Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!

    ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!

    ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

    ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

    ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

    ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

    ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

    ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

    ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

    ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

    ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

    ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!

    ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!

    ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

    ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

    ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

    ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

    ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

    ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

    ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

    ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

    ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

    ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

ಪುತ್ತೂರು : ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ‘ಶಾರದೋತ್ಸವ’ : ಅದ್ಧೂರಿ ಶೋಭಾಯಾತ್ರೆ : ಸ್ತಬ್ಧ ಚಿತ್ರಕ್ಕೆ ಒಂದು ಲಕ್ಷ ಬಹುಮಾನ

October 6, 2023
in ಧಾರ್ಮಿಕ, ಪುತ್ತೂರು
0
ಪುತ್ತೂರು : ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ‘ಶಾರದೋತ್ಸವ’ : ಅದ್ಧೂರಿ ಶೋಭಾಯಾತ್ರೆ : ಸ್ತಬ್ಧ ಚಿತ್ರಕ್ಕೆ ಒಂದು ಲಕ್ಷ ಬಹುಮಾನ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ನವರಾತ್ರಿ ಹೆಸರೇ ಹೇಳುವ ಹಾಗೆ 9 ರಾತ್ರಿಗಳ ಉತ್ಸವ.. ನವರಾತ್ರಿಗೆ ತನ್ನದೇ ಆದ ವಿಶಿಷ್ಟ ಧಾರ್ಮಿಕ ಹಿನ್ನೆಲೆ ಇದೆ. ನವರಾತ್ರಿ ಆಚರಣೆಗೆ ಸಂಬಂಧಿಸಿದ ಉಲ್ಲೇಖ ನಮ್ಮ ಅನೇಕ ವೇದ ಪುರಾಣಗಳಲ್ಲಿ ಪುಣ್ಯ ಕಥೆಗಳಲ್ಲಿದೆ..

Advertisement
Advertisement
Advertisement

ನವರಾತ್ರಿ ಉತ್ಸವವನ್ನು ನಾಡಿನೆಲ್ಲೆಡೆ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಲ್ಲೂ ಕರಾವಳಿಯಲ್ಲಂತೂ ನವರಾತ್ರಿ ಬಂತೇದರೇ ಸಾಕು ಅದೇನೋ ಸಡಗರ, ಸಂಭ್ರಮ.. ಎಲ್ಲೆಡೆ ಶ್ರೀ ಶಾರದೋತ್ಸವದ್ದೆ ವೈಭವ.

Advertisement

ಅದೇ ರೀತಿ ಹತ್ತೂರ ಒಡೆಯನ ಸನ್ನಿಧಾನ ಪುತ್ತೂರಿನಲ್ಲಿಯೂ ನವರಾತ್ರಿ ಪೂಜೆ ಹಾಗೂ ಶ್ರೀ ಶಾರದೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ನವರಾತ್ರಿ ಉತ್ಸವವು ಅ.15 ರಿಂದ 24ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಲಿದೆ.

ಅ.15 ರಂದು ನವರಾತ್ರಿ ಪೂಜೆ ಪ್ರಾರಂಭಗೊಂಡು, ಅ.20 ರಂದು ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆದು, ಅ.24 ರಂದು ಶ್ರೀ ಶಾರದಾ ಮೂರ್ತಿಯ ವಿಸರ್ಜನೆ ನಡೆಯಲಿದೆ. ಈ ಬಾರಿ 89ನೇ ವರುಷದ ಶಾರದೋತ್ಸವವಾಗಿದ್ದು, ಬಹಳ ವೈಭವಯುತವಾಗಿ ಮೂಡಿಬರಲಿದೆ.

ಅ.24 ರಂದು ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಕಾರ್ಯಕ್ರಮವನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಉದ್ಘಾಟಿಸಲಿದ್ದು, ಶೋಭಾಯಾತ್ರೆಯ ಸಂಚಾಲಕರಾದ ಸೀತಾರಾಮ ರೈ ಕೆದಂಬಾಡಿಗುತ್ತು ರವರ ನೇತೃತ್ವದಲ್ಲಿ ಬೊಳ್ವಾರು ವೃತ್ತದಿಂದ ವೇದಘೋಷ, ಚೆಂಡೆಮೇಳ, ವಾದ್ಯವೃಂದ, ಕುಣಿತ ಭಜನೆಗಳೊಂದಿಗೆ ಶ್ರೀ ದೇವಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.

