ಪುತ್ತೂರಿನಲ್ಲಿ ಕಳೆದ ಕೆಲ ತಿಂಗಳ ಹಿಂದೆ ಆರಂಭವಾಗಿರುವ ಝೂಮ್ ಇನ್ ಟಿವಿ ಯು ಇದೀಗ ಮತ್ತೊಂದು ನೂತನ ಹೆಜ್ಜೆಯನ್ನು ಮುಂದೆ ಇಟ್ಟಿದೆ. ಈಗಾಗಲೇ ಹಲವು ವಾರ್ತೆ, ಮನೋರಂಜನಾ ಕಾರ್ಯಕ್ರಮಗಳು, ವಿಶೇಷ ಕಾರ್ಯಕ್ರಮಗಳ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿರುವ ಸಂಸ್ಥೆಯು ನೂತನ ವೆಬ್ ಸೈಟ್ ಮುಖೇನ ಜನಮನಗಳನ್ನು ಸೋಶಿಯಲ್ ಮೀಡಿಯಾ ಮುಖೇನವೂ ಮತ್ತಷ್ಟು ತಲಪಲು ಅಣಿಯಾಗಿದೆ.
![](https://zoomintv.online/wp-content/uploads/2020/11/web01-1024x576.jpg)
ಇವತ್ತಿನ ವಿದ್ಯಮಾನದಲ್ಲಿ ಎಲ್ಲಾ ವಿಚಾರಗಳಿಗಿಂತಲೂ ವೇಗವಾದ ಮಾಧ್ಯಮವೇ ಸಾಮಾಜಿಕ ಜಾಲತಾಣಗಳು. ಅದರಲ್ಲಿಯೂ ಇವತ್ತು ಎಲ್ಲರೂ ತಮ್ಮ ಒತ್ತಡದ ಬದುಕಿನ ನಡುವೆ ವಿಚಾರ ವಿನಿಮಯಗಳಿಗಾಗಿ ಸಾಮಾಜಿಕ ಜಾಲತಾಣಗಳನ್ನೇ ವೇದಿಕೆಯನ್ನಾಗಿಸಿಕೊಂಡಿದ್ದಾರೆ. ವಾರ್ತೆಗಳು ಶೀಘ್ರಗತಿಯಲ್ಲಿ ಮನೆ-ಮನೆಗಳಿಗೆ ತಲುಪುತ್ತಿದೆ. ಅದರಲ್ಲೂ ವೆಬ್ ಸೈಟ್ಗಳು ವಾರ್ತಾ ಬಿತ್ತರಕ್ಕೆ ಸೂಕ್ತ ಮಾಧ್ಯಮವಾಗಿ ತೆರೆದುಕೊಂಡಿದೆ. ನೂತನ ವೆಬ್ಸೈಟ್ನಲ್ಲೂ ವಾರ್ತೆ, ಕ್ರೀಡೆ, ಪ್ರಾದೇಶಿಕ ವಾರ್ತೆಗಳು, ಶಿಕ್ಷಣ, ಸಿನಿಮಾ, ಲೇಖನಗಳು, ವಿಜ್ಞಾನ ತಂತ್ರಜ್ಞಾನ ಮಾಹಿತಿಗಳು ಹೀಗೆ ಪ್ರಸ್ತುತ ವಿದ್ಯಮಾನಕ್ಕೆ ಸಂಬAಧಿಸಿದAತೆ ಎಲ್ಲಾ ರೀತಿಯ ವಿಚಾರಗಳನ್ನೂ ಪ್ರಸಾರಿಸಿ, ಇದರ ಜತೆಗೆ ಜಾಹೀರಾತುಗಳ ಮುಖೇನವೂ ತೆರೆದುಕೊಳ್ಳಲಿದೆ.
![](https://zoomintv.online/wp-content/uploads/2020/11/web03-1024x576.jpg)
ಈ ಪ್ರಯುಕ್ತ ವೆಬ್ ಸೈಟ್ ಚಾಲನೆ ಕಾರ್ಯಕ್ರಮವು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಬಿಲ್ಲವ ಸಂಘ ಪುತ್ತೂರಿನ ಅಧ್ಯಕ್ಷ ಶ್ರೀ ಜಯಂತ್ ನಡುಬೈಲು ದೀಪ ಪ್ರಜ್ವಲಿಸಿ ವಿದ್ಯುಕ್ತ ಚಾಲನೆ ನೀಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ. ಸಂಜೀವ ಮಠಂದೂರು ವೆಬ್ ಸೈಟ್ ಚಾಲನೆ ಮಾಡಿದರು,. ಈ ವೇಳೆ ಕಾರ್ಯಕ್ರಮದಲ್ಲಿ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಮಾಲಕರಾದ ಶ್ರೀ ಪ್ರಸನ್ನ ಕುಮಾರ್ ಶೆಟ್ಟಿ, ಬಂಟರ ಸಂಘ ಪುತ್ತೂರಿನ ಅಧ್ಯಕ್ಷರಾದ ಶ್ರೀ ಬೂಡಿಯಾರ್ ರಾಧಾಕೃಷ್ಣ ರೈ, ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಶಶಿಕುಮಾರ್ ರೈ ಬಾಲ್ಯೊಟ್ಟು,ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಶ್ರೀ ರವಿ ಕಕ್ಕೆಪದವು, ಪುತ್ತೂರಿನ ಪದ್ಮಶ್ರೀ ಸೋಲರ್ಸ್ ಮಾಲಕರಾದ ಶ್ರೀ ಸೀತಾರಾಮ ರೈ ಕೆದಂಬಾಡಿಗುತ್ತು, ಎಪಿಎಂಸಿ ಪುತ್ತೂರು ಅಧ್ಯಕ್ಷರಾದ ಶ್ರೀ ದಿನೇಶ್ ಮೆದು ಮತ್ತಿತರರು ಉಪಸ್ಥಿತರಿದ್ದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.
![](https://zoomintv.online/wp-content/uploads/2020/11/WhatsApp-Image-2020-11-10-at-7.18.17-PM-1024x586.jpeg)