Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ನ.ಪಂ. ಕಚೇರಿಯಲ್ಲಿ ಗಲಾಟೆ: ಮಹಿಳಾ ಸಿಬ್ಬಂದಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ; ಬಿಲ್ ಕಲೆಕ್ಟರ್‌ಗೆ ಹಲ್ಲೆ : ತಡೆಯಲು ಹೋದ ವ್ಯಕ್ತಿಗೂ ಧರ್ಮದೇಟು..!!

    ಕಾರಿಗೆ‌ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ವಂಚಕರು ಬೆಂಗಳೂರಿನಲ್ಲಿ ಅರೆಸ್ಟ್‌..!!

    ಕಾರಿಗೆ‌ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ವಂಚಕರು ಬೆಂಗಳೂರಿನಲ್ಲಿ ಅರೆಸ್ಟ್‌..!!

    ಪುತ್ತೂರು ಬಸ್ ನಿಲ್ದಾಣದ ಬಳಿ ಗಲಾಟೆ: ಯುವತಿಗೆ ಕಿರುಕುಳ ಆರೋಪ, ಮಾತಿನ ಚಕಮಕಿ ಬಳಿಕ ತಳ್ಳಾಟ..!!

    ಪುತ್ತೂರು ಬಸ್ ನಿಲ್ದಾಣದ ಬಳಿ ಗಲಾಟೆ: ಯುವತಿಗೆ ಕಿರುಕುಳ ಆರೋಪ, ಮಾತಿನ ಚಕಮಕಿ ಬಳಿಕ ತಳ್ಳಾಟ..!!

    (ಜು.04) ಕಕ್ಕಿಂಜೆಯಲ್ಲಿ ಮಂಡೋವಿ ಮೋಟಾರ್ಸ್‌ನ ಹೊಸ ಅರೆನಾ ಸ್ಯಾಟಲೈಟ್ ಶಾಖೆ ಆರಂಭ..!!

    (ಜು.04) ಕಕ್ಕಿಂಜೆಯಲ್ಲಿ ಮಂಡೋವಿ ಮೋಟಾರ್ಸ್‌ನ ಹೊಸ ಅರೆನಾ ಸ್ಯಾಟಲೈಟ್ ಶಾಖೆ ಆರಂಭ..!!

    ಮದುವೆ ಭರವಸೆ ನೀಡಿ ವಂಚನೆ ಪ್ರಕರಣ: ಹೈಕೋರ್ಟ್ ಸೂಚನೆಯಂತೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಎರಡೂ ತಂಡಗಳ ವಿಚಾರಣೆ…!!

    ಮದುವೆ ಭರವಸೆ ನೀಡಿ ವಂಚನೆ ಪ್ರಕರಣ: ಹೈಕೋರ್ಟ್ ಸೂಚನೆಯಂತೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಎರಡೂ ತಂಡಗಳ ವಿಚಾರಣೆ…!!

    ಆರ್‌ಎಸ್‌ಎಸ್‌ ನೋಂದಣಿ ವಿವಾದ; ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಪ್ರತಿಕ್ರಿಯೆ ಬೇಡ ಎಂದ ಸಂಘ..!!!

    ಆರ್‌ಎಸ್‌ಎಸ್‌ ನೋಂದಣಿ ವಿವಾದ; ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಪ್ರತಿಕ್ರಿಯೆ ಬೇಡ ಎಂದ ಸಂಘ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ನ.ಪಂ. ಕಚೇರಿಯಲ್ಲಿ ಗಲಾಟೆ: ಮಹಿಳಾ ಸಿಬ್ಬಂದಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ; ಬಿಲ್ ಕಲೆಕ್ಟರ್‌ಗೆ ಹಲ್ಲೆ : ತಡೆಯಲು ಹೋದ ವ್ಯಕ್ತಿಗೂ ಧರ್ಮದೇಟು..!!

    ಕಾರಿಗೆ‌ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ವಂಚಕರು ಬೆಂಗಳೂರಿನಲ್ಲಿ ಅರೆಸ್ಟ್‌..!!

