ಪುತ್ತೂರು : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಜು.7 ರಂದು ಸಂಜೆ ನಡೆಯಲಿದೆ.ಈ ಬಾರಿ ಕರ್ನಾಟಕದ ಇಬ್ಬರು ಸಂಸದರಿಗೆ ಸಚಿವ ಸ್ಥಾನ ಸಿಗುವುದು ನಿಚ್ಚಳವಾಗಿದೆ.
ಹೀಗಾಗಿ ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರತಾಪ ಸಿಂಹ,ಉಮೇಶ್ ಜಾಧವ್,ರಮೇಶ್ ಜಿಣಜಿಣಗಿ ಅವರ ಹೆಸರೂ ಕೇಳಿ ಬರುತ್ತಿದೆ. ಆದರೆ ಯಾರೂ ಕೂಡ ದೆಹಲಿಯಿಂದ ಬುಲಾವ್ ಬಂದಿರುವ ಬಗ್ಗೆ ಬಹಿರಂಗ ಪಡಿಸಿಲ್ಲ.