ಪುತ್ತೂರು: ಆದರ್ಶ ಆಸ್ಪತ್ರೆಯಿಂದ ದೇವಸ್ಥಾನಕ್ಕೆ ಹೋಗುವ ಕಾಂಕ್ರೇಟ್ ರಸ್ತೆಯ ಪಕ್ಕದಲ್ಲಿರುವ ಜನನಿ ಎಂಬ ಮನೆಯಿಂದ ಕಳ್ಳನೊಬ್ಬ ಅಡಿಕೆಯನ್ನು ಕದ್ದೊಯ್ದ ಘಟನೆ ನ.15 ರಂದು ರಾತ್ರಿ ನಡೆದಿದೆ.
ಕಳ್ಳನೊಬ್ಬ ಮನೆಯಂಗಳದಲ್ಲಿದ್ದ ಅಡಿಕೆಯನ್ನು ಕದ್ದೊಯ್ಯುತ್ತಿದ್ದ ದೃಶ್ಯವು ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಈ ಕಳ್ಳತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ…
ಘಟನೆ ಬಗ್ಗೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಳ್ಳನ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.