ವಿಟ್ಲ: ಖಾಸಗಿ ಬಸ್ ನಿಲ್ದಾಣದಲ್ಲಿ ಬೀದಿದೀಪ ಕೆಟ್ಟು ಹತ್ತು ದಿನಗಳಾದರೂ ಇನ್ನೂ ದುರಸ್ಥಿಗೆಂದು ಕೊಂಡೊಯ್ಯಿದ ಬೀದಿದೀಪಗಳನ್ನು ಅಳವಡಿಸಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ಸಂಚರಿಸಲು ಬೀದಿದೀಪ ಅವಶ್ಯ. ಸರ್ಕಾರವೂ ಕೂಡಾ ಬೀದಿದೀಪ ಅಳವಡಿಸುವ ಯೋಜನೆಯನ್ನು ಕೈಗೊಂಡಿದ್ದರೂ ಈ ಸೇವೆಯಲ್ಲಿ ವಿಟ್ಲದಲ್ಲಿ ಪಟ್ಟಣ ಪಂಚಾಯತ್ ಯಾವುದೇ ಶೀಘ್ರ ಸ್ಪಂದನೆಯನ್ನು ನೀಡುತ್ತಿಲ್ಲ ಸಾರ್ವಜನಿಕರು ದೂರುತ್ತಿದ್ದಾರೆ.
ಬೀದಿದೀಪ ಅಳವಡಿಸಲು ಯೋಜನೆಗೈದು, ಬೇಕಾದ ಪರಿಕರಗಳನ್ನು ತಂದು ಹತ್ತು ದಿನಗಳಾದರೂ ಇನ್ನೂ ಕೂಡಾ ಬೀದಿದೀಪ ಅಳವಡಿಕೆಯಾಗಿಲ್ಲ, ಈ ಬಗ್ಗೆ ಶೀಘ್ರ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.