ಪುತ್ತೂರಿನಲ್ಲಿ ಎಸ್ ಪಿ ರೌಂಡಪ್
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರು ಇಂದು ಬೆಳಿಗ್ಗೆ ಪುತ್ತೂರಿಗೆ ಆಗಮಿಸಿ ಕಫ್ಯೂ ೯ ನಿಯಮ ಜಾರಿಯ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು.
ನಗರ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರ ಜತೆ ಮಾತುಕತೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ ಅವರು ಬಳಿಕ ದರ್ಬೆ ವೃತ್ತ ಸೇರಿದಂತೆ ಸುತ್ತಮುತ್ತಲಿನ ನಾನ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.
![](https://zoomintv.online/wp-content/uploads/2021/05/WhatsApp-Image-2021-05-10-at-10.19.03-AM-1024x576.jpeg)
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಬೆಳಿಗ್ಗೆ ಅವಕಾಶ ನೀಡಲಾಗಿದೆ. ಪೇಟೆ ಪ್ರದೇಶದಲ್ಲಿ ಜನರು ನಡೆದುಕೊಂಡು ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಅದಕ್ಕೆಲ್ಲ ವಾಹನ ಬಳಸುವಂತಿಲ್ಲ. ಅನಗತ್ಯ ಕಾರಣಕ್ಕೆ ವಾಹನದಲ್ಲಿ ಬಂದರೆ ಸೀಝ್ ಮಾಡಲಾಗುವುದು. ಜನರು ಮನೆಯಲ್ಲಿದ್ದುಕೊಂಡೆ ಸಹಕರಿಸಬೇಕು ಎಂದರು.
![](https://zoomintv.online/wp-content/uploads/2021/05/WhatsApp-Image-2021-05-10-at-10.24.04-AM-1024x576.jpeg)
![](https://zoomintv.online/wp-content/uploads/2021/05/WhatsApp-Image-2021-05-10-at-10.25.08-AM-1024x576.jpeg)
![](https://zoomintv.online/wp-content/uploads/2021/05/WhatsApp-Image-2021-05-10-at-10.29.43-AM-1024x576.jpeg)
![](https://zoomintv.online/wp-content/uploads/2021/05/WhatsApp-Image-2021-05-10-at-10.25.57-AM-1024x576.jpeg)
![](https://zoomintv.online/wp-content/uploads/2021/05/WhatsApp-Image-2021-05-10-at-10.28.08-AM-1024x576.jpeg)