ವಿಟ್ಲ : ಮಾಣಿಯಲ್ಲಿ ನಡೆದ ಇತ್ತಂಡದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಇತ್ತಂಡದ ಇಬ್ಬರು ಗ್ರಾ.ಪಂ ಸದಸ್ಯರು ಸೇರಿದಂತೆ ಒಟ್ಟು 9 ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಅನಂತಾಡಿ ನಿವಾಸಿ ಈಶ್ವರ ನಾಯ್ಕ ಯಾನೆ ಪ್ರವೀಣ್ ನಾಯ್ಕ(28) ಅವರು ನೀಡಿದ ದೂರಿನಂತೆ ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್, ದೇವಿಪ್ರಸಾದ್, ಹರೀಶ್ ಅವರು ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಕೊಡಾಜೆ ನಿವಾಸಿ ಮಹೇಂದ್ರ (26) ನೀಡಿದ ದೂರಿನ ಮೇರೆಗೆ ಮಂಜುನಾಥ, ರಾಕೇಶ್, ಪ್ರವೀಣ್ ಅನಂತಾಡಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇತ್ತಂಡಗಳ ದೂರಿನಲ್ಲೇನಿದೆ..!!?
ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರವೀಣ್ ಅವರ ಹೇಳಿಕೆ ಪಡೆಯಲಾಗಿದ್ದು, ಬ್ಯಾಂಕ್ ರಿಕವರಿ ಕರ್ತವ್ಯ ನಿರ್ವಹಿಸಿಕೊಂಡು ಸಂಗ್ರಹವಾದ ಹಣದೊಂದಿಗೆ ತನ್ನ ಮೋಟಾರ್ ಸೈಕಲ್ ನಲ್ಲಿ ಮಾಣಿ ಕಡೆಗೆ ಹೊರಟ ವೇಳೆಗೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಪಟ್ಲಕೋಡಿ ಎಂಬಲ್ಲಿ ತಲುಪಿದಾಗ ಪರಿಚಯದ ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್ ರವರು ಬಿಳಿ ಬಣ್ಣದ ಸ್ವೀಫ್ಟ್ ಕಾರು, ಪಿಕ್ ಆಪ್ ಹಾಗೂ ಕೆಂಪು ಬಣ್ಣದ ಬ್ರಿಜಾ ಕಾರಿನಲ್ಲಿ ನಿಂತುಕೊಂಡಿದ್ದು ಪ್ರವೀಣ್ ನನ್ನು ನೋಡಿ ಏಕಾಏಕಿ ಬ್ರಿಜಾ ಕಾರನ್ನು ಚಲಾಯಿಸಿ ಮುಂದಕ್ಕೆ ಹೋಗದಂತೆ ತೆಡೆದು ಆ ಕಾರಿನಿಂದ ದೇವಿ ಪ್ರಸಾದ್ ಎಂಬಾತನು ಇಳಿದು ಬಂದು ಅದೇ ಸಮಯ ಸ್ವಿಫ್ಟ್ ಕಾರಿನಿಂದ ಹರೀಶ್, ದೇವಿ ಪ್ರಸಾದ್ ಎಂಬಾತನು ಇಳಿದು ಬಂದು ಅದೇ ಸಮಯ ಸ್ವಿಫ್ಟ್ ಕಾರಿನಿಂದ ಹರೀಶ್, ಮಹೇಂದ್ರ, ಪ್ರಶಾಂತ, ಚಿರಂಜೀವಿ, ಪ್ರವೀಣ್ ರವರು ಸುತ್ತುವರೆದು ಮಹೇಂದ್ರನು ಪ್ರವೀಣ್ ರ ಬೈಕ್ ಕೀ ಯನ್ನು ಕಸಿದುಕೊಂಡು, ಬೈದು “ಮಂಜು ಮತ್ತು ರಾಕೇಶ್ ಎಲ್ಲಿದ್ದಾರೆ? ಕಾಲರ್ ಪಟ್ಟಿಯನ್ನು ಹಿಡಿದು ಎಲೆಕ್ಷನ್ ಕೌಂಟಿಂಗ್ ದಿನ ಬಾರಿ ದುರಂಹಕಾರ ತೋರಿಸಿದ್ದಿ” ಕೆನ್ನೆಗೆ ಹೊಡೆದು ಮಹೇಂದ್ರನು ಟಿ ಶಾರ್ಟ್ ನ್ನು ಹರಿದು ಹಾಕಿದ್ದು, ಪಿರ್ಯಾದಿಯ ಬೈಕ್ ನಲ್ಲಿದ್ದ 13,000/- ಹಣವಿದ್ದ ಚೀಲವನ್ನು ಪ್ರಶಾಂತ್ ಎಂಬಾತನು ತೆಗೆದನು.
