ಪುತ್ತೂರು: ಕಾಂಗ್ರೆಸ್ ಎಸ್ಸಿ ಘಟಕದ ವತಿಯಿಂದ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯ ಗ್ರಾಮದ ಮಲಾರ್ ನಲ್ಲಿರುವ ಬಡ ದಲಿತ ಕುಟುಂಬದ ಸಂತ್ರಸ್ತರ ಮನೆಗೆ ಭೇಟಿ ನೀಡಿ ಅವರಿಗೆ ಒಂದು ತಿಂಗಳಿಗೆ ಬೇಕಾದಂತಹ ಆಹಾರ ಸಾಮಗ್ರಿಗಳನ್ನು ಒದಗಿಸಲಾಯಿತು.
ಕಳೆದ 7 ವರ್ಷದಿಂದ ಈ ಬಡ ಕುಟುಂಬಕ್ಕೆ ವಿದ್ಯುತ್ ನೀರಿನ ವ್ಯವಸ್ಥೆ ಇಲ್ಲದೆ ಕಷ್ಟದಲ್ಲಿರುವುದನ್ನು ಕಂಡು ತಕ್ಷಣವೇ ಸ್ಥಳೀಯ ಮೆಸ್ಕಾಂ ಅಧಿಕಾರಿಯವರಿಗೆ ಕರೆ ಮಾಡಿ ವಿದ್ಯುತ್ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಲಾಯಿತು, ಮನವಿಗೆ ಕೂಡಲೇ ಸ್ಪಂದಿಸಿದ ಮೆಸ್ಕಾಂ ಅಧಿಕಾರಿಗಳು ಒಂದು ವಾರದ ಒಳಗೆ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದ್ದಾರೆ. ಅದೇ ರೀತಿ ಪಡಿತರ ಚೀಟಿಯನ್ನು ಅಪ್ಡೇಟ್ ಮಾಡದೆ ಇರುವುದರಿಂದ ಅವರಿಗೆ ದೊರೆಯಬೇಕಾದ ಪಡಿತರ ವ್ಯವಸ್ಥೆಯಿಂದ ವಂಚಿತರಾಗಿ ಕಷ್ಟ ಅನುಭವಿಸುತ್ತಿದ್ದನ್ನು ಕಂಡು ಅವರಿಗೆ ಪಡಿತರ ಚೀಟಿಯನ್ನು ಅಪ್ಡೇಟ್ ಮಾಡಿಕೊಡುವುದಾಗಿ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾದ ಕೇಶವ ಪಡೀಲ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಯುವ ದಲಿತ ಮುಖಂಡರು ಯಂಗ್ ಬ್ರಿಗೇಡ್ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಅಭಿಷೇಕ್ ಬೆಳ್ಳಿಪ್ಪಾಡಿ, ಗಣೇಶ್ ಪಡೀಲ್,ಸುಹೈಲ್ ಸಂಟ್ಯಾರ್,ವಿಶಾಂಕ್, ಶರತ್ ಪಡೀಲ್, ಕಿರಣ್ ಉಪಸ್ಥಿತರಿದ್ದರು.