ಪುತ್ತೂರು : ಶ್ರೀ ಪಂಚಮುಖಿ ಹನುಮಾನ್ ಉತ್ಸವ ಸಮಿತಿ, ಭರತಪುರ, ಕೆಮ್ಮಾಯಿ ( ಶ್ರೀ ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ (ರಿ.) ಭರತಪುರ ಇದರ ಅಂಗಸಂಸ್ಥೆ) ಆಶ್ರಯದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕರು-ಹನುಮದೋಪಾಸಕರಾ ದ ಡಾ. ಶ್ರೀ ರಾಮಚಂದ್ರ ಗುರೂಜಿಯವರ ಶುಭಾಶೀರ್ವಾದಗಳೊಂದಿಗೆ ಏಕ ಜಾತಿ ಧರ್ಮ ಪೀಠಾಧೀಶ್ವರರಾದ ಶ್ರೀ ಸಾಯಿ ಈಶ್ವರ ಗುರೂಜಿಯವರ ಮಾರ್ಗದರ್ಶನದಲ್ಲಿ ನಾಥ್ ಪಂತ ಅಘೋರ ಅಖಾಡ್ ಶ್ರೀ ಮದನ್ ನಾಥ್ ಜೀ ಗುರೂಜಿಯವರ ನೇತೃತ್ವದಲ್ಲಿ, ವೇದಮೂರ್ತಿ ಶ್ರೀ ಶ್ರೀಕೃಷ್ಣ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಲೋಕ ಕಲ್ಯಾಣಾರ್ಥ, ಸಕಲ ಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ ಸಾಮೂಹಿಕ ಹನುಮಯಜ್ಞ, ಸಾಮೂಹಿಕ ರುದ್ರ ಹೋಮ, ಹನುಮಾನ್ ಚಾಲಿಸಾ ಪಾರಾಯಣ, ಕುಣಿತ ಭಜನೆ, ಆಯ್ದ ಫಲಾನುಭವಿಗಳಿಗೆ ಉಚಿತ ಆಹಾರ ಸಾಮಗ್ರಿಗಳ ವಿತರಣೆ ಮತ್ತು ಆಯ್ದ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ (ಶ್ರೀ ಸೌಭಾಗ್ಯ) ಕಾರ್ಯಕ್ರಮ ಮೇ.12 ರಂದು ಕೆಮ್ಮಾಯಿ ಭರತ್ ಪುರ ಶ್ರೀ ಪಂಚಮುಖಿ ಹನುಮಾನ್ ಮಂದಿರದಲ್ಲಿ ನಡೆಯಲಿದೆ.
ಮೇ.12 ರಂದು ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಭರತಪುರ ಶ್ರೀ ಪಂಚಮುಖಿ ಹನುಮಾನ್ ಮಂದಿರದಲ್ಲಿ ಏಕ ಜಾತಿ ಧರ್ಮ ಪೀಠಾಧೀಶ್ವರರಾದ ಶ್ರೀ ಸಾಯಿ ಈಶ್ವರ ಗುರೂಜಿಯವರ ಮಾರ್ಗದರ್ಶನದಲ್ಲಿ, ವೇದಮೂರ್ತಿ ಶ್ರೀ ಶ್ರೀಕೃಷ್ಣ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾಮೂಹಿಕ ಹನುಮಯಜ್ಞ, ಅಘೋರ್ ಅಖಾಡ್ ನಾಥ್ ಪಂತ್ ದ ಶ್ರೀ ಮದನ್ ನಾಥ ಜೀ ಗುರೂಜಿಯವರ ನೇತೃತ್ವದಲ್ಲಿ ಸಾಮೂಹಿಕ ರುದ್ರ ಹೋಮ, ಶ್ರೀ ಪಂಚಮುಖಿ ಹನುಮಾನ್ ದೇವರಿಗೆ 108 ಸೀಯಾಳ ಅಭಿಷೇಕ ನಡೆಯಲಿದೆ.
ಮಾ.12 ರಂದು ರಾತ್ರಿ 8 ಗಂಟೆಗೆ ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವದ ನೇಮೋತ್ಸವ ಜರುಗಲಿದೆ.
ಹಲವು ಗಣ್ಯರು, ಹಲವು ಸಂಸ್ಥಾನಗಳ ಶ್ರೀಗಳು, ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.