ನಾಡು,ನುಡಿ, ನಿಷ್ಠೆ ಸೇವೆಯ ರಾಜ್ಯ ಸಂಘಟನೆಯಾದ ಕನ್ನಡ ಸೇನೆ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷರಾದ ಚಂದ್ರಶೇಖರ್ ನೇತೃತ್ವದಲ್ಲಿ ಸದಸ್ಯತ್ವ ಮಾಹಿತಿ ಕಾರ್ಯಕ್ರಮ, ಬಡ ಕುಟುಂಬಕ್ಕೆ ಕಿಟ್ ಮತ್ತು ವಸ್ತ್ರ ವಿತರಣೆ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ,ಹಾಗೂ ಎಸ್. ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಬೆಳ್ತಂಗಡಿ ತಾಲೂಕಿನ ಬಸವನಗುಡಿಯಲ್ಲಿ ಜೂ.19 ರಂದು ಮದ್ಯಾಹ್ನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಗೊಳಿಸಬೇಕೆಂದು ಕನ್ನಡ ಸೇನೆ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಗೌರವ ಸಹಲೆಗರರಾದ ವೃಷಭರಾಜ್ ಅರಿಗ, ಕಾರ್ಯದ್ಯಕ್ಷ ಗುರುಚಂದ್ರ ಹೆಗ್ಡೆ ,ಪ್ರಧಾನ ಕಾರ್ಯದರ್ಶಿ ಚೆನ್ನಕೇಶವ ,ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಕನ್ನಡ ಸೇನೆ ಕರ್ನಾಟಕ ಸುರತ್ಕಲ್ ತಾಲೂಕು ಅಧ್ಯಕ್ಷ ಸಂಜೀವ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.