Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮುಂಡೂರು : ಲಾಕ್ ಡೌನ್ ನಡುವೆ ಕೋಳಿ ಅಂಕ : ಪೊಲೀಸರಿಂದ ದಾಳಿ, ನಗದು ಹಾಗೂ ವಾಹನ ವಶ

    ಉಪ್ಪಿನಂಗಡಿ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ: 7 ಹುಂಜ, ಇಬ್ಬರು ಆರೋಪಿಗಳು ವಶಕ್ಕೆ..!!

    ಸೆ.30 ರೊಳಗೆ ರೇಷನ್ ಕಾರ್ಡ್ ಇ – ಕೆವೈಸಿ ಮಾಡಿ : ಜಯಂತಿ ವಿ.ಪೂಜಾರಿ..!

    ಸೆ.30 ರೊಳಗೆ ರೇಷನ್ ಕಾರ್ಡ್ ಇ – ಕೆವೈಸಿ ಮಾಡಿ : ಜಯಂತಿ ವಿ.ಪೂಜಾರಿ..!

    (ಆ.19) ತುಂಬೆಯಲ್ಲಿ ಟೀಮ್ ಸತ್ಯಜಿತ್ ಸುರತ್ಕಲ್ ತಂಡದ ಸಭೆ ..!!

    (ಆ.19) ತುಂಬೆಯಲ್ಲಿ ಟೀಮ್ ಸತ್ಯಜಿತ್ ಸುರತ್ಕಲ್ ತಂಡದ ಸಭೆ ..!!

    ವಿಟ್ಲ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: 53 ವರ್ಷದ ವ್ಯಕ್ತಿ ಬಂಧನ..!!

    ವಿಟ್ಲ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: 53 ವರ್ಷದ ವ್ಯಕ್ತಿ ಬಂಧನ..!!

    ಜೈಲಿಗೆ ಹಾಕಿ, ನೇಣು ಹಾಕಿದ್ರೂ ನಾವು ‘ವಂದೇ ಮಾತರಂ’ ಗೀತೆಯನ್ನ ಎರಡೇ ಪ್ಯಾರಾ ಹಾಡೋದು: ಬಿ.ಕೆ.ಹರಿಪ್ರಸಾದ್‌

    ಜೈಲಿಗೆ ಹಾಕಿ, ನೇಣು ಹಾಕಿದ್ರೂ ನಾವು ‘ವಂದೇ ಮಾತರಂ’ ಗೀತೆಯನ್ನ ಎರಡೇ ಪ್ಯಾರಾ ಹಾಡೋದು: ಬಿ.ಕೆ.ಹರಿಪ್ರಸಾದ್‌

    ವಂದೇ ಮಾತರಂ ಗೀತೆಗೆ ಅವಮಾನ: ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ ವಿಕಾಸ್ ಪುತ್ತೂರು..!!

    ವಂದೇ ಮಾತರಂ ಗೀತೆಗೆ ಅವಮಾನ: ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ ವಿಕಾಸ್ ಪುತ್ತೂರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮುಂಡೂರು : ಲಾಕ್ ಡೌನ್ ನಡುವೆ ಕೋಳಿ ಅಂಕ : ಪೊಲೀಸರಿಂದ ದಾಳಿ, ನಗದು ಹಾಗೂ ವಾಹನ ವಶ

    ಉಪ್ಪಿನಂಗಡಿ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ: 7 ಹುಂಜ, ಇಬ್ಬರು ಆರೋಪಿಗಳು ವಶಕ್ಕೆ..!!

    ಸೆ.30 ರೊಳಗೆ ರೇಷನ್ ಕಾರ್ಡ್ ಇ – ಕೆವೈಸಿ ಮಾಡಿ : ಜಯಂತಿ ವಿ.ಪೂಜಾರಿ..!