    ಕಾರಿಗೆ‌ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ವಂಚಕರು ಬೆಂಗಳೂರಿನಲ್ಲಿ ಅರೆಸ್ಟ್‌..!!

    ಪುತ್ತೂರು ಬಸ್ ನಿಲ್ದಾಣದ ಬಳಿ ಗಲಾಟೆ: ಯುವತಿಗೆ ಕಿರುಕುಳ ಆರೋಪ, ಮಾತಿನ ಚಕಮಕಿ ಬಳಿಕ ತಳ್ಳಾಟ..!!

    ಪುತ್ತೂರು ಬಸ್ ನಿಲ್ದಾಣದ ಬಳಿ ಗಲಾಟೆ: ಯುವತಿಗೆ ಕಿರುಕುಳ ಆರೋಪ, ಮಾತಿನ ಚಕಮಕಿ ಬಳಿಕ ತಳ್ಳಾಟ..!!

    (ಜು.04) ಕಕ್ಕಿಂಜೆಯಲ್ಲಿ ಮಂಡೋವಿ ಮೋಟಾರ್ಸ್‌ನ ಹೊಸ ಅರೆನಾ ಸ್ಯಾಟಲೈಟ್ ಶಾಖೆ ಆರಂಭ..!!

    (ಜು.04) ಕಕ್ಕಿಂಜೆಯಲ್ಲಿ ಮಂಡೋವಿ ಮೋಟಾರ್ಸ್‌ನ ಹೊಸ ಅರೆನಾ ಸ್ಯಾಟಲೈಟ್ ಶಾಖೆ ಆರಂಭ..!!

    ಮದುವೆ ಭರವಸೆ ನೀಡಿ ವಂಚನೆ ಪ್ರಕರಣ: ಹೈಕೋರ್ಟ್ ಸೂಚನೆಯಂತೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಎರಡೂ ತಂಡಗಳ ವಿಚಾರಣೆ…!!

    ಮದುವೆ ಭರವಸೆ ನೀಡಿ ವಂಚನೆ ಪ್ರಕರಣ: ಹೈಕೋರ್ಟ್ ಸೂಚನೆಯಂತೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಎರಡೂ ತಂಡಗಳ ವಿಚಾರಣೆ…!!

    ಆರ್‌ಎಸ್‌ಎಸ್‌ ನೋಂದಣಿ ವಿವಾದ; ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಪ್ರತಿಕ್ರಿಯೆ ಬೇಡ ಎಂದ ಸಂಘ..!!!

    ಆರ್‌ಎಸ್‌ಎಸ್‌ ನೋಂದಣಿ ವಿವಾದ; ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಪ್ರತಿಕ್ರಿಯೆ ಬೇಡ ಎಂದ ಸಂಘ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home Featured

ಹಳೆಯ ನೋಟು ಬದಲಾವಣೆಗೆ ಕಮೀಷನ್ ನೀಡುವುದಾಗಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ:; ಪುತ್ತೂರಿನ ಓರ್ವನ ಸಹಿತ ಐವರ ಬಂಧನ

November 23, 2021
in Featured, ಕ್ರೈಮ್, ಪುತ್ತೂರು, ಬೆಳ್ತಂಗಡಿ
0
ಹಳೆಯ ನೋಟು ಬದಲಾವಣೆಗೆ ಕಮೀಷನ್ ನೀಡುವುದಾಗಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ:; ಪುತ್ತೂರಿನ ಓರ್ವನ ಸಹಿತ ಐವರ ಬಂಧನ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ವಿಲೇವಾರಿಗೆ ಕಷ್ಟವಾಗಿರುವ ಹಳೆಯ ನೋಟುಗಳನ್ನು ವಿಲೇವಾರಿ ಮಾಡಿಕೊಟ್ಟವರಿಗೆ 30ಶೇ.ಕಮಿಷನ್ ನೀಡುವುದಾಗಿ ಹೇಳಿ ಮಹಿಳೆಯೊಬ್ಬರಿಂದ 10 ಲಕ್ಷ ರೂ.ಪಡೆದು ನೋಟಿನ ಬದಲು ಕಾಗದದ ತುಂಡುಗಳನ್ನು ನೀಡಿ ವಂಚಿಸಿರುವ ಆರೋಪದಲ್ಲಿ ರೆಂಜದ ಅರಂತನಡ್ಕ ನಿವಾಸಿ ಸಹಿತ ಐವರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

