Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದೇವಳದ ಜಾಗ ವಶಕ್ಕೆ ಪಡೆಯುತ್ತಿರುವುದೇ ಕೆಲವರ ಆತಂಕಕ್ಕೆ ಕಾರಣ: ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಪಪ್ರಚಾರವೂ ಅಡ್ಡಿಯಾಗದು; 2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ – ಈಶ್ವರ್ ಭಟ್ ಪಂಜಿಗುಡ್ಡೆ..!

    ದೇವಳದ ಜಾಗ ವಶಕ್ಕೆ ಪಡೆಯುತ್ತಿರುವುದೇ ಕೆಲವರ ಆತಂಕಕ್ಕೆ ಕಾರಣ: ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಪಪ್ರಚಾರವೂ ಅಡ್ಡಿಯಾಗದು; 2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ – ಈಶ್ವರ್ ಭಟ್ ಪಂಜಿಗುಡ್ಡೆ..!

    ಪುತ್ತೂರು: ಕಬಕದಲ್ಲಿ ಸರಣಿ ಅಪಘಾತ..!!

    ಪುತ್ತೂರು: ಕಬಕದಲ್ಲಿ ಸರಣಿ ಅಪಘಾತ..!!

    ಕಲ್ಲಡ್ಕದಲ್ಲಿ ಆ.13ರಂದು ವಾಹನ ಜಾಥಾ: ಅನುಮತಿ ಪಡೆದಿಲ್ಲ- ತೊಂದರೆಯಾದರೆ ಕ್ರಮ ಪೊಲೀಸ್ ಇಲಾಖೆ ಎಚ್ಚರಿಕೆ ..!!

    ನೆಲ್ಯಾಡಿ ಯು-ಟರ್ನ್ ಹೋರಾಟಕ್ಕೆ ಷರತ್ತುಬದ್ಧ ಅನುಮತಿ; ರಸ್ತೆ ತಡೆ ಮಾಡಿದರೆ ಕಾನೂನು ಕ್ರಮ..!

    ಪುತ್ತೂರಿನಲ್ಲಿ ಆಚಾರ್ಯ ಪುರಸ್ಕಾರ ಮತ್ತು ಆಚಾರ್ಯ ಕವಿಗೋಷ್ಠಿ ; ಸಮಾಜಸೇವೆಯಲ್ಲಿರುವ ಹಿರಿಯ ಶಿಕ್ಷಕರನ್ನು ಪುರಸ್ಕರಿಸುವುದು ಪವಿತ್ರ ಕಾರ್ಯ-ಡಾ.ತಾಳ್ತಜೆ ವಸಂತ ಕುಮಾರ್.!

    ಪುತ್ತೂರಿನಲ್ಲಿ ಆಚಾರ್ಯ ಪುರಸ್ಕಾರ ಮತ್ತು ಆಚಾರ್ಯ ಕವಿಗೋಷ್ಠಿ ; ಸಮಾಜಸೇವೆಯಲ್ಲಿರುವ ಹಿರಿಯ ಶಿಕ್ಷಕರನ್ನು ಪುರಸ್ಕರಿಸುವುದು ಪವಿತ್ರ ಕಾರ್ಯ-ಡಾ.ತಾಳ್ತಜೆ ವಸಂತ ಕುಮಾರ್.!

    ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 1.47 ಕೋಟಿ ರೂ. ಲಾಭ; ಶೇ.13 ಡಿವಿಡೆಂಡ್ ಘೋಷಣೆ.!

    ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 1.47 ಕೋಟಿ ರೂ. ಲಾಭ; ಶೇ.13 ಡಿವಿಡೆಂಡ್ ಘೋಷಣೆ.!

    ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ವೇಗ: ಐದು ಕಾಮಗಾರಿಗಳಿಗೆ ಶೀಘ್ರ ಚಾಲನೆ : ಅಪವಾದಗಳಿಗೆ ಕಿವಿಗೊಡಬೇಡಿ – ಶಾಸಕ ಅಶೋಕ್ ಕುಮಾರ್ ರೈ.!!

    ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ವೇಗ: ಐದು ಕಾಮಗಾರಿಗಳಿಗೆ ಶೀಘ್ರ ಚಾಲನೆ : ಅಪವಾದಗಳಿಗೆ ಕಿವಿಗೊಡಬೇಡಿ – ಶಾಸಕ ಅಶೋಕ್ ಕುಮಾರ್ ರೈ.!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದೇವಳದ ಜಾಗ ವಶಕ್ಕೆ ಪಡೆಯುತ್ತಿರುವುದೇ ಕೆಲವರ ಆತಂಕಕ್ಕೆ ಕಾರಣ: ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಪಪ್ರಚಾರವೂ ಅಡ್ಡಿಯಾಗದು; 2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ – ಈಶ್ವರ್ ಭಟ್ ಪಂಜಿಗುಡ್ಡೆ..!

    ದೇವಳದ ಜಾಗ ವಶಕ್ಕೆ ಪಡೆಯುತ್ತಿರುವುದೇ ಕೆಲವರ ಆತಂಕಕ್ಕೆ ಕಾರಣ: ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಪಪ್ರಚಾರವೂ ಅಡ್ಡಿಯಾಗದು; 2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ – ಈಶ್ವರ್ ಭಟ್ ಪಂಜಿಗುಡ್ಡೆ..!

    ಪುತ್ತೂರು: ಕಬಕದಲ್ಲಿ ಸರಣಿ ಅಪಘಾತ..!!

    ಪುತ್ತೂರು: ಕಬಕದಲ್ಲಿ ಸರಣಿ ಅಪಘಾತ..!!

    ಕಲ್ಲಡ್ಕದಲ್ಲಿ ಆ.13ರಂದು ವಾಹನ ಜಾಥಾ: ಅನುಮತಿ ಪಡೆದಿಲ್ಲ- ತೊಂದರೆಯಾದರೆ ಕ್ರಮ ಪೊಲೀಸ್ ಇಲಾಖೆ ಎಚ್ಚರಿಕೆ ..!!

    ನೆಲ್ಯಾಡಿ ಯು-ಟರ್ನ್ ಹೋರಾಟಕ್ಕೆ ಷರತ್ತುಬದ್ಧ ಅನುಮತಿ; ರಸ್ತೆ ತಡೆ ಮಾಡಿದರೆ ಕಾನೂನು ಕ್ರಮ..!

    ಪುತ್ತೂರಿನಲ್ಲಿ ಆಚಾರ್ಯ ಪುರಸ್ಕಾರ ಮತ್ತು ಆಚಾರ್ಯ ಕವಿಗೋಷ್ಠಿ ; ಸಮಾಜಸೇವೆಯಲ್ಲಿರುವ ಹಿರಿಯ ಶಿಕ್ಷಕರನ್ನು ಪುರಸ್ಕರಿಸುವುದು ಪವಿತ್ರ ಕಾರ್ಯ-ಡಾ.ತಾಳ್ತಜೆ ವಸಂತ ಕುಮಾರ್.!

    ಪುತ್ತೂರಿನಲ್ಲಿ ಆಚಾರ್ಯ ಪುರಸ್ಕಾರ ಮತ್ತು ಆಚಾರ್ಯ ಕವಿಗೋಷ್ಠಿ ; ಸಮಾಜಸೇವೆಯಲ್ಲಿರುವ ಹಿರಿಯ ಶಿಕ್ಷಕರನ್ನು ಪುರಸ್ಕರಿಸುವುದು ಪವಿತ್ರ ಕಾರ್ಯ-ಡಾ.ತಾಳ್ತಜೆ ವಸಂತ ಕುಮಾರ್.!

    ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 1.47 ಕೋಟಿ ರೂ. ಲಾಭ; ಶೇ.13 ಡಿವಿಡೆಂಡ್ ಘೋಷಣೆ.!

    ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 1.47 ಕೋಟಿ ರೂ. ಲಾಭ; ಶೇ.13 ಡಿವಿಡೆಂಡ್ ಘೋಷಣೆ.!

    ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ವೇಗ: ಐದು ಕಾಮಗಾರಿಗಳಿಗೆ ಶೀಘ್ರ ಚಾಲನೆ : ಅಪವಾದಗಳಿಗೆ ಕಿವಿಗೊಡಬೇಡಿ – ಶಾಸಕ ಅಶೋಕ್ ಕುಮಾರ್ ರೈ.!!

    ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ವೇಗ: ಐದು ಕಾಮಗಾರಿಗಳಿಗೆ ಶೀಘ್ರ ಚಾಲನೆ : ಅಪವಾದಗಳಿಗೆ ಕಿವಿಗೊಡಬೇಡಿ – ಶಾಸಕ ಅಶೋಕ್ ಕುಮಾರ್ ರೈ.!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home Featured

ದೇವಳದ ಜಾಗ ವಶಕ್ಕೆ ಪಡೆಯುತ್ತಿರುವುದೇ ಕೆಲವರ ಆತಂಕಕ್ಕೆ ಕಾರಣ: ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಪಪ್ರಚಾರವೂ ಅಡ್ಡಿಯಾಗದು; 2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ – ಈಶ್ವರ್ ಭಟ್ ಪಂಜಿಗುಡ್ಡೆ..!

September 9, 2026
in Featured, ಪುತ್ತೂರು
0
ದೇವಳದ ಜಾಗ ವಶಕ್ಕೆ ಪಡೆಯುತ್ತಿರುವುದೇ ಕೆಲವರ ಆತಂಕಕ್ಕೆ ಕಾರಣ: ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಪಪ್ರಚಾರವೂ ಅಡ್ಡಿಯಾಗದು; 2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ – ಈಶ್ವರ್ ಭಟ್ ಪಂಜಿಗುಡ್ಡೆ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ವ್ಯವಸ್ಥಾಪನಾ ಸಮಿತಿಯ ಕಾರ್ಯವೈಖರಿ ಕುರಿತು ಕೇಳಿಬರುತ್ತಿರುವ ಆರೋಪಗಳಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸ್ಪಷ್ಟನೆ ನೀಡಿದ್ದಾರೆ.

Advertisement
Advertisement
Advertisement

ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಸಭೆ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಪ್ರಶ್ನೆ ಕೇಳುವ ಹಕ್ಕು ಹೊಂದಿದ್ದಾರೆ. ಆದರೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡುವಾಗ ವಾಸ್ತವಾಂಶಗಳನ್ನು ಅರಿತುಕೊಳ್ಳುವುದು ಅಗತ್ಯ ಎಂದರು.

ವ್ಯವಸ್ಥಾಪನಾ ಸಮಿತಿ ರಚನೆಯಾದ ಬಳಿಕ ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನ ಹಾಗೂ ಭಕ್ತರ ಸಹಕಾರದೊಂದಿಗೆ ದೇವಸ್ಥಾನದಲ್ಲಿ ಹಲವು ಸುಧಾರಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪೂಜಾ ವ್ಯವಸ್ಥೆ, ದೇವಸ್ಥಾನದ ಜಾಗಗಳ ಮರುಸ್ವಾಧೀನ, ಅನ್ನಪ್ರಸಾದ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಕ್ರಮಗಳಿಗೆ ಬಹುತೇಕ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಈಶ್ವರ ಭಟ್ ಹೇಳಿದರು.

Advertisement

ಭಕ್ತರ ಸಹಕಾರದಿಂದ ಅನ್ನಪ್ರಸಾದ ವ್ಯವಸ್ಥೆ

ದೇವಸ್ಥಾನದ ಅನ್ನಪ್ರಸಾದ ವ್ಯವಸ್ಥೆಗೆ ಭಕ್ತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಅಕ್ಕಿಗಾಗಿ ಭಕ್ತರಲ್ಲಿ ಮನವಿ ಮಾಡಿದ ಬಳಿಕ ಸುಮಾರು ₹50 ಲಕ್ಷ ಮೌಲ್ಯದ ವ್ಯವಸ್ಥೆ ರೂಪುಗೊಂಡಿದೆ. ದೇವಸ್ಥಾನದ ಅನ್ನಪ್ರಸಾದಕ್ಕೆ ಅಗತ್ಯವಾದ ಅಕ್ಕಿಯನ್ನು ಭಕ್ತರೇ ನೀಡುತ್ತಿರುವುದು ವ್ಯವಸ್ಥೆಗೆ ದೊರೆಯುತ್ತಿರುವ ಜನಬೆಂಬಲಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.

