‘ಅರುಣ್ ಕುಮಾರ್ ಪುತ್ತಿಲ’.., ಸದ್ಯ ಟ್ರೆಂಡಿಂಗ್ ಸೃಷ್ಟಿಸಿರುವ ಹೆಸರಿದು.., ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪುತ್ತಿಲ ರವರು ಸದ್ಯ ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.
ಮುಂಬರುವ ಲೋಕಸಭಾ ಅಭ್ಯರ್ಥಿಯಾಗಿ ಅರುಣ್ ಪುತ್ತಿಲ ರವರು ಸ್ಪರ್ಧಿಸಬೇಕೆನ್ನುವುದು ಹಲವರ ಆಶಯವಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿದೆ.
ಮಂಗಳೂರಿನ ಉರ್ವ ಮಾರಿಗುಡಿಯಲ್ಲಿ ಪುತ್ತಿಲ ಅಭಿಮಾನಿ ಬಳಗದವರು ಫ್ಲೆಕ್ಸ್ ವೊಂದನ್ನು ಅಳವಡಿಸಿದ್ದು, ‘ದ.ಕ ಜಿಲ್ಲೆಯ ಯುವ ಜನರ ಕಣ್ಮಣಿ ಕಟ್ಟಾ ಹಿಂದುತ್ವವಾದಿ ಮುಂದಿನ ಲೋಕಸಭಾ ಅಭ್ಯರ್ಥಿ ಅರುಣ್ ಕುಮಾರ್ ಇವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಎಂದು ಬರೆದಿದ್ದಾರೆ.
ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..