ವಿಟ್ಲ: ಖಾಸಗಿ ಬಸ್ ನ ಏಜೆಂಟ್ ಮತ್ತು ಬಸ್ ಚಾಲಕ ಟೈಮಿಂಗ್ಸ್ ವಿಚಾರದಲ್ಲಿ ಜಗಳವಾಡಿ, ಹೊಡೆದಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ.
ಖಾಸಗಿ ಬಸ್ ನ ಎಜೆಂಟ್ ಜಯ ಕೊಟ್ಟಾರಿ ಮತ್ತು ಬಸ್ ಚಾಲಕ ಅಬ್ಬಾಸ್ ಎಂಬವರ ನಡುವೆ ಟೈಮಿಂಗ್ಸ್ ವಿಚಾರದಲ್ಲಿ ವಾಗ್ವಾದ ನಡೆದು, ಅದು ತಾರಕಕ್ಕೇರಿ ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.