ಪುತ್ತೂರು:ವಿಧ ವಿಧ ವಿನ್ಯಾಸದ ಮಾರ್ಬಲ್ಗಳು , ಸುಂದರವಾಗಿ ಕಂಗೊಳಿಸುವ ಗ್ರಾನೈಟ್ಗಳು,ಕ ನವಿರಾಗಿ ಅಕರ್ಷಿಸುವ ಇಟಾಲಿಯನ್ ವಿಟ್ರಿಫೈಡ್ ಟೈಲ್ಸ್ಗಳು , ಸಹಜ ಸ್ವಾಭಾವಿಕ ಸೌಂದರ್ಯದೊಡನೆ ಗಮನಸೆಳೆಯುವ ನ್ಯಾಚುರಲ್ ಸ್ಟೋನ್ಗಳು….ಹೀಗೆ ಸುಂದರವಾದ ಕನಸಿನ ಮನೆ, ಕನಸಿನ ಮಳಿಗೆಗೆ ಅತೀ ಅಗತ್ಯವಾಗಿ ಬೇಕೆನಿಸುವ ಈ ಎಲ್ಲಾ ಉತ್ಪನ್ನಗಳಿಗಾಗಿ ನೂತನವಾದ ವಿಸ್ತೃತ ಮಳಿಗೆಯೊಂದು ಶುಭಾರಂಭಗೊAಡಿದೆ..ಫಳಫಳನೆ ಹೊಳೆಯುತ್ತಾ , ಮನೆ ಪಾಲಿನ ಸೌಂದರ್ಯತೆಯ ಉತ್ಪನ್ನ ಎಲ್ಲರನ್ನೂ ತನ್ನತ್ತ ಕೈ ಬೀಸಿ ಕರೆಯುವಂತಿದೆ
![](https://zoomintv.online/wp-content/uploads/2020/10/WhatsApp-Image-2020-10-30-at-3.14.38-PM.jpeg)
![](https://zoomintv.online/wp-content/uploads/2020/10/WhatsApp-Image-2020-10-30-at-3.26.00-PM.jpeg)
ಕಳೆದ ನಾಲ್ಕು ವರ್ಷಗಳಿಂದ ಪುತ್ತೂರಿನ ಪುರುಷರಕಟ್ಟೆಯಲ್ಲಿ ತನ್ನದೇ ಆದ ಶೈಲಿಯಲ್ಲಿ ಅತ್ಯುತ್ತöಮ ಗುಣಮಟ್ಟದೊಡನೆ ಸೇವೆಗೈಯುತ್ತಿರುವ ಅಜಯ್ ಮಾರ್ಬಲ್ಸ್ ಇದೀಗ ದರ್ಬೆಯ ಬೈಪಾಸ್ ಸರ್ಕಲ್ನಲ್ಲಿರುವ ಆರಾಧ್ಯ ಆರ್ಕೇಡ್ನಲ್ಲಿ ಸಂಪೂರ್ಣ ವ್ಯವಸ್ಥೆಗಳೊಡನೆ ತನ್ನ ಎರಡನೇ ಶಾಖೆಯನ್ನು ತೆರೆದುಕೊಂಡಿದೆ. ಯಾವುದೇ ರೀತಿಯ ನವನವೀನ ಮಾದರಿಯ ಟೈಲ್ಸ್ಗಳು, ಗ್ರಾನೈಟ್ಗಳು, ಮಾರ್ಬಲ್ಸ್ಗಳು ಇಲ್ಲಿ ಗುಣಮಟ್ಟದ ಸೇವಾ ಭರವಸೆಯೊಡನೆ ಕೈಗೆಟುಕಲಿದ್ದು , ಈ ಪ್ರಯುಕ್ತ ಅರವಿಂದ್ ಸಿಂಗ್ ಮಾಲಕತ್ವದ ಅಜಯ್ ಮಾರ್ಬಲ್ಸ್ ಮಳಿಗೆಯ ಶುಭರಂಭ ಕಾರ್ಯಕ್ರಮವು ನಡೆಯಿತು. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರöಮಕ್ಕೆ ಚಾಲನೆ ನೀಡಿದರು. ಈ ವೇಳೆ ಹೋಟೆಲ್ ಅಶ್ವಿನಿ ಮತ್ತು ಆರಾಧ್ಯ ಆರ್ಕೇಡಿನ ನಿರ್ದೇಶಕರು ಎನ್.ಕರುಣಾಕರ್ ರೈ, ಸಚ್ಚಿದಾನಂದ, ಪದ್ಮಶ್ರೀ ಸೋಲಾರ್ಸ್ನ ಮಾಲಕ ಸೀತಾರಾಮ್ ರೈ ಕೆದಂಬಾಡಿಗುತ್ತು, ಅಶ್ವಿನ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಉಪಸ್ಥಿತರಿದ್ದರು
![](https://zoomintv.online/wp-content/uploads/2020/10/WhatsApp-Image-2020-10-30-at-3.14.39-PM.jpeg)
![](https://zoomintv.online/wp-content/uploads/2020/10/WhatsApp-Image-2020-10-30-at-3.14.38-PM-1.jpeg)