ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಅವರಿಗೆ ಐಸಿಸ್ ಉಗ್ರ ಸಂಘಟನೆಯ ಜೊತೆ ಲಿಂಕ್ ಇರುವ ಬಗ್ಗೆ ಎನ್ಐಎ ತನಿಖೆ ಆಗಬೇಕು ಎಂದು ಯತ್ನಾಳ್ ಕೇಂದ್ರ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ಯತ್ನಾಳ್ ಆರೋಪ ಏನು..?
ತನ್ವೀರ್ ಪೀರಾ ಅವರಿಗೆ ಐಸಿಸ್ ಉಗ್ರ ಸಂಘಟನೆಯ ಜೊತೆ ನಂಟಿದೆ ಅಂತ ಯತ್ನಾಳ್ ಆರೋಪ ಮಾಡಿದ್ರು, ತನ್ವೀರ್ ಪೀರಾ ಐಸಿಸ್ ಬೆಂಬಲ ಇರುವ ವ್ಯಕ್ತಿಯಾಗಿದ್ದು, ಬೇರೆ ಬೇರೆ ದೇಶದಲ್ಲಿ ಹಲವು ವ್ಯಕ್ತಿಗಳನ್ನು ಭೇಟಿ ಆಗಿದ್ದಾರೆ. ಆದ್ರಿಂದ ಈ ಬಗ್ಗೆ ಎನ್ಐಎ ತನಿಖೆ ಮಾಡಿ ಕ್ರಮ ಜರುಗಿಸುವಂತೆ ಯತ್ನಾಳ್ ಅಮಿತ್ ಶಾಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಾತ್ರವಲ್ಲ ಮುಸ್ಲಿಂ ರಾಷ್ಟ್ರಗಳಿಂದ ತನ್ವೀರ ಪೀರಾ ಹಣವನ್ನು ತರುತ್ತಾರೆ. ತನ್ವೀರ ಪೀರಾ ಬಗ್ಗೆ ಕೇಂದ್ರ ತನಿಖಾ ತಂಡದಿಂದ ತನಿಖೆ ಆಗಲಿ. ಐಎಸ್ಐಎಸ್ ಲಿಂಕ್ ಇರುವ ವ್ಯಕ್ತಿಗಳಿಗೆ ತನ್ವೀರ್ ಪೀರಾ ಭೇಟಿ ಆದ ಕುರಿತು ತನಿಖೆ ಮಾಡಿಸಿ. ಸ್ಥಳೀಯ ಪೊಲೀಸರು ರಾಜ್ಯ ಸರ್ಕಾರದ ಒತ್ತಡದ ಪರಿಣಾಮ ಸರಿಯಾಗಿ ತನಿಖೆ ಮಾಡಲ್ಲ ಎಂಬ ಸಂಶಯವಿದೆ. ಎನ್ಐಎ ತಂಡದಿಂದ ಪ್ರಕರಣವನ್ನು ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಅಮಿತ್ ಶಾಗೆ ಪತ್ರ ಯತ್ನಾಳ ಪತ್ರ ಬರೆದಿದ್ದಾರೆ.
ಈ ಹಿಂದೆಯೂ ಸಿದ್ದರಾಮಯ್ಯ ಭೇಟಿ
ತನ್ವೀರ್ ಪೀರ್ ವಿರುದ್ಧ ಶಾಸಕ ಯತ್ನಾಳ್ ಆರೋಪದ ಬೆನ್ನಲ್ಲೆ, ಸಿಎಂ ಸಿದ್ದರಾಮಯ್ಯ ತನ್ವೀರ್ ಪೀರ್ ಭೇಟಿ ಮಾಡಿದ್ದ ಬಗ್ಗೆ ಚರ್ಚೆ ಆರಂಭವಾಗಿದೆ. ಕಳೆದ ನವೆಂಬರ್ 20ರಂದು ಸಿಎಂ ಸಿದ್ದರಾಮಯ್ಯ ವಿಜಯಪುರ ಪ್ರವಾಸದ ವೇಳೆ, ಮುಸ್ಲಿಂ ಧರ್ಮಗುರು ತನ್ವಿರಾ ಪೀರಾ ಅವರನ್ನು ಭೇಟಿ ಮಾಡಿದ್ರು. ಈ ವೇಳೆ, ಸಿದ್ದರಾಮಯ್ಯ ತನ್ವಿರಾ ಪೀರಾ ಅವರ ಆಶೀರ್ವಾದ ಪಡೆದಿದ್ರು. ಇನ್ನು ಸಚಿವರಾದ ಎಂ.ಬಿ ಪಾಟೀಲ್, ಕೆ.ಎನ್ ರಾಜಣ್ಣ, ಶಾಸಕ ಅಶೋಕ್ ಪಟ್ಟಣದ ಸಿಎಂ ಸಾಥ್ ಕೊಟ್ಟಿದ್ರು. ಸದ್ಯ ಐಸಿಸ್ ಜೊತೆ ತನ್ವಿರ್ ಪೀರಾ ನಂಟು ಹೊಂದಿದ್ದಾರೆ ಅನ್ನೋ ಯತ್ನಾಳ್ ಆರೋಪದಿಂದ ಸಿಎಂ ಭೇಟಿ ವಿಚಾರ ಚರ್ಚೆಗೆ ಗ್ರಾಸವಾಗಿದೆ.