Advertisement

ಅದೇ ರೀತಿ ಸ್ವರ್ಣ ಕವಚ ನಿರ್ಮಾಣಕ್ಕಾಗಿ ಈಗಾಗಲೇ ಭಕ್ತರಿಂದ 520 ಗ್ರಾಂ ಚಿನ್ನ ಸಂಗ್ರಹವಾಗಿದೆ. ದಾನಿಗಳಿಂದ ಸ್ವೀಕರಿಸಲಾಗುತ್ತಿರುವ ಚಿನ್ನ ಹಾಗೂ ಇತರ ದೇಣಿಗೆಗಳ ವಿವರಗಳನ್ನು ಪ್ರತಿದಿನದ ಲೆಕ್ಕಪತ್ರದಲ್ಲಿ ದಾಖಲಿಸಲಾಗುತ್ತಿದ್ದು, ದಾನಿಗಳಿಗೆ ರಶೀದಿ ನೀಡಲಾಗುತ್ತಿದೆ. ಪ್ರಸ್ತುತ 520 ಗ್ರಾಂ ಚಿನ್ನವನ್ನು ದೇವಸ್ಥಾನದ ಲಾಕರ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಈಶ್ವರ ಭಟ್ ಹೇಳಿದರು.

₹80 ಕೋಟಿ ಮೌಲ್ಯದ 11 ಎಕರೆ ಜಾಗ ವಶಕ್ಕೆ

ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ಕೆಲವರು ಮಾಡುತ್ತಿರುವ ಆರೋಪಗಳ ಹಿಂದೆ ಬೇರೆ ಉದ್ದೇಶಗಳಿರಬಹುದು ಎಂದು ಈಶ್ವರ ಭಟ್ ಅಭಿಪ್ರಾಯಪಟ್ಟರು.

ದೇವಸ್ಥಾನಕ್ಕೆ ಸೇರಿದ ಸುಮಾರು ₹80 ಕೋಟಿ ಮೌಲ್ಯದ 11 ಎಕರೆ ಜಾಗವನ್ನು ಈಗಾಗಲೇ ದೇವಳದ ವಶಕ್ಕೆ ಪಡೆಯಲಾಗಿದೆ. ಇನ್ನೂ ಕೋಟ್ಯಂತರ ರೂಪಾಯಿ ಮೌಲ್ಯದ ದೇವಸ್ಥಾನದ ಜಾಗ ಕೆಲವರ ವಶದಲ್ಲಿದ್ದು, ಸುಮಾರು ₹10 ಕೋಟಿ ಮೌಲ್ಯದ ಜಾಗವನ್ನು ಶೀಘ್ರದಲ್ಲೇ ದೇವಸ್ಥಾನದ ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ದೇವಸ್ಥಾನದ ಜಾಗ ತಮ್ಮ ಕೈತಪ್ಪುವ ಆತಂಕದಿಂದ ಕೆಲವರು ವ್ಯವಸ್ಥಾಪನಾ ಸಮಿತಿಯ ವಿರುದ್ಧ ಅಪಪ್ರಚಾರ ನಡೆಸಿ, ಸಮಿತಿಯನ್ನು ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ತಮ್ಮ ಅಭಿಪ್ರಾಯ ಎಂದು ಈಶ್ವರ ಭಟ್ ಆರೋಪಿಸಿದರು.

