ಪುತ್ತೂರು: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸ್ವಾತಂತ್ರ್ಯ ರಥವನ್ನು ತಡೆದು ಗೊಂದಲ ನಡೆಸಿದ ಘಟನೆ ಆ.15 ರಂದು ಕಬಕದಲ್ಲಿ ನಡೆದಿದ್ದು, ಈ ಘಟನೆ ವಿರೋಧಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಕಬಕ ಜಂಕ್ಷನ್ ನಲ್ಲಿ ಸಂಘ ಪರಿವಾರದ ನೂರಾರು ಕಾರ್ಯಕರ್ತರು ಇಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಶರಣ್ ಪಂಪ್ ವೆಲ್,ಮುರಳಿಕೃಷ್ಣ ಹಸಂತಡ್ಕ,ಆರ್ ಸಿ ನಾರಾಯಣ್,ಜಗನ್ನಿವಾಸ್ ರಾವ್, ಚಿನ್ಮಯ್ ರೈ,ಜೀವಂಧರ್ ಜೈನ್, ಅಜಿತ್ ರೈ ಹೊಸಮನೆ, ಕೃಷ್ಣ ಪ್ರಸನ್ನ, ಸಾಜ ರಾಧಾಕೃಷ್ಣ ಆಳ್ವ, ನರಸಿಂಹ ಶೆಟ್ಟಿ ಮಾಣಿ, ಗಣರಾಜ್ ಭಟ್ ಸೇರಿದಂತೆ ಹಿಂದೂ ಮುಖಂಡರು ಹಾಗೂ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.