    ಸೆ.30 ರೊಳಗೆ ರೇಷನ್ ಕಾರ್ಡ್ ಇ – ಕೆವೈಸಿ ಮಾಡಿ : ಜಯಂತಿ ವಿ.ಪೂಜಾರಿ..!

    (ಆ.19) ತುಂಬೆಯಲ್ಲಿ ಟೀಮ್ ಸತ್ಯಜಿತ್ ಸುರತ್ಕಲ್ ತಂಡದ ಸಭೆ ..!!

    (ಆ.19) ತುಂಬೆಯಲ್ಲಿ ಟೀಮ್ ಸತ್ಯಜಿತ್ ಸುರತ್ಕಲ್ ತಂಡದ ಸಭೆ ..!!

    ವಿಟ್ಲ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: 53 ವರ್ಷದ ವ್ಯಕ್ತಿ ಬಂಧನ..!!

    ವಿಟ್ಲ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: 53 ವರ್ಷದ ವ್ಯಕ್ತಿ ಬಂಧನ..!!

    ಜೈಲಿಗೆ ಹಾಕಿ, ನೇಣು ಹಾಕಿದ್ರೂ ನಾವು ‘ವಂದೇ ಮಾತರಂ’ ಗೀತೆಯನ್ನ ಎರಡೇ ಪ್ಯಾರಾ ಹಾಡೋದು: ಬಿ.ಕೆ.ಹರಿಪ್ರಸಾದ್‌

    ಜೈಲಿಗೆ ಹಾಕಿ, ನೇಣು ಹಾಕಿದ್ರೂ ನಾವು ‘ವಂದೇ ಮಾತರಂ’ ಗೀತೆಯನ್ನ ಎರಡೇ ಪ್ಯಾರಾ ಹಾಡೋದು: ಬಿ.ಕೆ.ಹರಿಪ್ರಸಾದ್‌

    ವಂದೇ ಮಾತರಂ ಗೀತೆಗೆ ಅವಮಾನ: ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ ವಿಕಾಸ್ ಪುತ್ತೂರು..!!

    ವಂದೇ ಮಾತರಂ ಗೀತೆಗೆ ಅವಮಾನ: ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ ವಿಕಾಸ್ ಪುತ್ತೂರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಉದ್ಘಾಟನೆ

(ಸೆ.24) ಪುತ್ತೂರು: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಚೇರಿ ‘ರೈತ ಸೌಧ’ ಉದ್ಘಾಟನಾ ಸಮಾರಂಭ

September 21, 2022
in ಉದ್ಘಾಟನೆ, ಪುತ್ತೂರು
0
(ಸೆ.24) ಪುತ್ತೂರು: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಚೇರಿ ‘ರೈತ ಸೌಧ’ ಉದ್ಘಾಟನಾ ಸಮಾರಂಭ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ನೂತನ ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಚೇರಿ ‘ರೈತ ಸೌಧ’ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಸೆ.24 ರಂದು ನಡೆಯಲಿದೆ.

Advertisement
Advertisement

84 ವರ್ಷಗಳ ಹಿಂದೆ ಪ್ರಾರಂಭವಾಗಿ ತನ್ನ ಸದಸ್ಯರ ಬಾಳು ಬೆಳಗುವಲ್ಲಿ ಗಮನಾರ್ಹ ಸೇವೆ ಸಲ್ಲಿಸಿ, ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸ್ವಾತಂತ್ರ್ಯ ಪೂರ್ವದಲ್ಲಿ ಬಡ ಕೃಷಿಕರ ಸ್ಧಿತಿ ಶೋಚನೀಯವಾಗಿದ್ದು, ಸ್ಧಿತಿವಂತ ಭೂಮಾಲಿಕರ ಕಪಿಮುಷ್ಠಿಯಿಂದ ಹೊರಬರಲು ಸಾದ್ಯವಾಗದೆ ಬಳಲುತ್ತಿರುವ ಆ ಸಂದ್ಧಿಗ್ಧ ಸ್ಥಿತಿಯಲ್ಲಿ ದುರ್ಬಲರ ಬಾಳಿಗೆ ಹೊಸ ಬೆಳಕಾಗಿ ಈ ಸಂಸ್ಥೆಯ ಉದಯ. ದ.ಕ.ಜಿಲ್ಲೆಯ ಸಹಕಾರಿ ಪಿತಾಮಹರಾದ ಮೊಳಹಳ್ಳಿ ಶಿವರಾಯರು ಪ್ರವರ್ತಕರಾಗಿ, ಅಧ್ಯಕ್ಷರಾಗಿ, ಪುತ್ತೂರು ಡಿವಿಜನ್ ಸಹಕಾರಿ ಭೂಮಿ ಅಡವಿನ ಬ್ಯಾಂಕ್ ಎಂಬುದಾಗಿ 01-05-1938 ರಲ್ಲಿ ನೋಂದಣಿಯಾಗಿ ಪ್ರಾರಂಭಗೊಂಡಿತು.