ಶ್ರೀ ಶಾರದಾ ಭಜನಾ ಮಂದಿರದ ಇತಿಹಾಸ :

ಸುಮಾರು ಒಂಭತ್ತು ದಶಕಗಳ ಹಿಂದಿನ ಮಾತು. ಅಂದಿನ ಪುತ್ತೂರು ಪರಿಸರದಲ್ಲಿ ಜನರನ್ನು ನಿತ್ಯ ಬಲಿ ತೆಗೆದುಕೊಳ್ಳುತ್ತಿದ್ದ ಮಹಾಮಾರಿ ಸಾಂಕ್ರಾಮಿಕ ರೋಗ ಹಬ್ಬಿತ್ತು. ಈ ಕಾಯಿಲೆಗೆ ‘ಅಮ್ಮ’ ಎನ್ನತ್ತಿದ್ದರು. ಊರೆಲ್ಲಾ ರೋಗದ ಭಯ ಆವರಿಸಿತ್ತು. ಈ ಸಂದರ್ಭದಲ್ಲಿ ಸೀಮೆಯ ಪ್ರಧಾನ ದೈವಸ್ಥಾನ ಬಲ್ನಾಡಿನಲ್ಲಿ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯುತ್ತಿತ್ತು. ಉಳ್ಳಾಲ್ತಿ ಸನ್ನಿಧಿಗೆ ತೆರಳಿದ ಪುತ್ತೂರಿನ ಜನರು ಈ ರೋಗದಿಂದ ಕಾಪಾಡುವಂತೆ ಅರಿಕೆ ಮಾಡಿಕೊಂಡರೆನ್ನಲಾಗಿದೆ.

ಶ್ರೀ ಉಳ್ಳಾಲ್ತಿ ಅಮ್ಮನವರು ನುಡಿಕಟ್ಟಿನಲ್ಲಿ ನಿತ್ಯ ಭಜನೆಯನ್ನು ಊರಿನಲ್ಲಿ ಆರಂಭಿಸಿ, ರೋಗದಿಂದ ನರಳುವವರ ಮನೆಗಳಿಗೆ ತೆರಳಿ ತುಳಸಿಕಟ್ಟೆಗೆ ಸುತ್ತು ಬಂದು ಭಜನೆ ಮಾಡಿ ಪ್ರತಿವರ್ಷ ಮಕರ ಸಂಕ್ರಮಣದ ಪರ್ವ ದಿನದಂದು ಬಲ್ನಾಡಿಗೆ ಭಜನೆಯೊಂದಿಗೆ ಬನ್ನಿ ಎಂದು ಅಭಯ ನೀಡಿದರು.

ಅಂದಿನಿಂದ ನಗರ ಭಜನೆ ಆರಂಭವಾಯಿತು. ಕ್ರಮೇಣ ಭಜನಾ ತಂಡದವರು ಸೇರಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಳಿ ಇರುವ ಕಟ್ಟಡದಲ್ಲಿ ಭಜನಾ ಮಂದಿರವನ್ನು ಆರಂಭಿಸಿ ಶ್ರೀ ಶಾರದ ಭಜನಾ ಮಂದಿರ ಎಂಬ ಹೆಸರನ್ನಿಟ್ಟರು. ಪ್ರತಿ ಶನಿವಾರ ಭಜನಾ ಸೇವೆ ಮಾಡಿದರು. ಪುತ್ತೂರಿನ ಹಲವು ಕಡೆಗಳಲ್ಲಿ ನಗರ ಭಜನೆ ಆರಂಭವಾಯಿತು.

ಕಳೆದ ಕೆಲ ವರ್ಷಗಳ ಹಿಂದೆ ಶ್ರೀ ದೇವಳದ ಉಳ್ಳಾಲ್ತಿ ನಡೆಯ ಪಕ್ಕದಲ್ಲಿ ದಿ. ನಟ್ಟೋಜಿ ರಘುರಾಮ ರಾವ್ ಅವರು ದಾನರೂಪದಲ್ಲಿ ನೀಡಿದ ನೂತನ ಭಜನಾ ಮಂದಿರ ಕಟ್ಟಡ ನಿರ್ಮಾಣವಾಯಿತು.