ಆ ಸಮಯ ದೇವಿ ಪ್ರಸಾದನು ಪ್ರವೀಣ್ ರ ಬೆನ್ನಿಗೆ ಕೈಯಿಂದ ಹೊಡೆದು ನೆಲಕ್ಕೆ ದೂಡಿದ್ದು, ಚಿರಂಜೀವಿ ಎಂಬಾತನು ಕುತ್ತಿಗೆಯ ಹಿಂಭಾಗ ಗುದ್ದಿದ್ದು, ಅಲ್ಲೆ ಇದ್ದ ಪಿಕ್ ಆಪ್ ನಿಂದ ರಾಡ್ ನ್ನು ತೆಗೆದು ತಲೆಗೆ ಹೊಡೆದು ಕೊಲ್ಲಲು ಬಂದಾಗ ತಪ್ಪಿಸಿಕೊಂಡು ಆದೇ ಸಮಯ ಪ್ರವೀಣ್ ಮತ್ತು ಇತರರು ಅವಾಚ್ಯ ಶಬ್ದಗಳಿಂದ ಬೈದು ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ದೂಡಿ ಹಾಕಿ ಪ್ರಶಾಂತ್ ನು ನಿನ್ನ ಹಣವನ್ನು ನಿನ್ನ ಬೊಜ್ಜದ ಖರ್ಚಿಗೆ ಕೊಡುತ್ತೇನೆ ಎಂದು ಹೇಳಿಹೋಗಿದ್ದು, ಪ್ರವೀಣ್ ತನ್ನ ಗೆಳೆಯ ವಿವೇಕ್ ನಿಗೆ ವಿಷಯ ತಿಳಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನೊಂದು ತಂಡದ ದೂರು :
ಮೇ.24 ರಂದು ಮಹೇಂದ್ರ ರವರು ಸಹೋದರಿಯ ಆಕ್ಟೀವಾ ಹೊಂಡಾದಲ್ಲಿ ಮಾಣಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಿಂದ ಅಡವಿಟ್ಟ ಚಿನ್ನದ ಸರ ಬಿಡಿಸಿ ತನ್ನ ಬಾಬ್ತು ಸ್ಕೂಟರ್ ನಲ್ಲಿ ಪುತ್ತೂರು-ಬಂಟ್ವಾಳ ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್ ನಲ್ಲಿರುವ ನಾಗರಾಜ್ ಫೈನಾನ್ಸ್ ಕಛೇರಿಯ ಮುಂಭಾಗ ತಲುಪಿದಾಗ ರಸ್ತೆಯ ಬದಿ ನಾಗುವಿನ ಸಹಚರರೊಬ್ಬರು ತಲವಾರು ಬೀಸಿದಾಗ ತಪ್ಪಿಸಿಕೊಂಡು ಬುಡೋಳಿ ಕಡೆಗೆ ಹೋಗುತ್ತಿರುವ ವೇಳೆ ಮಾಣಿ ಜಂಕ್ಷನ್ ನಲ್ಲಿ ಸ್ಕೂಟರ್ ಗೆ ಹಿಂದಿನಿಂದ ವಾಹನವೊಂದನ್ನು ಡಿಕ್ಕಿಪಡಿಸಿ ಮಹೇಂದ್ರ ರಸ್ತೆಗೆ ಬಿದ್ದಾಗ ಡಿಕ್ಕಿ ಹೊಡೆದ ಓಮ್ನಿ ಕಾರೊಂದರಿಂದ ರಾಕೇಶ್, ಮಂಜುನಾಥ್ ಕೈ ಯಲ್ಲಿ ಕ್ರಿಕೇಟ್ ಬ್ಯಾಟ್ ಹಿಡಿದುಕೊಂಡು ಬಂದು ರಾಕೇಶ್ ವಿಕೇಟ್ ನಿಂದ ಮುಖಕ್ಕೆ,ತಲೆಗೆ ಹೊಡೆದಿದ್ದು, ಮಂಜುನಾಥ್ ಬ್ಯಾಟ್ ನಿಂದ ಕಾಲಿಗೆ ಮತ್ತು ತಲೆಗೆ ಹೊಡೆದಿದ್ದು ಅವರೊಂದಿಗೆ ಇದ್ದ ಅನಂತಾಡಿ ಪ್ರವೀಣ್ ಕೂಡ ವಿಕೆಟ್ ನಿಂದ ತಲೆಗೆ ಹೊಡೆದಿದ್ದು, ಮಂಜುನಾಥನ ಕೈಯಲ್ಲಿದ್ದ ವಿಕೇಟ್ ತುಂಡಾದ ಬಳಿಕ ಇತರರ ಕೈಯಿಂದ ಕಬ್ಬಿಣದ ರಾಡ್ ತೆಗೆದು ಹಣೆಗೆ ಹೊಡೆದು ಮಹೇಂದ್ರನ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಎಳೆದು ನೀನು ಬಾರಿ ಜಿಜೆಪಿಯಲ್ಲಿ ಕೆಲಸ ಮಾಡುತ್ತೀಯಾ ಎಂದು ಹೇಳಿ.., ಅವರೆಲ್ಲರೂ ಬಂದ ಓಮ್ನಿ ಕಾರಿನಲ್ಲಿ ಹೋಗುತ್ತಿರುವ ವೇಳೆ ನಿನ್ನನ್ನು ಇನ್ನು ಮುಂದೆಯಾದರು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಹೋಗಿದ್ದು, ಕಾಂಗ್ರೆಸ್ ಕಾರ್ಯಕರ್ತರಾದ ರಾಕೇಶ್, ಮಂಜುನಾಥ್, ರಾಜೇಶ್ ಮತ್ತು ಇತರರು ಕೊಲ್ಲುವ ಉದ್ದೇಶದಿಂದ ತಲವಾರು ಬೀಸಿ, ವಿಕೇಟ್, ಬ್ಯಾಟ್, ಕಬ್ಬಿಣದ ರಾಡ್ ನಿಂದ ಹೊಡೆದು ಕತ್ತಿನಿಂದ ಚಿನ್ನದ ಸರವನ್ನು ಕಸಿದುಕೊಂಡು ಹೋಗಿರುವುದಾಗಿದೆ ದೂರಿನಲ್ಲಿ ತಿಳಿಸಿದ್ದಾರೆ.