ತಮ್ಮ ಬಳಿ ದೇವಸ್ಥಾನಗಳ ಹುಂಡಿಯಲ್ಲಿ ಭಕ್ತರು ಹಾಕಿದ್ದ 100 ರೂ. ಮುಖ ಬೆಲೆಯ 10 ಲಕ್ಷ ರೂ. ಮೌಲ್ಯದ ನೋಟುಗಳಿದ್ದು, ಆವುಗಳನ್ನು ವಿಲೇವಾರಿ ಮಾಡಲು ತೊಂದರೆ ಆಗಿದೆ. ಈ ನೋಟುಗಳನ್ನು ಪಡೆದು 500, 2000 ರೂ. ಮುಖಬೆಲೆಯ ನೋಟುಗಳನ್ನು ಕೊಡುವವರಿಗೆ ಶೇ.30ರಷ್ಟು ಕಮಿಷನ್ ನೀಡುವುದಾಗಿ ನಂಬಿಸಿ ಉಜಿರೆಯ ಕೃಪಾ ಎಂಬವರಿಂದ 10 ಲಕ್ಷ ರೂ. ಪಡೆದು ವಂಚಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಘಟನೆ ಬಗ್ಗೆ ತಿಂಗಳಾಡಿಯ ಕೊರಗಪ್ಪ ಎಂಬವರು ನೀಡಿದ್ದ ದೂರಿನನ್ವಯ ತನಿಖೆ ನಡೆಸಿದ್ದ ಕಡೂರು ಪೊಲೀಸರು ಆರೋಪಿಗಳ ದೂರವಾಣಿ ಸಂಖ್ಯೆ, ವಿಳಾಸ ಆಧರಿಸಿ ಕಾರ್ಯಾಚರಣೆ ನಡೆಸಿ, ನ.20 ರಂದು ಕಡೂರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಡೂರು ನಿವಾಸಿ ಮಹೇಶ್(40) ಮತ್ತು ಬೆಟ್ಟಂಪಾಡಿ ರೆಂಜ ಅರಂತನಡ್ಕದ ನಾರಾಯಣ ರೈ(52ವ.)ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