ಅದೇ ವರ್ಷ ಮಂಗಳೂರು ಮತ್ತು ಉಡುಪಿಯಲ್ಲಿ ಭೂ ಅಡಮಾನ ಬ್ಯಾಂಕ್‌ಗಳನ್ನು ತೆರೆದು ಪೂರ್ಣ ಜಿಲ್ಲೆಯನ್ನು ಅಡಮಾನ ಕಾರ್ಯವ್ಯಾಪ್ತಿಗೆ ತಂದರು.

Advertisement

ಪ್ರಾರಂಭದಲ್ಲಿ ಈ ಬ್ಯಾಂಕ್ ಆರ್ಥಿಕ ಮುಗ್ಗಟ್ಟಿನಲ್ಲಿ ರೈತರಿಗೆ ಖಾಸಗಿ ವ್ಯಕ್ತಿಗಳಿಂದ ಪಡೆದ ಹಳೇ ಸಾಲವನ್ನು ತಿರುವಳಿ ಮಾಡಲು ಸಾಲವನ್ನು ಮಂಜೂರು ಮಾಡಲಾಗುತ್ತಿತ್ತು. 1964 ರಲ್ಲಿ ಸಹಕಾರ ಕಾಯ್ದೆಯಲ್ಲಿ ಹೊಸ ತಿದ್ದುಪಡಿಯಾಗಿ ಸಾಲ ವಿತರಣೆಯಲ್ಲಿ ಅವಶ್ಯಕ ಬದಲಾವಣೆ ಕಂಡು ಬಂತು. ಕೃಷಿಕರಿಗೆ ಸಾಲ ವಿತರಣೆ ಯಾದರೆ ಸಾಲದು, ಪಡೆದ ಸಾಲದಿಂದ ಅಭಿವೃದ್ಧಿಯಾಗಬೇಕು, ಅಭಿವೃದ್ಧಿಯಾಗಬೇಕಾದರೆ ಸಾಲದಿಂದ ಕೃಷಿಕರು ಜಮೀನಿನಲ್ಲಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂಬ ಉದ್ದೇಶದಿಂದ ಸಾಲ ನೀಡುವಂತ ವ್ಯವಸ್ಧೆ ಆರಂಭಗೊಂಡಾಗ ಭೂ ಅಭಿವೃದ್ಧಿ ಬ್ಯಾಂಕ್ ಎನ್ನುವ ಹೆಸರಿನಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ. ಕೇವಲ ಕೃಷಿ ಅಭಿವೃದ್ಧಿಯಾದರೆ ಸಾಲದು , ಕೃಷಿಗೆ ಪೂರಕ ಕೃಷಿಯೇತರ, ಮುಂತಾದ ಸಾಲವನ್ನು ನೀಡಿ ಸರ್ವ ವಿಧದಲ್ಲೂ ಗ್ರಾಮೀಣ ಅಭಿವೃದ್ಧಿಯಾಗುವಂತೆ ಸಾಲ ನೀಡುವುದು ಅಗತ್ಯವೆಂದು ಮನಗೊಂಡು ನಬಾರ್ಡ್ ಸಂಸ್ಥೆಯಿಂದ ಸಾಲ ನೀಡುವ ಯೋಜನೆಗಳು ಅನುಷ್ಠಾನಗೊಂಡಿದ್ದು. ಈ ಸಂದರ್ಭದಲ್ಲಿ ಭೂ ಅಭಿವೃದ್ಧಿ ಬ್ಯಾಂಕ್‌ಗಳು ತಮ್ಮ ಹೆಸರನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಎಂದು ಬದಲಾಯಿಸಿಕೊಂಡು ಕಾರ್ಯ ನಿರ್ವಹಿಸುತ್ತಾ ಬಂದಿದೆ .

