ಪುತ್ತೂರು : ಬೈಕ್ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.15 ರಂದು ನಸುಕಿನ ಜಾವ ನಡೆದಿದೆ.
![](https://zoomintv.online/wp-content/uploads/2020/12/WhatsApp-Image-2020-12-15-at-9.30.18-AM.jpeg)
ಮೃತರನ್ನು ಬೈಕ್ ಸವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಬಂಟ್ವಾಳ ನಿವಾಸಿ ವೆಂಕಟ್ರಮಣ ಹೊಳ್ಳ ಎಂದು ಗುರುತಿಸಲಾಗಿದೆ. .ಪುತ್ತೂರಿನಿಂದ ಬಂಟ್ವಾಳ ಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಬಕ ಸಮೀಪ ಪೋಳ್ಯ ಎಂಬಲ್ಲಿ ಅಳವಡಿಸಲಾದ ಬ್ಯಾರಿಕೇಡ್ ಬಳಿ ಈ ಅಪಘಾತ ಸಂಭವಿಸಿದೆ.
![](https://zoomintv.online/wp-content/uploads/2020/12/WhatsApp-Image-2020-12-15-at-8.57.04-AM-1024x872.jpeg)