ಬಂಟ್ವಾಳ: “ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಉಲ್ಲಂಘಿಸಿ ಅನಗತ್ಯ ಸಂಚಾರ ಕುರಿತು ದೂರುಗಳು ಬಂದಿದ್ದು, ಅಂತವರ ವಿರುದ್ಧ ಮುಲಾಜಿಲ್ಲದೆ ದಂಡ ವಿಧಿಸಬೇಕು” ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೂಚಿಸಿದ್ದಾರೆ.
- ಈ ಕುರಿತು ಮಾತನಾಡಿದ ಶಾಸಕರು, “ಸೋಮವಾರ ನಿಗದಿಪಡಿಸಲಾದ ಅಂಗಡಿಗಳಲ್ಲದೆ ಎಲ್ಲ ಅಂಗಡಿ ಮುಂಗಟ್ಟುಗಳೂ ತೆರವಾದ ಕುರಿತು ದೂರುಗಳು ಬಂದಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದರು.ಇನ್ನು “ಮಂಗಳವಾರವೂ ಇದೇ ರೀತಿ ತೆರೆದಿದ್ದರೆ, ಅವುಗಳ ವಿಡಿಯೋ ರೆಕಾರ್ಡ್ ಮಾಡಿ, ದಂಡ ವಿಧಿಸುವ ಕ್ರಮ ಜರುಗಿಸಿ, ಅನಗತ್ಯ ವಾಹನ ಸಂಚಾರಿಗಳಿಗೂ ಕಠಿಣ ಕ್ರಮ ಜರುಗಿಸಿ, ಲಾಕ್ ಡೌನ್ ನಿಯಮಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು” ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.