ಪುತ್ತೂರು ಕುರಿಯ ಗ್ರಾಮದ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಮತ್ತು ಗುಳಿಗ, ಕಲ್ಲುರ್ಟಿ ಸನ್ನಿಧಿ ಪಡ್ಡುವಿನಲ್ಲಿ ತೃತೀಯ ವರ್ಷದ
ಸ್ವಾಮಿ ಕೊರಗಜ್ಜ ಗುಳಿಗ, ಕಲ್ಲುರ್ಟಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ಗಣಹೋಮ ಆದ ಬಳಿಕ ನೂತನ ಅನ್ನಛತ್ರದ ಉದ್ಘಾಟನೆ ನೆರವೇರಿತು.
ಮಧ್ಯಾಹ್ನ ಅನ್ನಸಂತರ್ಪಣೆ ನಡೆದಿದ್ದು, ಸಂಜೆ ದೈವದ ಭಂಡಾರ ತೆಗೆಯಲಾಯಿತು. ನಂತರ ಗುಳಿಗ ದೈವದ ನೇಮ ಹಾಗೂ ಪ್ರಸಾದ ವಿತರಣೆ ನಡೆಯಿತು.
ಕಾರಿಂಜ ತಂತ್ರಿಗಳಾದ ಕೆ ರಾಘವೇಂದ್ರ ಭಟ್ ಕೊಡಂಬೆಟ್ಟು ಆಗಮಿಸಿ, ಬಳಿಕ ರಾತ್ರಿ ಕಲ್ಲುರ್ಟಿ ದೈವದ ನೇಮ ಹಾಗೂ ಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಿತು.
ರಾತ್ರಿ 9.45ಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಆಗಮಿಸಿ ಗಂಧ ಪ್ರಸಾದ ಸ್ವೀಕರಿಸಿದರು. ನಂತರ ಅನ್ನಸಂತರ್ಪಣೆ ನಡೆದು, ರಾತ್ರಿ 10ರಿಂದ ಕೊರಗಜ್ಜ ದೈವದ ನೇಮೋತ್ಸವ ಹಾಗೂ ಕರಿಗಂಧ ಪ್ರಸಾದ ವಿತರಣೆ ನಡೆಯಿತು.
ಹಲವಾರು ಭಕ್ತರು ನೇಮೋತ್ಸವದಲ್ಲಿ ಭಾಗವಹಿಸಿ ಗಂಧ ಪ್ರಸಾದ ಸ್ವೀಕರಿಸಿದರು.