ಮಂಗಳೂರು ಇಎಸ್ಐ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 9 ಮಂದಿ ಮಹಿಳಾ ಸಿಬಂದಿಗಳನ್ನು ಇತ್ತೀಚೆಗೆ ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಕಳೆದ ವಾರ ಶಾಸಕ Ashok Kumar Rai ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ವಿವರಿಸಿ, ಮರುನೇಮಕಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದರು.
ಶಾಸಕರ ಮಧ್ಯಸ್ಥಿಕೆ ಹಾಗೂ ಸೂಚನೆಯ ಮೇರೆಗೆ ವಜಾಗೊಂಡಿದ್ದ ಎಲ್ಲಾ 9 ಮಂದಿಗೂ ಮತ್ತೆ ಉದ್ಯೋಗ ದೊರೆತಿದೆ ಎಂದು ತಿಳಿದುಬಂದಿದೆ. ಮರುನೇಮಕಗೊಂಡ ಸಿಬಂದಿಗಳು ಇಂದು ಶಾಸಕ ಅಶೋಕ್ ರೈ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಮ್ಮ ಮನವಿಗೆ ಸ್ಪಂದಿಸಿ ಉದ್ಯೋಗವನ್ನು ಮರಳಿ ದೊರಕಿಸಿಕೊಟ್ಟ ಶಾಸಕರಿಗೆ ಸಿಬಂದಿಗಳು ಧನ್ಯವಾದ ಅರ್ಪಿಸಿದರು.



























