ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ, ಪಾದೆಕಲ್ಲು- ಜರಿ, ನಿವಾಸಿಗಳು ಕಳೆದ ನೂರು ವರ್ಷಗಳ ಹಿಂದೆ ಅರಣ್ಯ ಪ್ರದೇಶದ ಬದಿಗಳಲ್ಲಿ ವಾಸಿಸುತ್ತಿದ್ದು, ಸರಕಾರದ ಯಾವುದೇ ಸವಲತ್ತುಗಳಿಂದ ತಮ್ಮ ಜಾಗದ ಹಕ್ಕು ಪತ್ರಗಳಿಲ್ಲದೆ ವಂಚಿತರಾಗಿರುತ್ತಾರೆ.
ಅನೇಕ ವರ್ಷಗಳಿಂದ ಎಲ್ಲಾ ಇಲಾಖೆಗಳಿಗೆ ದೂರು ನೀಡುತ್ತಿದ್ದು, ಯಾವುದೇ ರೀತಿಯ ಸ್ಪಂದನೆ ಸಿಗದ ಹಿನ್ನೆಲೆ ಎಲ್ಲಾ ಫಲಾನುಭವಿಗಳು ಒಗ್ಗಟ್ಟಾಗಿ ಹೋರಾಟ ಮಾಡಿ ಜಾಗದ ಹಕ್ಕು ಪತ್ರವನ್ನು ಗಿಟ್ಟಿಸುವ ಉದ್ದೇಶದಿಂದ ಹೋರಾಟ ಸಮಿತಿಯೊಂದನ್ನು ರಚನೆ ಮಾಡಿಲಾಗಿದೆ.
ಸಮಿತಿಯ ಗೌರವ ಸಲಹೆಗಾರರಾಗಿ ಜಯಪ್ರಕಾಶ್ ಬದಿನಾರು, ಗೌರವ ಅಧ್ಯಕ್ಷರಾಗಿ ಮೋನಪ್ಪ ಗೌಡ ಪಮ್ಮನಮಜಲು, ಅಧ್ಯಕ್ಷರಾಗಿ ಜಗದೀಶ್ ಕಜೆ, ಪ್ರಧಾನ ಕಾರ್ಯದರ್ಶಿಗಳಾಗಿ ಬಾಬು ನೆಕ್ಕರೆ ,ಉಪಾಧ್ಯಕ್ಷರಾಗಿ ಮಾಧವ, ನಾಗೆಶ್,ನೊ ಣಯ್ಯ ಮತ್ತು ಸದಸ್ಯರಾಗಿ ಶಂಕರ ,ಸುಧಾಕರ, ಚೆನ್ನಮ್ಮ, ಕವಿತಾ,ಸುಂದರಿ, ನವಿನ,ಸಿತಾಮ್ಮ, ಜಯನಂದ, ವಿಶ್ವನಾಥ, ಸುಮತಿ ರನ್ನು ಆಯ್ಕೆ ಮಾಡಲಾಗಿದೆ.