‘ತಾಂಟ್ರೆ ಬಾ ತಾಂಟ್’ಅಂದವರು ಇದೀಗ ಹಿಂದೂಗಳ ಶವಸಂಸ್ಕಾರ ಮಾಡಿದ್ದೇವೆ ಎಂದು ಪೋಟೋ ಲೈಕು ಆರಂಭಿಸಿದ್ದಾರೆ. ವರ್ಷವಿಡಿ ಹಿಂದೂ ಸಮಾಜಕ್ಕಾಗಿ ದುಡಿಯುವ ಹಿಂದು ಸಂಘಟನೆಗಳ ಕಾರ್ಯಕ್ಷಮತೆಯ ಬಗ್ಗೆ ಅಲ್ಲಲ್ಲಿ ತುಚ್ಚವಾಗಿ ಮಾತನಾಡಲು ಸದ್ದಿಲ್ಲದೆ ಕುಮ್ಮಕ್ಕು ಆರಂಭವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಕಳವಳ ವ್ಯಕ್ತ ಪಡಿಸಿದ್ದಾರೆ.
ಕರೋನಾ ವೈರಸ್ ಲಸಿಕಾ ಅಭಿಯಾನ ಆರಂಭಗೊಂಡ ಕೂಡಲೇ ದೇಶದೆಲ್ಲೆಡೆ ರಕ್ತದ ಅಭಾವ ಆಗಬಾರದು ಎನ್ನುವ ನಿಟ್ಟಿನಲ್ಲಿ ಮೊದಲು ಕಾರ್ಯರೂಪಕ್ಕಿಳಿದದ್ದೇ ಹಿಂದೂ ಸಂಘಟನೆಗಳು ಎನ್ನುವುದನ್ನು ಬಹುಶಃ ಯಾರೂ ಗಮನಿಸಿದಂತೆ ಕಾಣಿಸುದಿಲ್ಲ, ಹಿಂದು ಜಾಗರಣ ವೇದಿಕೆಯ ಆಂಬುಲೆನ್ಸ್ 24×7 ಕೋರೋಣ ಸೊಂಕಿತರ ಸೇವೆಗೆ ಸಿದ್ಧರಾಗಿ ಓಡಾಡುತ್ತಿದೆ.ಅದರಲ್ಲೂ ಜಿಲ್ಲಾ ಹಿಂದು ಜಾಗರಣ ವೇದಿಕೆ ಸೇವಭಾರತೀಯ ಜೊತೆಗೆ ಜೋಡಿಸಿಕೊಂಡು ಈಗಾಗಲೇ ಐನೂರಕ್ಕೂ ಅಧಿಕ ಯುನಿಟ್ಗಳ ರಕ್ತ ಸಂಗ್ರಹಿಸಿ ಜಿಲ್ಲೆಯ ವಿವಿಧ ರಕ್ತನಿಧಿ ಕೇಂದ್ರಗಳಿಗೆ ರವಾನಿಸಿದೆ.
ಕೋವಿಡ್ ವೈರಸ್ನಿಂದ ಮೃತರಾದವರ ಮನೆಯವರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಜಾಗರಣಾ ವೇದಿಕೆ ಕಾರ್ಯಕರ್ತರು ಅನೇಕ ಶವಸಂಸ್ಕಾರಗಳನ್ನು ನಡೆಸಿದ್ದು ಕೂಡ ಎಲ್ಲಿಯೂ ಸುದ್ದಿಯಾಗಿಲ್ಲ.. ಏಕೆಂದರೆ ‘ಕೀರ್ತಿ ಕನಕ ಬಯಕೆ ಸಲ್ಲ,
ಧ್ಯೇಯಕದುವೆ ಮಾರಕ, ಸ್ಪೂರ್ತಿ ಸಹನೆ ಶ್ರಮದ ದುಡಿಮೆ ರಾಷ್ಟ್ರ ಹಿತಕೆ ಸಾಧಕ’ ಎನ್ನುವುದನ್ನು ನಂಬಿದವರು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು.
ಇಷ್ಟೆಲ್ಲಾ ಇದ್ದರೂ ನಮ್ಮ ಹಿಂದು ಸಮಾಜಕ್ಕಾದರೂ ಏನಾಗಿದೆ,ನಿಮ್ಮ ಹತ್ತಿರದಲ್ಲೇ ಹಿಂದು ಸಂಘಟನೆಗಳು,ಹಾಗು ಪ್ರಜ್ಞಾವಂತ ಹಿಂದೂ ಸಮಾಜವಿರುವಾಗ ಅನ್ಯಕೋಮಿನ ಬಣ್ಣದ ಮಾತಿಗೆ ಮರುಳಾಗಿ ಹಿಂದೂ ಸಮಾಜ ತಲೆತಗ್ಗಿಸುವಂತೆ ದಯವಿಟ್ಟು ಮಾಡದಿರಿ. ಸಕಲ ಗೌರವಗಳೊಂದಿಗೆ ಪಂಚಭೂತಗಳಲ್ಲಿ ಲೀನವಾಗ ಬೇಕಾದ ಪಾರ್ಥೀವ ಶರೀರಗಳು, ಅನ್ಯಕೋಮಿನವರ ಪ್ರಚಾರದ ಸರಕಾಗದೇ ಇರಲಿ, ಇನ್ನು ಮುಂದೆ ಎಂದಾದರೂ ಅಂತಹ ಅಗತ್ಯತೆ ಇದ್ದಲ್ಲಿ ದಯವಿಟ್ಟು ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಸಂಪರ್ಕಿಸಿ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.