ನಗರ ಭಜನೆ ಮೊಟಕುಗೊಂಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮೂರು ಸುತ್ತು ಬರುವ ಸೇವೆಗೆ ಸೀಮಿತವಾಯಿತು.

ಮಕರ ಸಂಕ್ರಮಣದ ದಿನ ಮುಸ್ಸಂಜೆ ತಪ್ಪದೇ ಶ್ರೀ ಉಳ್ಳಾಲ್ತಿ ಸನ್ನಿಧಿಗೆ ಹೋಗಿ ಬರುವ ಪದ್ಧತಿ ಇಂದಿಗೂ
ನಡೆಯುತ್ತಿದೆ.

ಬಲ್ನಾಡಿನ ದೈವಸ್ಥಾನಕ್ಕೆ ಸಂಬಂಧಿಸಿದ ಹೊಳ್ಳ ಮನೆತನದವರು ಹಲವಾರು ವರ್ಷ ಈ ಭಜನಾ ಮಂದಿರದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಿದ್ದರು. ಪ್ರಸ್ತುತ ಭಜನಾ ಮಂದಿರದಲ್ಲಿ ನವರಾತ್ರಿ ವೇಳೆ ವಿದ್ಯಾರಂಭ, ಶಾರದೋತ್ಸವ ನಡೆಯುತ್ತದೆ. ಭಕ್ತರು ಇಲ್ಲಿ ಸೇವಾ ರೂಪದಲ್ಲಿ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ಶ್ರೀ ಶಾರದೆಯ ಹೆಸರಿನಲ್ಲಿ ವೇಷ ಹಾಕುವವರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ :

‘ಶ್ರೀ ಶಾರದೆಯ ಹೆಸರಿನಲ್ಲಿ ಪುತ್ತೂರಿನಲ್ಲಿ ನವರಾತ್ರಿ ಸಂದರ್ಭದ ಯಾರೆಲ್ಲಾ ವೇಷ ಹಾಕುತ್ತಾರೆ ಅವರೆಲ್ಲಾ ಭಜನಾ ಮಂದಿರದಲ್ಲಿ ನಡೆಯುವ ಶಾರದೋತ್ಸವದ ಪ್ರತೀ ಕಾರ್ಯಕ್ರಮ ಸಹಿತ ಶಾರದೋತ್ಸವ ಶೋಭಾಯಾತ್ರೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಇತ್ತೀಚಿಗೆ ಜ್ಯೋತಿಷ್ಯರಲ್ಲಿ ನಡೆಸಿದ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ಮಾಹಿತಿ ನೀಡಿದ್ದಾರೆ.

ವೇಷಧಾರಿಗಳಿಗೆ ತೀರ್ಥ ಪ್ರೋಕ್ಷಣೆ :

ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ವೇಷಧಾರಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ತೀರ್ಥ ತಂದು ಪ್ರೋಕ್ಷಣೆ ಮಾಡಲಾಗುವುದು.

ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮ :

9 ದಿನಗಳ ಕಾಲ ನಡೆಯುವ ಶ್ರೀ ಶಾರದೋತ್ಸವದಲ್ಲಿ ಪ್ರತೀ ದಿನ ಸಾಂಸ್ಕೃತಿಕ, ಭಜನೆ ಕಾರ್ಯಕ್ರಮ ಸೇವಾ ರೂಪದಲ್ಲಿ ನಡೆಯಲಿದೆ.

