ಪುತ್ತೂರಿನಲ್ಲಿ ಎಲ್ಲರ ಮನಗೆದ್ದು ಹತ್ತೂರಿಗೆ ಹೆಸರು ವಾಸಿಯಾಗಿರುವ ‘ಕಲ್ಲೇಗ ಟೈಗರ್ಸ್’ ಇದೀಗ ‘ಬಿಗ್ಬಾಸ್’ ವೇದಿಕೆಯಲ್ಲಿ ಕಮಾಲ್ ಮಾಡಿದೆ.
ಹೌದು.. ಕನ್ನಡದ ಒಟಿಟಿಯಲ್ಲಿ ನಡೆದ ಬಿಗ್ಬಾಸ್ನಲ್ಲಿ ಗೆದ್ದು, ಬಿಗ್ಬಾಸ್ ಸೀಸನ್9ರ ಸ್ಪರ್ಥಿಯಾಗಿ ಬಿಗ್ ಮನೆಗೆ ಕಾಲಿಟ್ಟ ನಟ, ನಿರ್ದೇಶಕ, ನಿರೂಪಕ ‘ರೂಪೇಶ್ ಶೆಟ್ಟಿ’ ಒಂದಲ್ಲಾ ಒಂದು ವಿಚಾರಗಳ ಮೂಲಕ ಸುದ್ದಿಯಾಗಿ ಪ್ರೇಕ್ಷಕರಿಗೆ ನೂರಕ್ಕೆ ನೂರರಷ್ಟು ಮನರಂಜನೆಯನ್ನ ನೀಡುತ್ತಾ ಬಂದಿದ್ದಾರೆ.
ಇದೀಗ ಬಿಗ್ಬಾಸ್ ಸೀಸನ್9 ಪೈನಲ್ ಹಂತಕ್ಕೆ ತಲುಪಿದ್ದು, ಕೊನೆಯ ವಾರದ ಅಖಾಡಕ್ಕೆ ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ರೂಪೇಶ್ ಶೆಟ್ಟಿ ತನ್ನ ಆಸೆಯನ್ನ ಬಿಗ್ಬಾಸ್ ಮನೆಯಲ್ಲಿ ಇಡೇರಿಸುವಂತೆ ಕೇಳಿಕೊಂಡಿದ್ದಾರೆ. ಅದೇನಪ್ಪ ಅಂದ್ರೆ ‘ಮಂಗಳೂರು ದಸರಾ ಪ್ರಮುಖ ವಿಶೇಷತೆ ‘ಹುಲಿ ಕುಣಿತ’. ಆ ಹುಲಿ ವೇಷ ಧರಿಸಿ ಬಿಗ್ಬಾಸ್ ಮನೆಯಲ್ಲಿ ಹುಲಿ ನೃತ್ಯಗಾರರೊಂದಿಗೆ ತಾನೂ ಹುಲಿ ನೃತ್ಯ ಮಾಡಬೇಕು’ ಎಂದು ಹೇಳಿಕೊಂಡಿದ್ದಾರೆ. ಇದೀಗ ಬಿಗ್ಬಾಸ್ ಮನೆಯಲ್ಲಿ ತಾಸೆಯ ಪೆಟ್ಟಿಗೆ ಪಿಲಿನಲಿಕೆಯ ಅಬ್ಬರ ಜೋರಾಗಿ ಕೇಳಿಸಿದ್ದು, ಪುತ್ತೂರಿನ ‘ಕಲ್ಲೇಗ ಟೈಗರ್ಸ್’ ತಂಡ ಜಬರ್ದಸ್ತ್ ಆಗಿ ಕುಣಿದಿದೆ..
ಈ ಎಪಿಸೋಡ್ ನಾಳೆ ಪ್ರಸಾರವಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ..