ಬಂಟ್ವಾಳ : ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಎಂಬಲ್ಲಿ ನಿರ್ಮಾಣದ ಹಂತದ ಕಟ್ಟಡದ ಬಳಿ ಹಾಕಿದ್ದ 97,900/ ರೂಪಾಯಿ ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ 90,000/- ರೂಪಾಯಿ ಮೌಲ್ಯದ 401 ಕೆ.ಜಿ. ಅಡಿಕೆ ಕಳವು ಮಾಡಿದ ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ತುಂಬೆ ಗ್ರಾಮದ ಬೊಳ್ಳಾರಿನಿವಾಸಿ ಮೊಹಮ್ಮದ್ ಅನ್ಸಾಫ್ (34 ), ಮದಕ ನಿವಾಸಿ ನವಾಜ್ (24) ಬಂಧಿತರು.
![](https://zoomintv.online/wp-content/uploads/2023/02/IMG-20230216-WA0029-1024x768.jpg)
ಬಂಧಿತ ಆರೋಪಿಗಳಿಂದ ಕಳವು ಮಾಡಿದ 97,900/- ರೂಪಾಯಿ ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಫೆ.12 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ 21 ಗೋಣಿ ಚೀಲಗಳಲ್ಲಿ 90,000/- ರೂಪಾಯಿ ಮೌಲ್ಯದ 401 ಕೆ.ಜಿ. ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮತ್ತು
ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮಂಗಳೂರು ಮಾರ್ಗದರ್ಶನದಂತೆ, ಪೊಲೀಸ್ ಉಪಾಧೀಕ್ಷಕರು ಪ್ರತಾಪ್ ಸಿಂಗ್ ಥೋರಾಟ್ ಮತ್ತು ಪೊಲೀಸ್ ನಿರೀಕ್ಷಕ ವಿವೇಕಾನಂದ ರವರ ನಿರ್ದೇಶನದಂತೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ಸಿಬ್ಬಂದಿಯಾದ ಎಎಸ್ಐ ನಾರಾಯಣ, ಜಿನ್ನಪ್ಪ ಗೌಡ, ಹೆಚ್ ಸಿ, ಇರ್ಷಾದ್ ಪಿ, ರಾಜೇಶ್, ಗಣೇಶ್, ಮನೋಹರ, ಪಿಸಿ ಪ್ರವೀಣ್, ಮೋಹನ ಭಾಗವಹಿಸಿದ್ದಾರೆ..