ಮಂಗಳೂರು: ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನದ ಗುಡಿ ಪತ್ತೆಯಾಗಿದೆ.
ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಗುಡಿ ಪತ್ತೆಯಾಗಿದೆ. ಗುಡಿ ಪತ್ತೆಯಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
![](https://zoomintv.online/wp-content/uploads/2022/04/1_orig-05-1024x683.jpeg)
ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಪರಿಷದ್ ಪ್ರಮುಖರು, ಕಾರ್ಯಕರ್ತರು ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದು, ತಹಶೀಲ್ದಾರ್ ಬಂದ ನಂತರ ಸಂಘಟನೆಯ ಪ್ರಮುಖರು ಈ ಕಟ್ಟಡದ ಕಾಮಗಾರಿಯನ್ನೂ ತನಿಖೆ ನಡೆಯುವ ವರೆಗೆ ತಾತ್ಕಾಲಿಕ ತಡೆ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ತಹಶೀಲ್ದಾರ್ ದರ್ಗಾ ಕಮಿಟಿಗೆ ಮನವರಿಕೆ ಮಾಡಿದ್ದು, ದರ್ಗಾ ಕಮಿಟಿಯವರು ಈ ನಿರ್ಣಯಕ್ಕೆ ಒಪ್ಪಿದರು.
![](https://zoomintv.online/wp-content/uploads/2022/04/1_orig-06-1024x683.jpeg)
ಈ ವೇಳೆ ಹಿಂದೂ ಸಂಘಟನೆ ಮುಖಂಡರಾದ ಪ್ರಶಾಂತ ಬಂದ್ಯೋಡು, ಶರಣ್ ಪಂಪ್ವೆಲ್, ಹರೀಶ್ ಶಕ್ತಿನಗರ, ಪ್ರಶಾಂತ ಕೆಂಪುಗುಡ್ಡೆ, ಬುಜಂಗ ಕುಲಾಲ್ ಉಪಸ್ಥಿತರಿದ್ದರು.