Advertisement

ಪ್ರಸ್ತುತ ಬ್ಯಾಂಕ್ ತಾಲೂಕಿನ ರೈತ ಸದಸ್ಯರುಗಳಿಗೆ ತಮ್ಮ ಕೃಷಿ ಜಮೀನಿನಲ್ಲಿ ಸಣ್ಣ ನೀರಾವರಿ ಯೋಜನೆಗಳಾದ ಹೊಸ ನೀರಾವರಿ, ತುಂತುರು ನೀರಾವರಿ, ನೀರು ಶೇಖರಣಾ ತೊಟ್ಟಿ, ತೋಟದ ಕೆರೆ . ಪೈಪ್ ಲೈನ್ , ಬಾವಿ ಆಳಪಡಿಸುವಿಕೆ, ವಿಶೇಷ ಯೋಜನೆಗಳಾದ ಅಡಿಕೆ , ತೆಂಗು ತೋಟ ಅಭಿವೃದ್ಧಿಗೆ, ಅಡಿಕೆ ಒಣಗಿಸುವ ಕಣ ರಚೆನೆಗೆ, ರಬ್ಬರ್ ಸಂಸ್ಕರಣಾ ಫಟಕಗಳಿಗೆ, ತೋಟಗಾರಿಕೆ ಸಂಬಂಧಿಸಿದಂತೆ ಹೊಸ ರಬ್ಬರ್ ತೋಟ,ಗೇರು ತೋಟ, ತೆಂಗು ತೋಟ ನಿರ್ಮಾಣಕ್ಕೆ, ವ್ಯೆವಿಧ್ಯಮಯ ಯೋಜನೆಗಳಲ್ಲಿ ದ್ವಿಚಕ್ರ ವಾಹನ ಖರೀದಿ, ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿ ಸಾಕಣೆ, ಹಾಗೂ ರೈತರಿಗೆ ಕೃಷಿಯೇತರ ಯೋಜನೆಗಳಲ್ಲಿ ಸಣ್ಣ ಉದ್ದಿಮೆ, ಸೇವಾ ಚಟುವಟಿಕೆಗಳಿಗೆ, ನಬಾರ್ಡ್ ಮೂಲದಿಂದ ಕಸ್ಕಾರ್ಡ್ ಬ್ಯಾಂಕಿನ ಮೂಲಕ ಆರ್ಥಿಕ ನೆರವನ್ನು ಪಡೆದು ದೀರ್ಘಾವಧಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಕರ್ನಾಟಕ ಸರಕಾರ ದೀರ್ಘಾವಧಿ ಕೃಷಿ ಹಾಗೂ ಕೃಷಿ ಪೂರಕ ಸಾಲಗಳಿಗೆ ಪ್ರಕಟಿಸಿದ ಶೇ.6, ಶೇ.4 ಮತ್ತು ಶೇ.3 ಬಡ್ಡಿ ಸಹಾಯಧನದ ಸಾಲಗಳನ್ನು ಒದಗಿಸಿ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.

