ವಿಟ್ಲ: ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ “ಹರ್ ಘರ್ ತಿರಂಗಾ” ತ್ರಿವರ್ಣ ಧ್ವಜವನ್ನು ವಿಟ್ಲ ಬಿಜೆಪಿ ಮಹಾ ಶಕ್ತಿ ಕೇಂದ್ರ ವತಿಯಿಂದ ಬೂತ್ ಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು.
ವಿಟ್ಲ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಅರುಣ್ ವಿಟ್ಲ ಕಾರ್ಯದರ್ಶಿ, ಕರುಣಾಕರ ನಾಯ್ತೋಟು, ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ವೀರಪ್ಪ ಗೌಡ ರಾಯರಬೆಟ್ಟು, ಲೋಕನಾಥ್ ಶೆಟ್ಟಿ ಕೊಲ್ಯ, ಹರೀಶ್ ಪೂಜಾರಿ ವಿಟ್ಲ ಹಾಗೂ ಪ ಪಂ ಸದಸ್ಯರು ಮತ್ತು ಬೂತ್ ಅಧ್ಯಕ್ಷರುಗಳು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.