ವಿಟ್ಲ: ಚಂದಳಿಕೆ ಹಿರಿಯ ಪ್ರಾಥಮಿಕ ಶಾಲೆಗೆ ಊರ ದಾನಿಗಳ ನೆರವಿನಿಂದ ಶಿಲ್ಪ ಫರ್ನಿಚರ್ನ ಶ್ರೀನಿವಾಸ ರವರ ನೇತೃತ್ವದಲ್ಲಿ 1.25 ಲಕ್ಷದ ಪೀಠೋಪಕರಣಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. 125 ಕುರ್ಚಿಗಳು, 4 ಸ್ಟೀಲ್ ಟೇಬಲ್ ಹಾಗೂ ಸಂತೋಷ್ ಜೀವನ್ ಮಂಗಳೂರು 6 ವಾಲ್ಫ್ಯಾನ್ ಗಳನ್ನು ವಜ್ರಮುಷ್ಠಿ ಸಭಾಂಗಣಕ್ಕೆ ಹಸ್ತಾಂತರಿಸಿದರು.
ಶ್ರೀನಿವಾಸ ಚಂದಳಿಕೆ ಇವರು 2 ಸೌಂಡ್ಸ್ ಸಿಸ್ಟಮ್ನ್ನು ಕೂಡ ಶಾಲೆಗೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಸದಸ್ಯರಾದ, ವಿದ್ಯಾಭಿಮಾನಿಗಳಾದ ದಿ. ಕೃಷ್ಣಪ್ಪ ಬೇರಿಕೆ ಇವರ ಸ್ಮರಣಾರ್ಥ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ನಡೆಸಲಾಯಿತು.
ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ರೈ ಕೊಲ್ಯ, ನಿವೃತ್ತ ಶಿಕ್ಷಕರಾದ ನಾರಾಯಣ ಗೌಡ, ಸದಸ್ಯರಾದ ದೇಜಪ್ಪ ಪೂಜಾರಿ ನಿಡ್ಯ, ಶ್ರೀನಿವಾಸ ಪೂಜಾರಿ ಚಂದಳಿಕೆ, ಥರೇಸಾ, ವಿಟ್ಲ ಪಟ್ಟಣ ಪಂಚಾಯತ್ ಕೌನ್ಸಿಲರ್ ರಕ್ಷಿತಾ ಸನತ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುಮತಿ ದೇಜಪ್ಪ, ರೇಖಾ ಕೃಷ್ಣಪ್ಪ ಪೂಜಾರಿ ಬೇರಿಕೆ, ಮುಖ್ಯೋಪಾಧ್ಯಾಯರಾದ ವಿಶ್ವನಾಥ ಗೌಡ ಕುಳಾಲು ವೇದಿಕೆಯಲ್ಲಿದ್ದರು. ವೆಂಕಟೇಶ ಪಿ, ಸೌಮ್ಯ, ರೇಷ್ಮಾ ಲೂವಿಸ್ ವಿವಿಧ ಜವಾಬ್ದಾರಿ ನಿರ್ವಹಿಸಿದರು. ಪ್ರಸನ್ನ ಪಿ ಕಾರ್ಯಕ್ರಮ ನಿರ್ವಹಿಸಿದರು.