“ಮಹಾಲಿಂಗೇಶ್ವರ ದೇವರಿಗೆ ಸೇರಿದ ಜಾಗವನ್ನು ನಮ್ಮ ಸಮಿತಿ ಇರುವವರೆಗೆ ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಯಾರೇ ಅಡ್ಡಿಪಡಿಸಿದರೂ ನಾವು ಹೆದರುವುದಿಲ್ಲ. ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಿಯೇ ತೀರುತ್ತೇವೆ,” ಎಂದು ಅವರು ಸ್ಪಷ್ಟಪಡಿಸಿದರು.

2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ

ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಮುಂದುವರಿಸಿ, 2028ರಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ಗುರಿಯನ್ನು ಹೊಂದಲಾಗಿದೆ ಎಂದು ಈಶ್ವರ ಭಟ್ ತಿಳಿಸಿದರು.

ದೇವಸ್ಥಾನದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರವೇ ವ್ಯವಸ್ಥಾಪನಾ ಸಮಿತಿಯ ಪ್ರಮುಖ ಉದ್ದೇಶವಾಗಿದ್ದು, ಯಾವುದೇ ಅಪಪ್ರಚಾರಗಳಿಗೆ ಭಕ್ತರು ಕಿವಿಗೊಡದೆ ವಾಸ್ತವಾಂಶವನ್ನು ಅರಿತು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಬ್ರಹ್ಮಕಲಶೋತ್ಸವದ ದಿನಾಂಕವನ್ನು ತಂತ್ರಿಗಳು ನಿಗದಿಪಡಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Previous Post

ಪುತ್ತೂರು: ಕಬಕದಲ್ಲಿ ಸರಣಿ ಅಪಘಾತ..!!

OtherNews

ಪುತ್ತೂರು: ಕಬಕದಲ್ಲಿ ಸರಣಿ ಅಪಘಾತ..!!
ಕ್ರೈಮ್

ಪುತ್ತೂರು: ಕಬಕದಲ್ಲಿ ಸರಣಿ ಅಪಘಾತ..!!

September 8, 2026
ಕಲ್ಲಡ್ಕದಲ್ಲಿ ಆ.13ರಂದು ವಾಹನ ಜಾಥಾ: ಅನುಮತಿ ಪಡೆದಿಲ್ಲ- ತೊಂದರೆಯಾದರೆ ಕ್ರಮ ಪೊಲೀಸ್ ಇಲಾಖೆ ಎಚ್ಚರಿಕೆ ..!!
Featured

ನೆಲ್ಯಾಡಿ ಯು-ಟರ್ನ್ ಹೋರಾಟಕ್ಕೆ ಷರತ್ತುಬದ್ಧ ಅನುಮತಿ; ರಸ್ತೆ ತಡೆ ಮಾಡಿದರೆ ಕಾನೂನು ಕ್ರಮ..!

September 8, 2026
ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ವೇಗ: ಐದು ಕಾಮಗಾರಿಗಳಿಗೆ ಶೀಘ್ರ ಚಾಲನೆ : ಅಪವಾದಗಳಿಗೆ ಕಿವಿಗೊಡಬೇಡಿ – ಶಾಸಕ ಅಶೋಕ್ ಕುಮಾರ್ ರೈ.!!
Featured

ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ವೇಗ: ಐದು ಕಾಮಗಾರಿಗಳಿಗೆ ಶೀಘ್ರ ಚಾಲನೆ : ಅಪವಾದಗಳಿಗೆ ಕಿವಿಗೊಡಬೇಡಿ – ಶಾಸಕ ಅಶೋಕ್ ಕುಮಾರ್ ರೈ.!!

September 8, 2026
ಪುತ್ತೂರು :ಡಾ. ಬಿ.ಆರ್. ಅಂಬೇಡ್ಕರ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕಾನೂನು ಕ್ರಮಕ್ಕೆ ಒತ್ತಾಯ..!!
ಕ್ರೈಮ್

ಪುತ್ತೂರು :ಡಾ. ಬಿ.ಆರ್. ಅಂಬೇಡ್ಕರ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕಾನೂನು ಕ್ರಮಕ್ಕೆ ಒತ್ತಾಯ..!!

