ಆ್ಯಂಕರ್ ಅನುಶ್ರೀ ನನ್ನ ಮಗಳು.. ಸಿಂಪತಿಗಿಟ್ಟಿಸಿಕೊಂಡು ಮುಂದೆ ಬಂದಿದ್ದಾಳೆ, ಚೆನ್ನಾಗಿರಲಿ ಅಂತ ನಾನು ಯಾರಿಗೂ ಡಿಸ್ಟರ್ಬ್ ಮಾಡ್ಲಿಲ್ಲ.. ಆದ್ರೆ ಈಗ ನನ್ನ ಕೊನೆಗಾಲದಲ್ಲಿ ನನ್ನ ಬಂದು ಒಂದುಬಾರಿಯಾದ್ರೂ ನೋಡಲಿ ಎಂದು ಪಾರ್ಶ್ವವಾಯುವಿನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದಾರೆ. ಅವರ ಬಳಿಯಲ್ಲಿ ಸಾಕಷ್ಟು ಫೋಟೋಗಳು ಅವರ ಹೇಳಿಕೆಯನ್ನು ಸಮರ್ಥಿಸುವಂತಿದ್ದು.. ನಿಜಕ್ಕೂ ಇವರು ಅನುಶ್ರೀ ತಂದೆಯಾ? ಅನ್ನೋ ಪ್ರಶ್ನೆ ಗಾಢವಾಗುವಂತಿದೆ.
ಅಷ್ಟಕ್ಕೂ ಆ ವ್ಯಕ್ತಿ ಯಾರು..? ಆತ ಹೇಳಿದ್ದು ಏನು..?
ನನ್ನ ಹೆಸರು ಸಂಪತ್.. ಆ್ಯಂಕರ್ ಅನುಶ್ರೀ ನನ್ನ ಮಗಳು, ನಾನು ಅನುಶ್ರೀ ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದೇನೆ. ಮಗ ಅಭಿಜಿತ್, ಮಗಳು ಅನುಶ್ರೀ ನನ್ನ ಮಕ್ಕಳು. ಮಗಳ ಇಮೇಜ್ ಡ್ಯಾಮೇಜ್ ಆಗಬಾರದು, ಕಷ್ಟಪಟ್ಟು ಮೇಲೆ ಬಂದಿದ್ದಾಳೆ. ಸಿಂಪತಿಗಿಟ್ಟಿಸಿಕೊಂಡು ಮುಂದೆ ಬಂದಿದ್ದಾಳೆ, ಚೆನ್ನಾಗಿರಲಿ ಅಂತ ನಾನು ಯಾರಿಗೂ ಡಿಸ್ಟರ್ಬ್ ಮಾಡ್ಲಿಲ್ಲ. ಇವರಿಗೋಸ್ಕರ ನನ್ನ ಇಡೀ ಜೀವನ ತ್ಯಾಗ ಮಾಡ್ಕೊಂಡೆ. ನನ್ನ ನೋಡೋಕೆ ಹೋದ ವರ್ಷ ನನ್ನ ಮಗ ಅಭಿಜಿತ್ ಬಂದಿದ್ದ. ಮಗಳು ಇನ್ನೂ ಒಳ್ಳೆ ಲೆವೆಲ್ಗೆ ಬೆಳೆಯಲಿ, ನಾನು ಸತ್ರೆ ಮಣ್ಣಾಕಿ ಹೋಗ್ಲಿ, ನಾನು ಅವರಿಂದ ಏನೂ ಎಕ್ಸ್ ಪೆಕ್ಟ್ ಮಾಡಲ್ಲ.

ಮಕ್ಕಳು ಹಾಳಾಗ್ಲಿ ಅಂತ ಯಾವ ತಂದೆನೂ ಬಯಸಲ್ಲ. ಆದ್ರೆ, ಅಪ್ಪ ಇದ್ಗೊಂಡು ಅಪ್ಪ ಇಲ್ಲ ಅಂದ್ರೆ ನನಗೆ ಹೇಗೆ ಅನಿಸಬೇಡ. ನಾನು ಮನೆ ಬಿಟ್ಟೋಗೋ ಪರಿಸ್ಥಿತಿ ಬಂತು, ನನಗೆ ಯಾರೂ ಇಂಪಾರ್ಟೆನ್ಸ್ ಕೊಡ್ಲಿಲ್ಲ. ನನಗೆ ಮಗಳನ್ನ ಡ್ಯಾನ್ಸ್ಗೆ ಕಳಿಸೋಕೆ ಇಷ್ಟವಿರಲಿಲ್ಲ, ನನ್ನ ಹೆಂಡತಿ ಮನೆಯವರಿಗೆ ಇಂಟ್ರೆಸ್ಟ್ ಇತ್ತು, ನನ್ನ ಮಾತಿಗೆ ಬೆಲೆ ಕೊಡ್ತಿರಲಿಲ್ಲ.
