ಪುತ್ತೂರು: ಕೆಲ ದಿನಗಳು ಹಿಂದೆ ನಿಧನರಾದ ಪುತ್ತೂರು ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞರಾದ ಡಾ. ಸಂದೀಪ್ ರವರಿಗೆ ಆಸ್ಪತ್ರೆಯ ಮುಂಭಾಗದಲ್ಲಿರುವ ಬಿಎಂಎಸ್ ಆಟೋ ಚಾಲಕರ ಮಾಲಕರ ಸಂಘ ವತಿಯಿಂದ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೋಹನ್ ಹೆಗ್ಡೆ ,ಬಿಎಂಎಸ್ ಅಧ್ಯಕ್ಷ ಬಾಲಕೃಷ್ಣ ಗೌಡ, ನಾರಾಯಣ ಗೌಡ, ಮನೋಹರ್ ಕೋಡಿಜಾಲ್, ಸತೀಶ್ ಕುಮಾರ್,ಬಿಎಂಎಸ್ ನ ಪ್ರಧಾನ ಕಾರ್ಯದರ್ಶಿ, ಲೋಕೇಶ್ ತೆಂಕಿಲ,ಹುಸೈನ್, ರಾಜೇಶ್, ದೇವಪ್ಪ ಗೌಡ, ಪತ್ರಕರ್ತ ಸಂಶುದ್ದೀನ್ ಸಂಪ್ಯ ಉಪಸ್ಥಿತರಿದ್ದರು.