ಕಳೆದ ದಶಕಗಳಿಂದ ಬ್ಯಾಂಕ್ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಿ, ಸದಸ್ಯರಿಂದ ನಿರಂತರವಾಗಿ ವಿವಿಧ ರೀತಿಯ ಠೇವಣೆಗಳನ್ನು ಸಂಗ್ರಹಿಸುತ್ತಾ ಅವರಲ್ಲಿ ಉಳಿತಾಯದ ಮನೋಭಾವನೆ ಬೆಳಸುವುದರ ಮೂಲಕ ,ಬ್ಯಾಂಕ್ ತನ್ನ ಸ್ವಂತ ಸಂಪನ್ಮೂಲಗಳನ್ನು ವೃದ್ಧಿಗೊಳಿಸಿ ರೈತರಿಗೆ ಕೃಷಿ, ಕೃಷಿ ಪೂರಕ ಮತ್ತು ಕೃಷಿಯೇತರ, ಚಿನ್ನಾಭರಣ ಸಾಲ ಸೌಲಭ್ಯಗಳನ್ನು ನೀಡಿ,ಗ್ರಾಮೀಣ ರೈತ ಜನರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿರುವ ಕಡಬ ವಲಯ ಹಾಗೂ ಬಿಳಿನೆಲೆ ವಲಯಗಳ ಸದಸ್ಯರುಗಳಿಗೆ ಉತ್ತಮ ಹಾಗೂ ತ್ವರಿತ ಬ್ಯಾಂಕಿಂಗ್ ಸೇವೆಯನ್ನು ನೀಡುವ ದೃಷ್ಟಿಯನ್ನು ಇರಿಸಿಕೊಂಡು ಕಡಬ ಪಟ್ಟಣದ ಭಾಗೀರಥಿ ರ‍್ಸ್ ನಲ್ಲಿ ಶಾಖೆ ಕಾರ್ಯ ನಿರ್ವಹಿಸುತ್ತಿದೆ.

2013 ಡಿ.21 ರಂದು ನಡೆದ ಬ್ಯಾಂಕಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಬ್ಯಾಂಕಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ರಾಜ್ಯದ ಅಂದಿನ ಗೌರವಾನ್ವಿತ ಸಹಕಾರ ಸಚಿವರಾಗಿದ್ದ ದಿ. ಎಚ್.ಎಸ್. ಮಹಾದೇವ ಪ್ರಸಾದ್ ಅವರು ನೇರವೇರಿಸಿ, ನೂತನ ಕಟ್ಟಡ ನಿರ್ಮಾಣಕ್ಕೆ ಅಧಿಕೃತ ಚಾಲನೆ ನೀಡಿರುತ್ತಾರೆ. ಅಮೃತ ಮಹೋತ್ಸವದ ಸಂದರ್ಭ ಹಿರಿಯ ಸಹಕಾರಿಗಳಾದ ರಂಗನಾಥ ರೈ ಕೆ.ಎಸ್. ರವರು ಬ್ಯಾಂಕಿನ ಅಧ್ಯಕ್ಷರಾಗಿದ್ದರು.

ಪುತ್ತೂರು ಪಟ್ಟಣದ ಮೊಳಹಳ್ಳಿ ಶಿವರಾವ್ ರಸ್ತೆಯ ಸಮೀಪ ಇರುವ ಬ್ಯಾಂಕಿನ ಸ್ವಂತ ನಿವೇಶನದಲ್ಲಿ ನೂತನ ವಾಣಿಜ್ಯ ಸಂಕೀರ್ಣ ಹಾಗೂ ಬ್ಯಾಂಕಿನ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಎರಡು ಕೋಟಿ ಇಪ್ಪತ್ತು ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿ ಹಾಗೂ ನೀಲ ನಕಾಶೆ ತಯಾರಿಸಿ ಎರಡು ಅಂತಸ್ತಿನ 9675 ಚ.ಅಡಿಯ ಕಟ್ಟಡ ನಿರ್ಮಿಸಲು, 2017ನೇ ಇಸವಿಯಲ್ಲಿ ಸಹಕಾರ ಇಲಾಖೆಯಿಂದ ಆಡಳಿತಾತ್ಮಕ ಅನುಮತಿ ಪಡೆದು, ಕಾಮಗಾರಿಯನ್ನು ಇ-ಟೆಂಡರ್ ಮೂಲಕ ಪ್ರಸಾದ್ ಕೆ.ಎನ್ ಇವರಿಗೆ ಕಂಟ್ರಾಕ್ಟ್ ನೀಡಿ, ಕಟ್ಟಡ ಕಾಮಗಾರಿಯ ಸಿವಿಲ್ ಇಂಜಿನಿಯರ್ ರವೀಂದ್ರ ರವರು ಆಗಿರುತ್ತಾರೆ.

