ಪುತ್ತೂರು: ನಾಥಪಂಥೀಯ ಜೋಗಿ ಸಮಾಜ ಸುಧಾರಕ ಸಂಘ, ಪುತ್ತೂರು ಇದರ ಆಶ್ರಯದಲ್ಲಿ 10ನೇ ವರ್ಷದ ‘ಆಟಿದ ಲೇಸ್ ಕೆಸರ್ಡೊಂಜಿ ದಿನ ’ ಕಾರ್ಯಕ್ರಮವು ಜುಲೈ 19, 2026ರಂದು (ಆದಿತ್ಯವಾರ) ಪೂರ್ವಾಹ್ನ 9.00 ಗಂಟೆಯಿಂದ ಮುಗೇರಡ್ಕದಲ್ಲಿರುವ ಶ್ರೀಮತಿ ಸುಶೀಲ ಜಯರಾಮ ಜೋಗಿ ಅವರ ಮನೆಯ ಎದುರುಗದ್ದೆಯಲ್ಲಿ ನಡೆಯಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ದಯಾನಂದ ಜೋಗಿ ಅಧ್ಯಕ್ಷರ ಮನೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ಧಮಠ, ಮರ್ಕಂಜ, ಸುಳ್ಯ ದ.ಕ. ಇದರ ಅಖಂಡ ಭಾರತ ಸನಾತನ ಸಂತಸಮಿತಿ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ರಾಜೇಶ್ನಾಥ್ಜೀ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಥಪಂಥೀಯ ಜೋಗಿ ಸಮಾಜ ಸುಧಾರಕ ಸಂಘ, ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ದಯಾನಂದ ಜೋಗಿ ಪುತ್ತೂರಮೂಲೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಖ್ಯಾತ ಸ್ಯಾಕ್ಸೋಫೋನ್ ವಾದಕರಾದ ಶ್ರೀ ಪಿ. ಕೆ. ಗಣೇಶ್ ಮತ್ತೂರು, ಜೋಗಿ ಸಮಾಜ ಪುತ್ತೂರು ಇದರ ಗೌರವಾಧ್ಯಕ್ಷರಾದ ಶ್ರೀ ಮೋನಪ್ಪ ಮರುಷ ಮುಗೇರಡ್ಕ, ಕೃಷಿಕರಾದ ಶ್ರೀ ಚೆನ್ನಪ್ಪ ಪುರುಷ ಮುಗೇರಡ್ಕ, ಕೆ.ಎಸ್.ಆರ್.ಟಿ.ಸಿ. ಪುತ್ತೂರು ನಿವೃತ್ತ ಉದ್ಯೋಗಿಗಳಾದ ಶ್ರೀ ಜಯರಾಮ ಪುರುಷ ಮರೀಲು, ಎಲ್.ಐ.ಸಿ. ಪುತ್ತೂರು ನಿವೃತ್ತ ಉದ್ಯೋಗಿಗಳಾದ ಶ್ರೀ ಜಗನ್ನಾಥ ನೆಲ್ಲಿಕಟ್ಟೆ, ಸಮಾಜದ ಮುಖಂಡರಾದ ಶ್ರೀ ಸುಂದರ ಪುರುಷ ಮುಗೇರಡ್ಕ ಹಾಗೂ ಶ್ರೀ ಕುಂಞಣ್ಣ ಪುರುಷ ಮುಗೇರ ಭಾಗವಹಿಸಲಿದ್ದಾರೆ.
ಸಮಾಜದ ಸದಸ್ಯರು, ಬಂಧುಬಳಗ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು ನವೀನ್ ಜೋಗಿ ವಿಶ್ವಾಸ್ ಹಾರ್ಡ್ವೇರ್, ಪ್ರಧಾನ ಕಾರ್ಯದರ್ಶಿ ಜಗನ್ನಾಥ ನೆಲ್ಲಿಕಟ್ಟೆ, ಹಾಗೂ ಪಿ.ಕೆ ಗಣೇಶ್ ನೆಲ್ಲಿಕಟ್ಟೆ. ರವಿ ಮನಿಯ, ಸುಜಾತ ಸತೀಶ್ , ಸೌಮ್ಯಸುಬ್ರಾಯ, ಸಂತೋಷ್ ಜೋಗಿ, ಶಿವಕುಮಾರ್ , ರಘುನಾಥ್, ಹರಿಶ್ಚಂದ್ರ, ಗಣೇಶ್, ಜಯಕುಮಾರ್ ಮರಿಲ್, ದೇವಪ್ಪ ಮೇಸ್ಟ್ರು, ಸತೀಶ್, ಉಮೇಶ್, ರಮೇಶ್, ಯೋಗಿನಾಥ್, ವಿಜಯ ದಯಾನಂದ , ಚಂದ್ರನಾಥ್ , ಹಾಗೂ ಚೈತ್ರ ನಾಗರಾಜ್ ಉಪಸ್ಥಿತರಿದ್ದರು .




