Advertisement

ಈ ವೇಳೆ ಬಂಧಿತ ಆರೋಪಿಗಳು, ಸ್ವಾಮೀಜಿ ವೇಷ ಧರಿಸಿ ವಂಚಿಸುತ್ತಿದ್ದ ಖಾವಿ ಬಟ್ಟೆ, ರುದ್ರಾಕ್ಷಿ ಸರ, 100 ರೂ.ಮುಖ ಬೆಲೆಯ ಹಳೆಯ ನೋಟ್‌ಗಳಿದ್ದ ಬ್ಯಾಗ್ ಮತ್ತು ಆಕ್ಟೀವಾ ಸ್ಕೂಟರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳಾದ ಮಹೇಶ್ ಮತ್ತು ನಾರಾಯಣ ರೈಯವರು ನೀಡಿದ್ದ ಮಾಹಿತಿ ಮೇರೆಗೆ ತನಿಖೆ ಮುಂದುವರಿಸಿದ ಮೊಲೀಸರು ಚಿಕ್ಕಮಗಳೂರು ನಗರದ ತಮಿಳು ಕಾಲನಿಯ ಲಾರಿ ಸ್ಟ್ಯಾಂಡ್ ಬಳಿಯ ಚಿಕ್ಕಮಗಳೂರು ಇಲಿಯಾಜ್(೪೯ವ), ತುಮಕೂರಿನ ಗಂಗಾಧರ (೩೩ವ) ಮತ್ತು ವಿನಯ್ ಕುಮಾರ್(೩೩ವ) ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಮಾರುತಿ ಒಮ್ನಿ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳಿಂದ ಒಟ್ಟು 5,10,000 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮಲ್ಲಿ ಕೆಲವರಿಗೆ ಪರಿಚಿತರಾಗಿರುವ ತಿಂಗಳಾಡಿಯ ಕೊರಗಪ್ಪ ಪೂಜಾರಿ ಎಂಬವರನ್ನು ಸಂಪರ್ಕಿಸಿದ್ದ ಆರೋಪಿಗಳು ಕಮಿಷನ್ ಹಣದ ವಿಷಯ ಪ್ರಸ್ತಾಪಿಸಿ ಈ ವಿಚಾರವನ್ನು ಬೇರೆಯವರಿಗೂ ತಿಳಿಸಲು ಹೇಳಿದ್ದರು. ಅದರಂತೆ ಕೊರಗಪ್ಪ ಅವರು ತಮಗೆ ಪರಿಚಯದ ಉಜಿರೆಯ ಕೃಪಾ ಅವರಿಗೆ ವಿಷಯ ತಿಳಿಸಿದ್ದರು.ಕಮಿಷನ್ ಹಣದ ಆಸೆಯಿಂದ ಕೃಪಾ ಅವರು ತಮ್ಮ ಸ್ನೇಹಿತರಾದ ಭುವನೇಂದ್ರ ಮತ್ತು ಜನಾರ್ದನ ಎಂಬವರೊಂದಿಗೆ ಆಗಮಿಸಿ ರೂ.೧೦ ಲಕ್ಷ ಹಣವನ್ನು ಕಡೂರಿನ ಕೋಟೆ ಭಾಗದ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಆರೋಪಿಗಳಿಗೆ ನೀಡಿದ್ದರು. ಈ ವೇಳೆ ಆರೋಪಿಗಳು, ‘ಇದರಲ್ಲಿ ರೂ.೧೩ ಲಕ್ಷ ಇದೆ, ಮತ್ತೆ ಎಣಿಸಿಕೊಳ್ಳಿ’ ಎಂದು ಹೇಳಿ, ನೋಟುಗಳಿಂದ ತುಂಬಿದಂತಿದ್ದ ಬ್ಯಾಗೊಂದನ್ನು ಕೃಪಾ ಅವರಿಗೆ ನೀಡಿ ಅಲ್ಲಿಂದ ಹೋಗಿದ್ದರು. ಕೃಪಾ ಹಾಗೂ ಜೊತೆಗಿದ್ದ ಭುವನೇಂದ್ರ ಮತ್ತು ಜನಾರ್ದನರವರು, ೧೩ ಲಕ್ಷ ರೂ.ಇರುವುದಾಗಿ ಹೇಳಿ ಆರೋಪಿಗಳು ನೀಡಿದ್ದ ಬ್ಯಾಗ್‌ನ್ನು ತೆರೆದು ನೋಡಿದಾಗ ಅದರಲ್ಲಿ ನೋಟಿನ ಗಾತ್ರದ ಬಿಳಿ ಕಾಗದದ ತುಂಡುಗಳ ಕಟ್ಟಿನಲ್ಲಿ ಮೇಲ್ಭಾಗದಲ್ಲಿ ಮಾತ್ರ ರೂ.೧೦೦ರ ನೋಟ್‌ಗಳನ್ನಿಟ್ಟಿರುವುದು ಕಂಡು ಬಂದಿದ್ದು ಕಮಿಷನ್‌ನ ಆಸೆಯಿಂದಾಗಿ ತಾವು ಮೋಸ ಹೋಗಿರುವುದು ಅವರ ಅರಿವಿಗೆ ಬಂತು.ಕೂಡಲೇ ಕೃಪಾ ಅವರು ಆರೋಪಿಗಳಿಗೆ ಕರೆ ಮಾಡಿದರು.ಆದರೆ ಅವರೆಲ್ಲರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು.ವಂಚನೆಗೊಳಗಾದ ಕೃಪಾ ಅವರು ನ.೧೮ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ವೇಳೆ ಪೊಲೀಸರು ಕೃಪಾರಿಗೆ ಮಾಹಿತಿ ನೀಡಿದ್ದ ಕೊರಗಪ್ಪ ರನ್ನು ವಿಚಾರಿಸಿದ್ದು ಬಳಿಕ ಕೊರಗಪ್ಪ ಅವರು ನೀಡಿದ ದೂರು, ಮಾಹಿತಿಯಾಧರಿಸಿ ತನಿಖೆ ನಡೆಸಿದ ಕಡೂರು ಪೊಲೀಸರು ೪೮ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳದ ತಯ್ಯುಬ್ ಎಂಬಾತ ತಲೆಮರೆಸಿಕೊಂಡಿದ್ದು,ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕಾರ್ಯಾಚರಣೆಯಲ್ಲಿ ಕಡೂರು ಪೊಲೀಸ್ ಠಾಣೆಯ ಪಿಐ ರಮ್ಯಾ, ಎಸ್‌ಐಗಳಾದ ಆದರ್ಶ್, ನವೀನ್, ಎಎಸ್ಸೈ ವೇದಮೂರ್ತಿ, ಸಿಬ್ಬಂದಿ ಕೃಷ್ಣಮೂರ್ತಿ, ಉಮೇಶ್, ರಾಜಪ್ಪ, ಮಧುಕುಮಾರ್, ಓಂಕಾರ್ ಮತ್ತು ಶಿವರಾಜ್ ಪಾಲ್ಗೊಂಡಿದ್ದರು.

Previous Post

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂಟ್ವಾಳ ಮೂಲದ ಮಂಜುನಾಥ ಭಂಡಾರಿ ಕಣಕ್ಕೆ..!!

Next Post

ಮಣಿಪಾಲ: ಕೆಲಸದ ಒತ್ತಡದಿಂದ ಖಿನ್ನತೆಗೊಳಗಾಗಿ ಶಿಕ್ಷಕಿ ಆತ್ಮಹತ್ಯೆ..!!

OtherNews

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ನ.ಪಂ. ಕಚೇರಿಯಲ್ಲಿ ಗಲಾಟೆ: ಮಹಿಳಾ ಸಿಬ್ಬಂದಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ; ಬಿಲ್ ಕಲೆಕ್ಟರ್‌ಗೆ ಹಲ್ಲೆ : ತಡೆಯಲು ಹೋದ ವ್ಯಕ್ತಿಗೂ ಧರ್ಮದೇಟು..!!

July 2, 2026
ಕಾರಿಗೆ‌ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ವಂಚಕರು ಬೆಂಗಳೂರಿನಲ್ಲಿ ಅರೆಸ್ಟ್‌..!!
ಕ್ರೈಮ್

ಕಾರಿಗೆ‌ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ವಂಚಕರು ಬೆಂಗಳೂರಿನಲ್ಲಿ ಅರೆಸ್ಟ್‌..!!

July 2, 2026
ಪುತ್ತೂರು ಬಸ್ ನಿಲ್ದಾಣದ ಬಳಿ ಗಲಾಟೆ: ಯುವತಿಗೆ ಕಿರುಕುಳ ಆರೋಪ, ಮಾತಿನ ಚಕಮಕಿ ಬಳಿಕ ತಳ್ಳಾಟ..!!
Featured

ಪುತ್ತೂರು ಬಸ್ ನಿಲ್ದಾಣದ ಬಳಿ ಗಲಾಟೆ: ಯುವತಿಗೆ ಕಿರುಕುಳ ಆರೋಪ, ಮಾತಿನ ಚಕಮಕಿ ಬಳಿಕ ತಳ್ಳಾಟ..!!

July 2, 2026
ಗಾಂಜಾ ಮಾರಾಟ ವಿರೋಧಿಸಿದ್ದಕ್ಕೆ ಮೊಮ್ಮಗನಿಂದಲೇ ಅಜ್ಜಿ ಕೊಲೆ ಕೇಸ್ – ಆರೋಪಿ ಕಾಲಿಗೆ ಗುಂಡೇಟು..!!
ಕ್ರೈಮ್

ಗಾಂಜಾ ಮಾರಾಟ ವಿರೋಧಿಸಿದ್ದಕ್ಕೆ ಮೊಮ್ಮಗನಿಂದಲೇ ಅಜ್ಜಿ ಕೊಲೆ ಕೇಸ್ – ಆರೋಪಿ ಕಾಲಿಗೆ ಗುಂಡೇಟು..!!