ಮೆರವಣಿಗೆಯಲ್ಲಿ ಪಾಲ್ಗೊಂಡ ಸ್ತಬ್ದ ಚಿತ್ರಕ್ಕೆ ಬಹುಮಾನ :

ಈ ಬಾರಿ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆಯಲ್ಲಿ ಶಿಸ್ತುಬದ್ಧವಾಗಿ ಪ್ರದರ್ಶನ ಮಾಡುವ ಸ್ತಬ್ದ ಚಿತ್ರಕ್ಕೆ (ಟ್ಯಾಬ್ಲೋ) ಬಹುಮಾನ ದೊರಕಲಿದ್ದು, ಪ್ರಥಮ ಬಹುಮಾನವಾಗಿ ಬರೋಬ್ಬರಿ 1 ಲಕ್ಷ ರೂ. ಹಾಗೂ ದ್ವಿತೀಯ ಬಹುಮಾನವಾಗಿ 50 ಸಾವಿರ ರೂ. ದೊರಕಲಿದೆ. ಜಿಲ್ಲೆಯ ನಾನಾ ಭಾಗಗಳಿಂದ ಪಾಲ್ಗೊಳ್ಳುವ ತಂಡಗಳಿಗೆ ಮುಕ್ತ ಅವಕಾಶ ಮಾಡಲಾಗಿದೆ ಎಂದು ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ.


Previous Post

ಫಿಲೋ ಪ್ರತಿಭಾ 2023 ಸ್ಪರ್ಧೆಗಳಲ್ಲಿ ಅಂಬಿಕಾ ಸಿಬಿಎಸ್‌ಇ ವಿದ್ಯಾರ್ಥಿಗಳ ಸಾಧನೆ

Next Post

ಭಾರತೀಯ ಸೇನೆಯ ಅಗ್ನಿವೀರ್‌ಗೆ ಸೇರ್ಪಡೆಯಾದ ಹಿರಿಯ ವಿದ್ಯಾರ್ಥಿ ಭವಿಷ್ ಗೆ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಅಭಿನಂದನಾ ಕಾರ್ಯಕ್ರಮ

OtherNews

ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!
Featured

ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!

June 20, 2026
ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!
Featured

ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

June 20, 2026
ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!
Featured

ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

June 20, 2026
ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!
ಪುತ್ತೂರು

ಬಿರುವೆರ್ ಕುಡ್ಲ ಪುತ್ತೂರು ಘಟಕದ ಸಮಾಜಮುಖಿ ಕಾರ್ಯ: ವಿದ್ಯಾರ್ಥಿಗಳಿಗೆ ಯೋಗ ಸಮವಸ್ತ್ರ ವಿತರಣೆ..!!

June 20, 2026
ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ: 16 ಜಾನುವಾರುಗಳ ರಕ್ಷಣೆ, ಇಬ್ಬರ ವಿರುದ್ಧ ಪ್ರಕರಣ ದಾಖಲು..!!

June 20, 2026
ಹಾರಾಡಿ ರೈಲ್ವೆ ಸೇತುವೆ ಕೆಳಭಾಗದಲ್ಲಿ ಕಾಮಗಾರಿ: ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ…!!
Featured

ಹಾರಾಡಿ ರೈಲ್ವೆ ಸೇತುವೆ ಕೆಳಭಾಗದಲ್ಲಿ ಕಾಮಗಾರಿ: ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ…!!

June 20, 2026

Leave a Reply Cancel reply

Your email address will not be published. Required fields are marked *

Recent News

ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!

ಕರ್ನಾಟಕ ಟಿವಿಯ ‘ಜನನಾಯಕ ಲೀಡರ್‘ ಪ್ರಶಸ್ತಿ ಪಡೆದ ಪುತ್ತಿಲ..!!

June 20, 2026
ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

ಬಾವಿಗೆ ಬಿದ್ದು ಅವಳಿ ಮಕ್ಕಳ ದಾರುಣ ಸಾವು; ಕುಟುಂಬದಲ್ಲಿ ಆಕ್ರಂದನ…!!!

June 20, 2026
ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

ದಸರಾಗೆ ಮೈಸೂರಿನಲ್ಲಿ ಕಂಬಳ ನಡೆಸಿ: ಶಾಸಕ ಅಶೋಕ್ ರೈಗೆಸಿ ಎಂ ಡಿ ಕೆ ಶಿವಕುಮಾರ್ ಸೂಚನೆ..!!

June 20, 2026
ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

ಆಲಂಕಾರಿನಲ್ಲಿ ದಂಪತಿ ಮೃತದೇಹ ಪತ್ತೆ: ಪತ್ನಿ ಹತ್ಯೆ ಬಳಿಕ ಪತಿ ಆತ್ಮಹತ್ಯೆ ಶಂಕೆ..!!

June 20, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.