ಬ್ಯಾಂಕ್‌ನ ಸುಸಜ್ಜಿತ ನೂತನ ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಚೇರಿ ಕಟ್ಟಡದ ಬೇಸ್ ಮೆಂಟ್‌ನಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ನೆಲ ಅಂತಸ್ತಿನಲ್ಲಿ ತಲಾ 300 ಚ.ಅಡಿಯ ಅಳತೆಯ 5 ವಾಣಿಜ್ಯ ಕೊಠಡಿಗಳು, ಮೊದಲನೆ ಮಹಡಿಯಲ್ಲಿ ಬ್ಯಾಂಕಿನ ನೂತನ ಕಛೇರಿ ಹಾಗೂ ಎರಡನೇ ಮಹಡಿಯಲ್ಲಿ 6 ವಾಣಿಜ್ಯ ಕೊಠಡಿಗಳು, ಬ್ಯಾಂಕ್ ಆಡಳಿತ ಮಂಡಳಿ ಸಭೆಯ ಹಾಲ್ , ಅತಿಥಿ ಗೃಹ ಹೊಂದಿರುತ್ತದೆ. ನೂತನ ಕಟ್ಟಡಕ್ಕೆ “ರೈತ ಸೌಧ” ಎಂದು ನಾಮಕರಣ ಮಾಡಲಾಗಿದ್ದು, ಲಿಫ್ಟ್ ಹಾಗೂ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ.

ಅತಿಥಿ ಗಣ್ಯರ, ಸಹಕಾರಿಗಳ , ಬ್ಯಾಂಕ್‌ನ ಸದಸ್ಯರುಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದೆ. ಸಭಾ ಕಾರ್ಯಕ್ರಮವು ಪುತ್ತೂರು ಕಿಲ್ಲೆ ಮೈದಾನದಲ್ಲಿ ಶಾಸಕ ಸಂಜೀವ ಮಠಂದೂರು ರವರ ಸಭಾಧ್ಯಕ್ಷತೆಯಲ್ಲಿ, ಸಚಿವರು, ಸಂಸದರು ಹಾಗೂ ಅತಿಥಿ ಗಣ್ಯರ , ಸಹಕಾರಿಗಳ, ಸದಸ್ಯರುಗಳ ಉಪಸ್ಥತಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Previous Post

ವೃತ್ತ ಮಟ್ಟದ ಪ್ರತಿಭಾಕಾರಂಜಿಯಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯೊಂದಿಗೆ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತಾಲೂಕುಮಟ್ಟಕ್ಕೆ ಆಯ್ಕೆ

Next Post

ಹಿಂದೂ ಸಮಾಜೋತ್ಸವ, ಜನಜಾಗೃತಿ ಸಮಾವೇಶ, ಪ್ರತಿಭಟನೆ ವೇಳೆ ದ್ವೇಷ ಭಾಷಣ ಆರೋಪ: 34 ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ..!!!

