ಪುತ್ತೂರು: ಬಲ್ನಾಡು ನಿವಾಸಿಯಾಗಿದ್ದು, ವಿವಾಹಿತರಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಪುಷ್ಪರೇಖಾ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ.
ಪುಷ್ಪರೇಖಾ ಅವರು ರಸಾಯನ ಶಾಸ್ತ್ರ ವಿಭಾಗಕ್ಕೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ಬಿ.ಕೆ. ಸರೋಜಿನಿ ಅವರ ಮಾರ್ಗದರ್ಶನದಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಸಂಶೋಧನ ನಡೆಸಿ ಮಂಡಿಸಿದ ‘ಸ್ಟಡೀಸ್ ಆನ್ ಫ್ಯಾಬ್ರಿಕೇಶನ್,ಕ್ಯಾರೆಕ್ಟರೈಸೇಷನ್ ಆ್ಯಂಡ್ ಓಪ್ಟಿಕಲ್ ಪ್ರಾಪರ್ಟಿಸ್ ಆಫ್ ಡೊಪ್ ಡ್ ಕೈಟೋಸ್ಯಾನ್ ಆ್ಯಂಡ್ ಪುಲ್ಲುಲ್ಯಾನ್ ಕೊಂಪೊಸಿಟ್ ಫಿಲ್ಮ್ಸ್’ ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ಪ್ರದಾನ ಮಾಡಿದೆ.
ಪುಷ್ಪರೇಖಾ ಅವರು ಬಲ್ನಾಡು ನಿವಾಸಿ ಕೊರಗಪ್ಪ ಕುಲಾಲ್ ಮತ್ತು ಇಂದಿರಾ ದಂಪತಿಯ ಪುತ್ರಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಪತಿ ಹೇಮಂತ್ ಕುಮಾರ್ ಕೊಲ್ಯ ರವರೊಂದಿಗೆ ವಾಸವಾಗಿದ್ದಾರೆ.