ಮಂಗಳೂರು: ನಗರದ ರಥಬೀದಿಯ ಚಿನ್ನದ ಮಳಿಗೆಗೆ ಕೆಲಸಕ್ಕೆ ತೆರಳಿದ್ದ ಬಜಾಲ್ನ ಪ್ರಿಯಾಂಕ (21)ಎಂಬಾಕೆ ನಾಪತ್ತೆಯಾದ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಥಬೀದಿಯ ಚಿನ್ನದ ಮಳಿಗೆಯಲ್ಲಿ 2 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಈಕೆ ಜೂ.14ರಂದು ಬೆಳಗ್ಗೆ 9:40ಕ್ಕೆ ಮನೆಯಿಂದ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 3:40ಕ್ಕೆ ತನ್ನ ತಾಯಿಗೆ ನಾನು ಮನೆ ಬಿಟ್ಟು ಹೋಗುತ್ತಿದ್ದೆನೆ. ನನ್ನನ್ನು ಹುಡುಕಬೇಡಿ ವಾಟ್ಸಪ್ನಲ್ಲಿ ವಾಯ್ಸ್ ಮೆಸೇಜ್ ಹಾಕಿದ್ದಾರೆ ಎನ್ನಲಾಗಿದೆ.
ಯುವತಿಗಾಗಿ ನಗರದ ವಿವಿಧೆಡೆ ಹುಡುಕಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

























