ಮಂಗಳೂರಿನ ರಥಬೀದಿಯಲ್ಲಿ ವಕೀಲರಾದ ಹರ್ಷಿತ್ ಎ ಎಸ್ ಮತ್ತು ಶ್ರೇಯಸ್ ಎಸ್ ಕೆ ರವರ ನೂತನ ವಕೀಲರ ಕಛೇರಿಯನ್ನು ಉಡುಪಿ ಪಲಿಮಾರು ಮಠದ ಪರಮಪೂಜನೀಯ ಶ್ರೀ ವಿದ್ಯಾಧೀಶತೀರ್ಥ ತೀರ್ಥ ಶ್ರೀಪಾದರು, ಪರಮಪೂಜನೀಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎಸ್ ಪ್ರಕಾಶ್, ಮಂಗಳೂರಿನ ಹಿರಿಯ ವಕೀಲರಾದ ರಾಮಪ್ರಸಾದ್ ಮತ್ತು ಎಂಪಿ ಶೆಣೈ ರವರು ಉದ್ಘಾಟಿಸಿದರು.
ನ್ಯಾಯಾಂಗ ಕ್ಷೇತ್ರ ಭಾರತದ ಅವಿಭಾಜ್ಯ ಅಂಗ ಅದರ ಶಕ್ತಿ ಏನೆಂದು ಅಯೋಧ್ಯ ರಾಮ ಮಂದಿರದ ತೀರ್ಪಿನಲ್ಲಿ ಗೊತ್ತಾಗಿದೆ. ಸಮಾಜದಲ್ಲಿ ಯಾರಿಗೆ ಅನ್ಯಾಯ ಆಗುತ್ತದೆ ಅವರಿಗೆ ನ್ಯಾಯ ಕೊಡಿಸುವುದೇ ನ್ಯಾಯಾವಾದಿಗಳ ಶಕ್ತಿ ಅದನ್ನು ಎಲ್ಲಾ ವಕೀಲರು ಮಾಡಬೇಕೆಂದು ಎಂದು ಸ್ವಾಮೀಜಿ ಹೇಳಿದರು.