ಪುತ್ತೂರು: ಶಾಂತಿಗೋಡು ಗ್ರಾಮದ ವೀರಮಂಗಲ ಕೊಯಕುಡೆ ಎಂಬಲ್ಲಿ ಜಮೀನು ತಕರಾರಿನ ವಿಚಾರದಲ್ಲಿ ಬಂದೂಕಿನಿಂದ ಸಂಬಂಧಿಕ ಮಹಿಳೆಗೆ ಗುರಿಯಿಟ್ಟು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಆರೋಪಿ ದೇವಪ್ಪ ಗೌಡ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
.
ದೇವಪ್ಪ ಗೌಡ ಜ.21 ರಂದು ಜಮೀನು ಸ್ವಾಧೀನತೆಯ ತಕಾರಿನ ದ್ವೇಷದಿಂದ ಬಂದೂಕಿನಿಂದ ತನ್ನ ಸಹೋದರ ಬಾಬು ಗೌಡ ಅವರ ಪತ್ನಿ ಧರ್ನಮ್ಮ ಅವರಿಗೆ ಗುರಿಯಿಟ್ಟು ಗುಂಡು ಹಾರಿಸಿದ್ದು, ಈ ವೇಳೆ ಧರ್ನಮ್ಮ ಬಾಗಿದ ಪರಿಣಾಮ ಗುಂಡು ಅವರ ಪಕ್ಕಂದಿ ಹಾರಿ ಹೋಗಿತ್ತು. ಈ ಘಟನೆಯ ಕುರಿತು ಧರ್ನಮ್ಮ ರವರು ಠಾಣೆಗೆ ದೂರು ನೀಡಿದ್ದರು.
ಆರೋಪಿ ದೇವಪ್ಪ ಗೌಡ ರವರ ವಿರುದ್ಧ ಠಾಣೆಯಲ್ಲಿ ಅ.ಕ್ರ: 97/2021 ಕಲಂ: 506, 307 ಐಪಿಸಿ ಮತ್ತು 25, 27 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.
ನ.22 ರಂದು ಆರೋಪಿ ದೇವಪ್ಪ ಗೌಡ ಪುತ್ತೂರು ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.