July 2, 2026
(ಜು.04) ಕಕ್ಕಿಂಜೆಯಲ್ಲಿ ಮಂಡೋವಿ ಮೋಟಾರ್ಸ್‌ನ ಹೊಸ ಅರೆನಾ ಸ್ಯಾಟಲೈಟ್ ಶಾಖೆ ಆರಂಭ..!!
ಉದ್ಘಾಟನೆ

(ಜು.04) ಕಕ್ಕಿಂಜೆಯಲ್ಲಿ ಮಂಡೋವಿ ಮೋಟಾರ್ಸ್‌ನ ಹೊಸ ಅರೆನಾ ಸ್ಯಾಟಲೈಟ್ ಶಾಖೆ ಆರಂಭ..!!

July 2, 2026
ಮದುವೆ ಭರವಸೆ ನೀಡಿ ವಂಚನೆ ಪ್ರಕರಣ: ಹೈಕೋರ್ಟ್ ಸೂಚನೆಯಂತೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಎರಡೂ ತಂಡಗಳ ವಿಚಾರಣೆ…!!
Featured

ಮದುವೆ ಭರವಸೆ ನೀಡಿ ವಂಚನೆ ಪ್ರಕರಣ: ಹೈಕೋರ್ಟ್ ಸೂಚನೆಯಂತೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಎರಡೂ ತಂಡಗಳ ವಿಚಾರಣೆ…!!

July 2, 2026

Leave a Reply Cancel reply

Your email address will not be published. Required fields are marked *

Recent News

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ನ.ಪಂ. ಕಚೇರಿಯಲ್ಲಿ ಗಲಾಟೆ: ಮಹಿಳಾ ಸಿಬ್ಬಂದಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ; ಬಿಲ್ ಕಲೆಕ್ಟರ್‌ಗೆ ಹಲ್ಲೆ : ತಡೆಯಲು ಹೋದ ವ್ಯಕ್ತಿಗೂ ಧರ್ಮದೇಟು..!!

July 2, 2026
ಕಾರಿಗೆ‌ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ವಂಚಕರು ಬೆಂಗಳೂರಿನಲ್ಲಿ ಅರೆಸ್ಟ್‌..!!

ಕಾರಿಗೆ‌ ಡಿಸೇಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ವಂಚಕರು ಬೆಂಗಳೂರಿನಲ್ಲಿ ಅರೆಸ್ಟ್‌..!!

July 2, 2026
ಪುತ್ತೂರು ಬಸ್ ನಿಲ್ದಾಣದ ಬಳಿ ಗಲಾಟೆ: ಯುವತಿಗೆ ಕಿರುಕುಳ ಆರೋಪ, ಮಾತಿನ ಚಕಮಕಿ ಬಳಿಕ ತಳ್ಳಾಟ..!!

ಪುತ್ತೂರು ಬಸ್ ನಿಲ್ದಾಣದ ಬಳಿ ಗಲಾಟೆ: ಯುವತಿಗೆ ಕಿರುಕುಳ ಆರೋಪ, ಮಾತಿನ ಚಕಮಕಿ ಬಳಿಕ ತಳ್ಳಾಟ..!!

July 2, 2026
ಗಾಂಜಾ ಮಾರಾಟ ವಿರೋಧಿಸಿದ್ದಕ್ಕೆ ಮೊಮ್ಮಗನಿಂದಲೇ ಅಜ್ಜಿ ಕೊಲೆ ಕೇಸ್ – ಆರೋಪಿ ಕಾಲಿಗೆ ಗುಂಡೇಟು..!!

ಗಾಂಜಾ ಮಾರಾಟ ವಿರೋಧಿಸಿದ್ದಕ್ಕೆ ಮೊಮ್ಮಗನಿಂದಲೇ ಅಜ್ಜಿ ಕೊಲೆ ಕೇಸ್ – ಆರೋಪಿ ಕಾಲಿಗೆ ಗುಂಡೇಟು..!!

July 2, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.