ಕಾಸರಗೋಡು: ಕಳ್ಳಾರಿ ನಿಂದ ನಾಪತ್ತೆಯಾಗಿದ್ದ ಯುವಕ-ಯುವತಿ ತೃಶ್ಯೂರಿನ ವಸತಿ ಗೃಹದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ರಾಜಾಪುರ ಕಳ್ಳಾರಿನ ಮುಹಮ್ಮದ್ ಶರೀಫ್(40) ಮತ್ತು ಸಿಂಧು(36) ಮೃತಪಟ್ಟವರು.
ಗುರುವಾಯೂರು ಸಮೀಪದ ವಸತಿ ಗೃಹದಲ್ಲಿ ಮೃತದೇಹಗಳು ಗುರುವಾರ ಸಂಜೆ ಪತ್ತೆಯಾಗಿದೆ. ಬುಧವಾರ ರಾತ್ರಿ ಇಬ್ಬರು ಒಂದು ದಿನಕ್ಕೆ ರೂಂ ಬುಕ್ ಮಾಡಿದ್ದರು.
ಗುರುವಾರ ಸಂಜೆ ತನಕ ರೂಂನ ಬಾಗಿಲು ತೆರೆಯದಿದ್ದುದರಿಂದ ಸಿಬ್ಬಂದಿಗಳು ಗಮನಿಸಿದಾಗ ಇಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಮಹಜರು ನಡೆಸಿದ್ದಾರೆ.
ಜ.7 ರಿಂದ ಸಿಂಧು ನಾಪತ್ತೆಯಾಗಿರುವುದಾಗಿ ಮನೆಯವರು ರಾಜಾಪುರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ..