ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ- ಕಾರ್ಮಿಕ- ಜನ ವಿರೋಧಿ ನೀತಿಗಳ ವಿರುದ್ದ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತ್ರತ್ವದಲ್ಲಿ ನವೆಂಬರ್ 26ರಂದು ಅಖಿಲ ಭಾರತ ಮಹಾ ಮುಷ್ಕರ ನಡೆಯಲಿದ್ದು,ಅದರ ಯಶಸ್ವಿಗಾಗಿ ನಗರದಲ್ಲಿಂದು ದ.ಕ.ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶ ನಡೆಯಿತು.
![](https://zoomintv.online/wp-content/uploads/2020/11/IMG-20201114-WA0004-1024x512.jpg)
ಸಮಾವೇಶವನ್ನುದ್ದೇಶಿಸಿ CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿ , AITUC ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜ,ಬ್ಯಾಂಕ್ ನೌಕರರ ರಾಷ್ಟ್ರೀಯ ನಾಯಕರಾದ ವಿನ್ಸೆಂಟ್ ಡಿಸೋಜ, ವಿಮಾ ನೌಕರರ ಜಿಲ್ಲಾ ಮುಖಂಡರಾದ ರಾಘವೇಂದ್ರ ರಾವ್,ಸಾರಿಗೆ ನೌಕರರ ರಾಜ್ಯ ಮುಖಂಡರಾದ ಪ್ರವೀಣ್ ಕುಮಾರ್ ರವರು ಮಾತನಾಡಿದರು.
![](https://zoomintv.online/wp-content/uploads/2020/11/IMG-20201114-WA0006.jpg)
CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್,AITUC ದ.ಕ.ಜಿಲ್ಲಾಧ್ಯಕ್ಷರಾದ ಬಿ.ಶೇಖರ್,AICCTU ಜಿಲ್ಲಾ ನಾಯಕರಾದ ಸತೀಶ್ ಕುಮಾರ್ ರವರನ್ನೊಳಗೊಂಡ ಅಧ್ಯಕ್ಷೀಯ ಮಂಡಳಿ ಸಮಾವೇಶವನ್ನು ನಡೆಸಿ ಕೊಟ್ಟಿತು.ಪ್ರಾರಂಭದಲ್ಲಿ AITUC ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್ ರವರು ಸ್ವಾಗತಿಸಿ,ಪ್ರಾಸ್ತಾವಿಕ ಮಾತುಗಳನ್ನಾಡಿದರು.