್ಯತಾ ಸಮಾವೇಶ”ದ ಆಮಂತ್ರಣ ಪತ್ರ ವಿತರಣೆ ಪುತ್ತೂರು ಪೇಟೆಯಲ್ಲಿ ಮಾ.18 ರಂದು ನಡೆಯಿತು.
ದರ್ಬೆ ವೃತ್ತದಿಂದ ಆರಂಭಗೊಂಡ ಆಮಂತ್ರಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರ ವಿತರಣೆ ಜೊತೆಗೆ ಸಮಾವೇಶದಂದು ಸಂಜೆ ನಡೆಯುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಸೇವೆ ಮಾಡುವವರಿಗೆ ಸೇವಾ ರಶೀದಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪದ್ಮಶ್ರೀ ಗ್ರೂಪ್ಸ್ನ ಸೀತಾರಾಮ ರೈ ಕೆದಂಬಾಡಿಗುತ್ತು, ಹಿಂದು ಜಾಗರಣ ವೇದಿಕೆ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ, ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ಜಿಲ್ಲಾ ಉಪಾಧ್ಯಕ್ಷ ವೆಂಕಟ್ ಕಡಬ, ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ರೈ, ಕಾರ್ಯದರ್ಶಿ ಚಿನ್ಮಯಿ ರೈ ಈಶ್ವರಮಂಗಲ, ತಾಲೂಕು ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ಕುಂಜಾಡಿ, ತಾಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್, ನಗರಾಧ್ಯಕ್ಷ ಪುಷ್ಪರಾಜ್ ದರ್ಬೆ, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
![](https://zoomintv.online/wp-content/uploads/2021/03/WhatsApp-Image-2021-03-18-at-5.25.24-PM.jpeg)