ಪುತ್ತೂರು: ಕಬಕ ಗ್ರಾಮದ ಪೋಳ್ಯ ಅಂಗನವಾಡಿ ಕೇಂದ್ರದಲ್ಲಿ ಕಳವು ನಡೆದಿರುವ ಕುರಿತು ವರದಿಯಾಗಿದೆ.
ಆ.18 ರಂದು ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿಗೆ ಬಂದಾಗ, ಅಂಗನವಾಡಿ ಕೇಂದ್ರದ ಎದುರಿನ ಬಾಗಿಲು ಮುರಿದಿರುವುದು ಬೆಳಕಿಗೆ ಬಂದಿದೆ.
ಅಂಗನವಾಡಿಯಲ್ಲಿದ್ದ2 ಕುಕ್ಕರ್, 5 ಅಲ್ಯುಮೀನಿಯಂ ಪಾತ್ರೆಗಳ ಮುಚ್ಚಳ, 1 ಅಲ್ಯುಮೀನಿಯಂ ತೋಪು, ಚುನಾವಣಾ ಆಯೋಗದ ಮತಗಟ್ಟೆ ಅಧಿಕಾರಿಯ ಬ್ಯಾಗ್, ಸ್ತ್ರೀಶಕ್ತಿ ಗುಂಪಿನವರ ರೂ.300 ನಗದು ಕಳವಾಗಿರುವ ಕುರಿತು ಅಂಗನವಾಡಿ ಕಾರ್ಯಕರ್ತೆ ಗೀತಾ ಎಂ.ಅವರು ಪೊಲೀಸರಿಗೆ ದೂರು ನೀಡಿದ್ದಾರೆ.





