1998ರಿಂದ ಇಲ್ಲೆ ಇದ್ದೀವಿ. ಸೆಂಟ್ ಥಾಮಸ್ ಸ್ಕೂಲ್ನಲ್ಲಿ 6 ನೇ ತರಗತಿ ವರೆಗೂ ಓದಿಸಿದ್ವಿ, ಆನಂತರ ಮಂಗಳೂರಿಗೆ ಶಿಫ್ಟ್ ಆದ್ವಿ. ಸಾಕೋದಾದ್ರೆ ನನ್ನ ಸಾಕಲಿ ಇಲ್ಲ ಮಣ್ಣಾಕ್ಲಿ.. ಒಂದು ಬಾರಿಯಾದ್ರೂ ಹೆಂಡತಿ ಮಕ್ಕಳು ಬಂದು ನೋಡ್ಕೊಂಡು ಹೋಗ್ಲಿ. 5 ದಿನದ ಮುಂಚೆ ನನ್ನ ಬಾಮೈದ ಹೇಮಂತ್ ಕುಮಾರ್ಗೆ ಕಾಲ್ ಮಾಡಿದ್ದೆ. ನಾನು ಇದ್ದ ಫೀಲ್ಡ್ನಲ್ಲಿ ಇವರ ಹೆಸ್ರು ತಿಳಿಸಿದ್ರೆ ಇವರನ್ನ ಎತ್ತಿಬಿಡ್ತಿದ್ರು. ಅವರ ಲೈಫ್ ಹಾಳು ಮಾಡಬಾರದು ಅಂತ ನನ್ನ ಜೀವನ, ವ್ಯವಹಾರ ಎಲ್ಲಾ ತ್ಯಾಗ ಮಾಡ್ದೇ. 2003-2004 ರಲ್ಲಿ ನಾವು ಬೇರೆ ಆದ್ವಿ, ನಾನು ಎರಡನೇ ಮದುವೆ ಆಗಿಲ್ಲ, ಸೇಲ್ಸ್ ಮತ್ತು ಮಾರ್ಕೆಟಿಂಗ್ ಮಾಡ್ಕೊಂಡಿದ್ದೆ, ನ್ಯೂಜಿಲೆಂಡ್, ದುಬೈ, ಬಾಂಬೆಯಲ್ಲಿ ಕೆಲಸ ಮಾಡ್ತಿದ್ದೆ, ಚೆನ್ನಾಗಿದ್ದೆ, ಬಿಡಿ ಹೋಗ್ಲಿ ಆದ್ರೆ ಸಾಕ್ಲಿ , ಇಲ್ಲ ಮಣ್ಣಾಕ್ಲಿ ಎಂದಿದ್ದಾರೆ.

ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಸಂಪತ್ ಸದ್ಯ ಬೆಂ.ಉತ್ತರ ತಾಲೂಕು ಮಾದನಾಯಕನಹಳ್ಳಿಯ ಅಭಯ ವಸಿಷ್ಠ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಶಿವಲಿಂಗೇಗೌಡ ಎಂಬುವವರು ಚಿಕಿತ್ಸೆ ನೀಡುತ್ತಾ ಆರೈಕೆ ಮಾಡುತ್ತಿದ್ದಾರೆ. ಆದ್ರೆ ಸಂಪತ್ಗೆ ಕುಟುಂಬಸ್ಥರ ಅಗತ್ಯವಿದೆ. ಹೀಗಾಗಿ ಕುಟುಂಬಸ್ಥರು ಬರಲಿ ಎಂದು ಚಿಕಿತ್ಸೆ ನೀಡ್ತಿರೋ ಆಸ್ಪತ್ರೆ ವೈದ್ಯರೂ ಮನವಿ ಮಾಡಿಕೊಂಡಿದ್ದಾರೆ.