OtherNews

ಮುಂಡೂರು : ಲಾಕ್ ಡೌನ್ ನಡುವೆ ಕೋಳಿ ಅಂಕ : ಪೊಲೀಸರಿಂದ ದಾಳಿ, ನಗದು ಹಾಗೂ ವಾಹನ ವಶ
Featured

ಉಪ್ಪಿನಂಗಡಿ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ: 7 ಹುಂಜ, ಇಬ್ಬರು ಆರೋಪಿಗಳು ವಶಕ್ಕೆ..!!

August 19, 2026
ವಿಟ್ಲ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: 53 ವರ್ಷದ ವ್ಯಕ್ತಿ ಬಂಧನ..!!
Featured

ವಿಟ್ಲ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: 53 ವರ್ಷದ ವ್ಯಕ್ತಿ ಬಂಧನ..!!

August 18, 2026
ವಂದೇ ಮಾತರಂ ಗೀತೆಗೆ ಅವಮಾನ: ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ ವಿಕಾಸ್ ಪುತ್ತೂರು..!!
Featured

ವಂದೇ ಮಾತರಂ ಗೀತೆಗೆ ಅವಮಾನ: ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ ವಿಕಾಸ್ ಪುತ್ತೂರು..!!

August 18, 2026
ಶಾಂತಿನಗರ ಘನ ತ್ಯಾಜ್ಯ ನಿರ್ವಹಣಾ ಘಟಕದ ಅವ್ಯವಸ್ಥೆ ವಿರುದ್ಧ ಆಕ್ರೋಶ : ಸರಿ ಪಡಿಸದೇ ಇದ್ದಲ್ಲಿ ನೆಕ್ಕಿಲಾಡಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ..!!
ಪುತ್ತೂರು

ಶಾಂತಿನಗರ ಘನ ತ್ಯಾಜ್ಯ ನಿರ್ವಹಣಾ ಘಟಕದ ಅವ್ಯವಸ್ಥೆ ವಿರುದ್ಧ ಆಕ್ರೋಶ : ಸರಿ ಪಡಿಸದೇ ಇದ್ದಲ್ಲಿ ನೆಕ್ಕಿಲಾಡಿ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ..!!

August 16, 2026
ಪುತ್ತೂರು : ಆಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಡಿಕ್ಕಿ..!!
Featured

ಪುತ್ತೂರು : ಆಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಡಿಕ್ಕಿ..!!

August 16, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
ಕ್ರೈಮ್

ಕೋಲ್ಪೆ : ಮೂವರನ್ನು ಅಕ್ರಮವಾಗಿ ತಡೆದು ಹಲ್ಲೆ: 9 ಮಂದಿ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು..!

August 15, 2026

Leave a Reply Cancel reply

Your email address will not be published. Required fields are marked *

Recent News

ಮುಂಡೂರು : ಲಾಕ್ ಡೌನ್ ನಡುವೆ ಕೋಳಿ ಅಂಕ : ಪೊಲೀಸರಿಂದ ದಾಳಿ, ನಗದು ಹಾಗೂ ವಾಹನ ವಶ

ಉಪ್ಪಿನಂಗಡಿ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ: 7 ಹುಂಜ, ಇಬ್ಬರು ಆರೋಪಿಗಳು ವಶಕ್ಕೆ..!!

August 19, 2026
ಬೆಟ್ಟಂಪಾಡಿ: ಸರ ಕಳ್ಳರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು..!!

15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ..!

August 19, 2026
ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ..!!

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ..!!

August 18, 2026
ಸೆ.30 ರೊಳಗೆ ರೇಷನ್ ಕಾರ್ಡ್ ಇ – ಕೆವೈಸಿ ಮಾಡಿ : ಜಯಂತಿ ವಿ.ಪೂಜಾರಿ..!

ಸೆ.30 ರೊಳಗೆ ರೇಷನ್ ಕಾರ್ಡ್ ಇ – ಕೆವೈಸಿ ಮಾಡಿ : ಜಯಂತಿ ವಿ.ಪೂಜಾರಿ..!

August 18, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.