ಪುತ್ತೂರು: ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಧನ್ಯಕುಮಾರ್ ಬೆಳಂದೂರು ರವರು ನೇಮಕಗೊಂಡಿದ್ದಾರೆ.
ವಜ್ರ ತೇಜಸ್ ಸಮಾಜ ಸೇವಾ ಸಂಘದ ಕಾರ್ಯದರ್ಶಿಯಾಗಿ, ಬಜರಂಗದಳದ ಬೆಳಂದೂರಿನ ಗ್ರಾಮ ಸಮಿತಿ ಸಂಚಾಲಕರಾಗಿ, ವಲಯ ಸಂಚಾಲಕರಾಗಿ, ಜಿಲ್ಲಾ ಗೋರಕ್ಷಾ ಪ್ರಮುಖರಾಗಿ, ಜಿಲ್ಲಾ ಸಂಪರ್ಕ ಪ್ರಮುಖ
ಆಗಿ ಕಾರ್ಯ ನಿರ್ವಹಿಸಿದ್ದ ಧನ್ಯಕುಮಾರ್ ಅವರು ಪ್ರಸ್ತುತ ಪುತ್ತೂರು ತಾಲೂಕಿನ ಜೈ ಭಾರತ್ ಲಾರಿ ಚಾಲಕ
ಮಾಲಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸ್ವಾತಂತ್ರ್ಯ ವೀರ ಸಾವರ್ಕರ್ ಅವರಿಂದ ಸ್ಥಾಪಿತವಾದ ಮತ್ತು ಕಟ್ಟಾ ಹಿಂದುತ್ವವಾದಿ ಪಕ್ಷವಾಗಿ ಗುರುತಿಸಿಕೊಂಡಿರುವ ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷವನ್ನು ಇದೀಗ ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟಿಸಲು ಯೋಜನೆ ರೂಪಿಸಲಾಗಿದ್ದು ಇದರ ಪ್ರಥಮ ಹಂತವಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಧನ್ಯಕುಮಾರ್ ಬೆಳಂದೂರುರವರನ್ನು ನೇಮಕಗೊಳಿಸಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಈ ಪಕ್ಷ ಸಂಘಟನೆಗೆ ಸಿದ್ಧತೆ ನಡೆಸಲಾಗಿದ್ದು ವಿಶ್ವ ಹಿಂದೂ
ಪರಿಷದ್ ಮುಖಂಡರಾಗಿದ್ದ ನವೀನ್ ಕುಲಾಲ್ ಸಹಿತ ಹಲವರು ವಿವಿಧ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.