ಪುತ್ತೂರು: ಕಲ್ಲಾರೆಯ ನಿವೃತ ರೆವೆನ್ಯೂ ಇನ್ ಸ್ಪೆಕ್ಟರ್ ದಿ. ದಾಮೋದರನ್ ರವರ ಪತ್ನಿ ಸತ್ಯವತಿ ಯು. ಪಿ (90) ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.4 ರಂದು ಮುಂಜಾನೆ ನಿಧನರಾದರು.
ಸತ್ಯವತಿ ರವರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಇನ್ನಿತರ ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದರು.
ಮೃತರು ಪುತ್ರರಾದ ರಾಜೇಶ್ ಯುಪಿ, ಹರೀಶ್ ಯುಪಿ, ಪುತ್ರಿ ಪುಷ್ಪ ಶಿವಾಜಿ ಸೊಸೆಯಂದಿರಾದ ದುರ್ಗಾ ಸುರೇಶ್, ಸಂಧ್ಯಾ ರಾಜೇಶ್, ವಿಂದು ಹರೀಶ್, ಅಳಿಯ ಕೆ ಶಿವಾಜಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.