ಬಂಟ್ವಾಳ: ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದ ಆನ್ವಯ ಸೆ.07 ನೇ ಮಂಗಳವಾರದಿಂದ ಭಾದ್ರಪದ ಶುಕ್ಲ ಚೌತಿಯ ದಿನ ದಿನಾಂಕ : 10-09-2021ನೇ ಶುಕ್ರವಾರದ ವರೆಗೆ ಜರಗಬೇಕಿದ್ದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾತೀರ್ಥದಲ್ಲಿ ಭಕ್ತಾಧಿಗಳ ತೀರ್ಥ ಸ್ನಾನ ವನ್ನು ಈ ವರ್ಷ ರದ್ದು ಪಡಿಸಲಾಗಿದೆ ಮತ್ತು ಭಕ್ತಾದಿಗಳಿಗೆ ಗುಹೆ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು
ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಾಣಿಗುತ್ತು ಸಚಿನ್ ರೈ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.