ಬೆಳ್ತಂಗಡಿ: ಸರಕಾರಿ ಪ್ರೌಢಶಾಲೆಯಿಂದ ಕಂಪ್ಯೂಟರ್, ಯು.ಪಿ.ಎಸ್., ಪ್ರಿಂಟರ್ ಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಖದೀಮರು ಕಳವುಗೈದಿದ್ದಾರೆಂದು ಆರೋಪಿಸಿ ಠಾಣೆಗೆ ದೂರು ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಶಾಲಾ ಮುಖ್ಯೋಪಾಧ್ಯಾಯರು ನೀಡಿರುವ ದೂರಿನಯ್ವ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆಯ ಕೊಠಡಿ ನಂಬ್ರ 4 ರಲ್ಲಿ ಶಾಲೆಗೆ ಸಂಬಂಧಿಸಿದ ಕಂಪ್ಯೂಟರ್ ಮತ್ತು ಅದರ ಯು.ಪಿ.ಎಸ್, ಪ್ರಿಂಟರ್ ಹಾಗೂ ಅದಕ್ಕೆ ಸಂಬಂಧಿಸಿದ ಬ್ಯಾಟರಿಗಳನ್ನು ಮತ್ತು ಯು.ಪಿ.ಎಸ್ ನ ಮೇಲೆ ಇನ್ವರ್ಟರ್ ನ್ನು ಇರಿಸಲಾಗಿತ್ತು. ಜ. 14 ರಂದು ಶನಿವಾರ ಸಂಜೆ ವೇಳೆಗೆ ಸದ್ರಿ ಕೊಠಡಿ ಹಾಗೂ ಶಾಲಾ ಕೊಠಡಿಗಳಿಗೆ ಬೀಗ ಹಾಕಿ ಭದ್ರಪಡಿಸಿ ತೆರಳಿದ್ದು, ಜ.16 ರಂದು ಬೆಳಿಗ್ಗೆ ಶಾಲೆಗೆ ಬಂದ ಶಿಕ್ಷಕರು ಒಬ್ಬರು ಪರಿಶೀಲಿಸಿದಾಗ ಕಂಪ್ಯೂಟರ್ ಕೊಠಡಿಯ ಶೆಟರ್ ಬಾಗಿಲಿಗೆ ಹಾಕಿದ್ದ ಬೀಗಗಳ ಕೊಂಡಿಯನ್ನು ಯಾವುದೋ ಆಯುಧದಿಂದ ತುಂಡರಿಸಿರುವುದು ಕಂಡು ಬಂದಿದ್ದು, ಈ ವೇಳೆ ಮುಖ್ಯ ಶಿಕ್ಷಕರಿಗೆ ಪೋನ್ ಮಾಡಿ ತಿಳಿಸಿ. ಅವರು ಬಂದು ಪರಿಶೀಲಿಸಿ ಸದ್ರಿ ಬಾಗಿಲಿನ ಪಕ್ಕದ ಕಿಟಕಿಯ ಮುಖಾಂತರ ಇಣುಕಿ ನೋಡಿದಾಗ ಕೊಠಡಿಯಲ್ಲಿರುವ ಬ್ಯಾಟರಿಗಳು ಕಳವಾಗಿರುವುದು ಕಂಡು ಬಂದು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ. ಬಾಗಿಲು ತೆರೆದು ನೋಡಿದಾಗ ಕೊಠಡಿ ಒಳಗೆ ಇರಿಸಿದ್ದ ಕಂಪ್ಯೂಟರ್ ಗೆ ಸಂಬಂಧಿಸಿದ ಒಟ್ಟು 16 ಬ್ಯಾಟರಿಗಳು ಮತ್ತು ಅದರ ಪಕ್ಕದಲ್ಲೇ ಇದ್ದ ಯು.ಪಿ.ಎಸ್ ನ ಮೇಲೆ ಇರಿಸಿದ್ದ ಇನ್ವರ್ಟರ್ 1 ಕಳವಾಗಿರುವುದು ಕಂಡು ಬಂದಿದ್ದು, ಸದರಿ ಕೊಠಡಿಯಲ್ಲಿರುವ ಉಳಿದ ಎಲ್ಲಾ ಸೊತ್ತುಗಳು ಯಥಾಸ್ಥಿತಿಯಲ್ಲಿರುತ್ತದೆ. ಕಳವಾದ 16 ಬ್ಯಾಟರಿ ಮತ್ತು ಇನ್ವರ್ಟರ್ ಅಂದಾಜು ಮೌಲ್ಯ 30,000/- ರೂ ಆಗಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ 05/2023 ಕಲಂ: 454,457,380 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ..