ಪುತ್ತೂರು: ನಗರ ಹೊರವಲಯ ನೆಹರು ನಗರದ ಶಿವನಗರ ಎಂಬಲ್ಲಿ ಕಳೆದ 5 ವರ್ಷಗಳಿಂದ ನೃತ್ಯ,ಸಂಗೀತ, ಭಜನೆ, ಲಘು ಸಿನೆಮಾ ನಿರ್ಮಾಣ ಕಲಾ ಚಟುವಟಿಕೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶಿವಮಣಿ ಕಲಾ ಸಂಘ (ರಿ) ಇದರ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಥಮ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಲಿಂಗನಗುಡ್ಡೆ ಶ್ರೀ ಸೋಮಲಿಂಗೇಶ್ವರ ಮಂದಿರದ ವಠಾರದಲ್ಲಿ ಆ.28 ರಂದು ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮಲಿಂಗೇಶ್ವರ ಮಂದಿರದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಸ್ಥಳೀಯ ನಗರಸಭಾ ಸದಸ್ಯರಾದ ಶಿವರಾಮ ಸಪಲ್ಯ ದೀಪ ಬೆಳಗಿಸಿ ಶುಭ ಹಾರೈಕೆಗಳೊಂದಿಗೆ ಚಾಲನೆ ನೀಡಿದರು. ಅರುಣಾ ಆಚಾರ್ಯ ಪ್ರಾರ್ಥನೆ ಹಾಡಿದರು. ಶ್ರೀಮಾನ್ ಸ್ವಾಗತಿಸಿ, ...