September 8, 2026
ವಿಟ್ಲ: ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ — ಮೂವರ ಬಂಧನ
Featured

ವಿಟ್ಲ: ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ — ಮೂವರ ಬಂಧನ

September 8, 2026
ಪುತ್ತೂರು:ಹೂವಿನ ವ್ಯಾಪಾರಿ ಕಲ್ಲಾರೆ ನಿವಾಸಿ ಲವ ಕುಮಾರ್ ನಿಧನ..!
Featured

ಪುತ್ತೂರು:ಹೂವಿನ ವ್ಯಾಪಾರಿ ಕಲ್ಲಾರೆ ನಿವಾಸಿ ಲವ ಕುಮಾರ್ ನಿಧನ..!

September 8, 2026

Leave a Reply Cancel reply

Your email address will not be published. Required fields are marked *

Recent News

ದೇವಳದ ಜಾಗ ವಶಕ್ಕೆ ಪಡೆಯುತ್ತಿರುವುದೇ ಕೆಲವರ ಆತಂಕಕ್ಕೆ ಕಾರಣ: ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಪಪ್ರಚಾರವೂ ಅಡ್ಡಿಯಾಗದು; 2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ – ಈಶ್ವರ್ ಭಟ್ ಪಂಜಿಗುಡ್ಡೆ..!

ದೇವಳದ ಜಾಗ ವಶಕ್ಕೆ ಪಡೆಯುತ್ತಿರುವುದೇ ಕೆಲವರ ಆತಂಕಕ್ಕೆ ಕಾರಣ: ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಪಪ್ರಚಾರವೂ ಅಡ್ಡಿಯಾಗದು; 2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ – ಈಶ್ವರ್ ಭಟ್ ಪಂಜಿಗುಡ್ಡೆ..!

September 9, 2026
ಪುತ್ತೂರು: ಕಬಕದಲ್ಲಿ ಸರಣಿ ಅಪಘಾತ..!!

ಪುತ್ತೂರು: ಕಬಕದಲ್ಲಿ ಸರಣಿ ಅಪಘಾತ..!!

September 8, 2026
ಕಲ್ಲಡ್ಕದಲ್ಲಿ ಆ.13ರಂದು ವಾಹನ ಜಾಥಾ: ಅನುಮತಿ ಪಡೆದಿಲ್ಲ- ತೊಂದರೆಯಾದರೆ ಕ್ರಮ ಪೊಲೀಸ್ ಇಲಾಖೆ ಎಚ್ಚರಿಕೆ ..!!

ನೆಲ್ಯಾಡಿ ಯು-ಟರ್ನ್ ಹೋರಾಟಕ್ಕೆ ಷರತ್ತುಬದ್ಧ ಅನುಮತಿ; ರಸ್ತೆ ತಡೆ ಮಾಡಿದರೆ ಕಾನೂನು ಕ್ರಮ..!

September 8, 2026
ಪುತ್ತೂರಿನಲ್ಲಿ ಆಚಾರ್ಯ ಪುರಸ್ಕಾರ ಮತ್ತು ಆಚಾರ್ಯ ಕವಿಗೋಷ್ಠಿ ; ಸಮಾಜಸೇವೆಯಲ್ಲಿರುವ ಹಿರಿಯ ಶಿಕ್ಷಕರನ್ನು ಪುರಸ್ಕರಿಸುವುದು ಪವಿತ್ರ ಕಾರ್ಯ-ಡಾ.ತಾಳ್ತಜೆ ವಸಂತ ಕುಮಾರ್.!

ಪುತ್ತೂರಿನಲ್ಲಿ ಆಚಾರ್ಯ ಪುರಸ್ಕಾರ ಮತ್ತು ಆಚಾರ್ಯ ಕವಿಗೋಷ್ಠಿ ; ಸಮಾಜಸೇವೆಯಲ್ಲಿರುವ ಹಿರಿಯ ಶಿಕ್ಷಕರನ್ನು ಪುರಸ್ಕರಿಸುವುದು ಪವಿತ್ರ ಕಾರ್ಯ-ಡಾ.ತಾಳ್ತಜೆ ವಸಂತ ಕುಮಾರ್.!

September 8, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.